ಸವಣೂರ ವಕೀಲರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ

ಸವಣೂರ ವಕೀಲರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ  Unopposed election of office bearers to the Savanoor Bar Association

ಸವಣೂರ 15: ಸವಣೂರ ವಕೀಲರ ಸಂಘ(ರಿ)ಕ್ಕೆ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ವ್ಹಿ.ಬಿ ತುರಕಾಣಿ, ಉಪಾಧ್ಯಕ್ಷರಾಗಿ ಎನ್‌.ಎಸ್ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾಗಿ ಸಿ.ಬಿ ಪಾಟೀಲ, ಸಹಕಾರ್ಯದರ್ಶಿಗಳಾಗಿ ಪಿ.ಬಿ.ಹಳ್ಳಾಕಾಯಿ, ಖಜಾಂಚಿಗಳಾಗಿ ಕು.ಎಮ್‌.ಎನ್ ರಡ್ಡೇರ ಹಾಗೂ ಹಿರಿಯ ಕಮೀಟಿಯ ಸದಸ್ಯರಾಗಿ ಡಿ.ಎಸ್ ಸಣ್ಣಪೂಜಾರ, ವ್ಹಿ.ಬಿ.ಬಿಜ್ಜೂರ, ಎಸ್‌.ವ್ಹಿ ಪಾಟೀಲ, ಎಮ್‌.ಎಮ್ ಪಾಟೀಲ, ಎಸ್‌.ಎಸ್ ಕೆರಿಯವರ ಆಯ್ಕೆಯಾದರು. 

ನೂತನ ಪದಾಧಿಕಾರಿಗಳಿಗೆ ಸವಣೂರ ವಕೀಲರ ಬಳಗದಿಂದ ಶುಭ ಕೋರಿ ಗೌರವಿಸಿ ಸನ್ಮಾನಿಸಲಾಯಿತು. ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆ ಮಾಡಲು ಸಹಕಾರ ನೀಡಿದ ಎಲ್ಲ ವಕೀಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸವಣೂರ ವಕೀಲರ ಬಳಗದವರು ಪಾಲ್ಗೊಂಡಿದ್ದರು.