ಹಿರಿಯ ಸಾಹಿತಿ ಕೆರೆಪ್ಪಗೋಳ ಅವರ 11ನೇ ಕೃತಿ ಬಿಡುಗಡೆ
Veteran writer Kereppagola's 11th work released
ದೇವರಹಿಪ್ಪರಗಿ 02: ಸಾಹಿತ್ಯ ಕೃಷಿ ಮಾಡಲು ಬಡ ಸಾಹಿತಿಯಾಗಿ ಸಾಹಿತ್ಯಿಕ ಪುಸ್ತಕಗಳ ಪ್ರಕಟಣೆಗಾಗಿ ಭಿಕ್ಷಾಪಾತ್ರೆಯನ್ನು ಹಿಡಿದಾಗ ತಾವೆಲ್ಲರೂ ನನಗೆ ಅಕ್ಷಯಪಾತ್ರೆಯಂತೆ ಆಸರೆಯಾಗಿದ್ದೀರಿ ಎಂದು ತಾಲ್ಲೂಕಿನ ಹಿರಿಯ ಸಾಹಿತಿ ಹಾಗೂ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಸಂಗಮೇಶ ಕೆರೆಪ್ಪಗೋಳ ಹೇಳಿದರು. ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಲವಕುಶ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ತಮ್ಮ 11 ನೇ ಕೃತಿಯಾದ ಶೀಲ ತಂದ ಸಾವು ಎಂಬ ನಾಟಕ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ತಾ.ಪಂ ಪ್ರಭಾರಿ ಸಹಾಯಕ ನಿರ್ದೇಶಕ ಶಿವಾನಂದ.ವಿ.ಮೂಲಿಮನಿ ಹಾಗೂ ಮಾರ್ಕಬ್ಬಿನಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಡಾ.ಜಕ್ಕಪ್ಪ.ಪೂ. ಹಿರೇಕುರುಬರ ಅವರುಗಳು ಇವರ ಈ 11 ನೇ ಕೃತಿಯ ಬಿಡುಗಡೆಗೆ ಸಹಾಯ ಹಸ್ತವನ್ನು ಒದಗಿಸಿರುತ್ತಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ಕೆರೆಪ್ಪಗೋಳರ ನೂತನ ಕೃತಿಯನ್ನು ಲೋಕಾರೆ್ಣ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಗನಗೌಡ ಪಾಟೀಲ ಚಬನೂರ, ವೆಂಕನಗೌಡ ಮೂಲಿಮನಿ, ಡಾ.ಜಕ್ಕಪ್ಪ. ಹಿರೇಕುರುಬರ, ಸಿ.ಆರ್.ಪಾಟೀಲ, ಆಯ್.ಎಲ್.ಶಾಬಾದಿ, ಎಸ್.ಕೆ.ಪಟೇದ, ಸಿ.ಕೆ.ಕಿರಣಗಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 