ಯು.ಟಿ.ಖಾದರ್ ಫರೀದ್ ಅವರ ಬಳ್ಳಾರಿ ಜಿಲ್ಲಾ ಪ್ರವಾಸ

ಯು.ಟಿ.ಖಾದರ್ ಫರೀದ್ ಅವರ ಬಳ್ಳಾರಿ ಜಿಲ್ಲಾ ಪ್ರವಾಸ U.T. Khader Farid's tour of Bellary district

           ಬಳ್ಳಾರಿ 10 :ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು ಡಿ.14 ರಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಿಗ್ಗೆ 09.50 ಗಂಟೆಗೆ ಬೆಂಗಳೂರಿನಿಂದ ಹೊರಟು, ಬೆಳಿಗ್ಗೆ 10.40 ಕ್ಕೆ ಸಂಡೂರಿನ ತೋರಣಗಲ್ಲಿನ ಜಿಂದಾಲ್ ಏರ್‌ಪೋರ್ಟ್‌ ಗೆ ಆಗಮಿಸಿ, ಜಿಂದಾಲ್ ಗೆಸ್ಟ್‌ ಹೌಸ್ ನಲ್ಲಿ ವಾಸ್ತವ್ಯ ಮಾಡುವರು. 

ಬಳಿಕ ಮಧ್ಯಾಹ್ನ 03 ಗಂಟೆಗೆ ಅಲ್ಲಿಂದ ಹೊರಟು ಸಂಜೆ 04 ಗಂಟೆಗೆ ಕುರುಗೋಡು ಪಟ್ಟಣಕ್ಕೆ ಆಗಮಿಸುವರು. ಪಟ್ಟಣದಲ್ಲಿ ಏರಿ​‍್ಡಸಿರುವ 4ನೇ ಉರ್ಸ್‌-ಎ-ಷರೀಫ್ ಹಜರತ್ ಖ್ವಾಜಾ ಸೈಯದ್ ಶಾ ಸಾಹಿಬ್ ಪೀರ್ ಥೇರ್ ಉರ್ಸ್‌-ಎನೀರೀಫ್ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಂಜೆ 05 ಗಂಟೆಗೆ ಧಾರವಾಡಕ್ಕೆ ಪ್ರಯಾಣಿಸುವರು ಎಂದು ಆಪ್ತ ಕಾರ್ಯದರ್ಶಿಯವರು ತಿಳಿಸಿದ್ದಾರೆ.