ವಿಚಕ್ಷಣಾ ದಳ ದಾಳಿ: ಓರ್ವನ ಮೇಲೆ ಪ್ರಕರಣ ದಾಖಲು
Vigilance team attack: Case registered against one person
ಅಥಣಿ, 16 ; ಸರಕಾರಿ ಎಮ್.ಎಸ್.ಐ.ಎಲ್ ಪಕ್ಕದಲ್ಲಿಯೇ ಅಕ್ರಮವಾಗಿ ಗೋವಾ ರಾಜ್ಯದ ಮಧ್ಯವನ್ನು ವಿಶೇಷ ವಿಚಕ್ಷಣಾ ದಳದ ಸಿಬ್ಬಂದಿ ದಾಳಿ ಮಾಡಿ ವಶಪಡಿಸಿಕೊಂಡು ಓರ್ವನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಕಟನೂರ ರಸ್ತೆಯಲ್ಲಿರುವ ಬುರ್ಲಟ್ಟಿ ರೇಣುಕಾ ಸಕ್ಕರೆ ಕಾರಖಾನೆಯ ಹತ್ತಿರ ಇರುವ ಬುರ್ಲಟ್ಟಿಯ ಎಮ್.ಎಸ್.ಐ.ಎಲ್ ಪಕ್ಕದಲ್ಲಿರುವ ಅಂಗಡಿ ಮಾಲಿಕ ವಿಠ್ಠಲ್ ಲಕ್ಷ್ಮಣ ಹುದ್ದಾರ ಕಿರಾಣಿ ಅಂಗಡಿಯಲ್ಲಿ ಗೋವಾ ರಾಜ್ಯದ ವಿವಿಧ ಕಂಪನಿಗಳ 180 ಎಮ್.ಎಲ್ ನ 12 ಬಾಟೆಲ್ ಗಳು, ಕರ್ನಾಟಕ ರಾಜ್ಯದ 90. ಎಮ್.ಎಲ್.ನ 30 ಟೆಟ್ರಾ ಪ್ಯಾಕಗಳು ಒಟ್ಟು 42 ಮಧ್ಯದ ಬಾಟೆಲ್ ಗಳನ್ನು ಅಂಗಡಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ವಿಚಕ್ಷಣ ದಳದ ಅಧಿಕಾರಿ ರಾಜು ಗೊಂಡೆ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಅಬಕಾರಿ ಅಧಿಕಾರಿಗಳ ನಿರ್ಲಕ್ಷ-ಅನೇಕ ವರ್ಷಗಳಿಂದ ಸರಕಾರಿ ಎಮ್.ಎಸ್.ಐ.ಎಲ್ ಅಂಗಡಿಗೆ ಹೊಂದಿಕೊಂಡಿರುವ ಕಿರಾಣಿ ಅಂಗಡಿಯಲ್ಲಿ ಗೋವಾ ರಾಜ್ಯದ ಮಧ್ಯ ಮಾರಾಟ ಮಾಡುತ್ತಿದ್ದರೂ ಕೂಡ ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ. ಅಧಿಕಾರಿಗಳ ಈ ನಿರ್ಲಕ್ಷದಿಂದ ಅಬಕಾರಿ ಆದಾಯಕ್ಕೆ ಹೊಡೆತ ಬಿದ್ದಂತಾಗಿದ್ದು, ಇಂತಹ ಅಧಿಕಾರಿಗಳ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ದಾಳಿಯಲ್ಲಿ ಚಿಕ್ಕೋಡಿ ವಿಚಕ್ಷಣಾ ದಳದ ಹುಸೇನಸಾಬ ನದಾಫ, ಶಾಂತಿನಾಥ ನಾಗುರಾಮ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 