ತೋಳದ ದಾಳಿಗೆ ಎರಡು ಕುರಿಗಳು ಬಲಿ: ಮಹಿಳೆ ಕಂಗಾಲು
Two sheep killed in wolf attack: Woman distraught
ಇಂಡಿ 30: ರೈತ ಈ ದೇಶದ ಬೆನ್ನೆಲುಬು ರೈತರು ತನ್ನ ದೈನಂದಿಕ ಜೀವನಕ್ಕಾಗಿ ವ್ಯವಸಾಯದ ಜೊತೆಗೆ ಮತ್ತೊಂದು ಕಸುಬು ಮಾಡಿದ್ದಾಗ ಮಾತ್ರ ಜೀವನ ಸಾಗುತ್ತದೆ.ಆದರೆ ಆ ವಿಧಿ ಆಟದಿಂದ ರೈತನ ಕನಸು ನೂಚ್ಚು ನೂರಾಗಿ ಬದುಕು ಮೂರಾಬಟ್ಟೆ ಆಗುತ್ತದೆ ಎಂಬೂವುದಕ್ಕೆ ಈ ಘಟನೆ ಉದಾಹರಣೆ ಹೌದು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ನಿನ್ನೆ ಮಧ್ಯಾಹ್ನ 01-00 ಗಂಟೆ ಸುಮಾರಿಗೆ ಎರಡು ತೋಳಗಳು ಬಡ ರೈತನಿಗೆ ಸೇರಿದ ಕುರಿಗಳ ದೊಡ್ಡಿಗೆ ಹೊಕ್ಕು ಎರಡು ಕುರಿಗಳನ್ನು ಕೊಂದು ಹಾಕಿವೆ,ಈ ಕುರಿಗಳು ತಡವಲಗಾ ಗ್ರಾಮದ ಬಸವರಾಜ ಸಂಗಪ್ಪ ಜಾಡರ ಎಂಬುವರಿಗೆ ಸೇರಿದ ಕುರಿಗಳ ಎಂದು ತಿಳಿದುಬಂದಿದೆ. ರೈತ ಬಸಪ್ಪ ಜಾಡರ ಹಾಗೂ ಪತ್ನಿ ಶಶಿಕಲಾ ಅವರು ಕುರಿಗಳನ್ನು ದೊಡ್ಡಿಯಲ್ಲಿ ಕಟ್ಟಿ ಬೇರೆಯವರ ತೋಟಕ್ಕೆ ಕೆಲಸಕ್ಕೆ ಹೋಗಿದ್ದಾರೆ.
ಮನೆಯಲ್ಲಿ ಸುಮಾರು ಎಂಬತ್ತು ವರ್ಷ ವಯಸ್ಸಿನ ಅಜ್ಜಿಯನ್ನು ಬಿಟ್ಟು ಕೆಲಸಕ್ಕೆ ಹೋಗಿದ್ದಾರೆ.ಆದರೆ ಮದ್ಯಾಹ್ನ ಒಂದುವರೆ ಸುಮಾರಿಗೆ ಎರಡು ತೋಳಗಳು ದೊಡ್ಡಿಯಲ್ಲಿ ಕಟ್ಟಿದ ಎರಡು ಕುರಿಗಳನ್ನು ಕೊಂದು ಹಾಕಿವೆ.ಈ ಸಪ್ಪಳ ಕೇಳಿದ ಅಜ್ಜಿ ಹೋರಗಡೆ ಬರುತ್ತಿದ್ದಂತೆ ತೋಳಗಳು ಓಡಿ ಹೋಗಿ ಇದನ್ನು ಕಂಡ ಅಜ್ಜಿ ಚಿರಲು ಪ್ರಾರಂಬಿಸಿದ್ದಾಳೆ.ನಂತರ ನೆರೆ ಹೊರೆ ಬರುವಷ್ಟರಲ್ಲಿ ಎರಡು ಕುರಿಗಳನ್ನು ದೊಡ್ಡಿಯಲ್ಲಿ ಸತ್ತು ಹೋಗಿವೆ.ಈ ಸುದ್ದಿ ತಿಳಿದು ಇಂಡಿ ಗ್ರಾಮೀಣ ಅರಣ್ಯ ಇಲಾಖೆಯ ತಡವಲಗಾ ಬಿಟ್ ಪ್ರವೀಣಕುಮಾರ ಹಚ್ಚಾಳಕರ್ ಹಾಗೂ ತಡವಲಗಾ ಗ್ರಾಮ ಆಡಳಿತ ಅಧಿಕಾರಿ ಮಾಹಾತೇಶ ಗುರುಭೆಟ್ಟಿ ಹಾಗೂ ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪಂಚನಾಮೆ ಮಾಡಿದ್ದಾರೆ.ಕುರಿ ಕಳೆದುಕೊಂಡ ನೊಂದ ಮಹಿಳೆ ಶಶಿಕಲಾ ಬಸವರಾಜ ಜಾಡರ ಅವರು ಮಾತನಾಡಿ ಕಡು ಬಡತನದ ಮಧ್ಯೆಯೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಮೂವತ್ತು ಸಾವಿರ ಸಾಲ ಪಡೆದು ಕುರಿಗಳನ್ನು ಖರೀದಿ ಮಾಡಿದೆ ಜೀವನ ಸಾಗಿಸುತ್ತಿದ್ದೆ ಎಂದು ತಮ್ಮ ಅಳಲು ತೋಡಿಕೊಂಡಳು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 