ಶಿಕ್ಷಣ ಪರಿಪೂರ್ಣತೆಗೆ ಟುಟೋರಿಯಲ್ಸ್ಗಳು ಶ್ರಮಿಸಬೇಕು- ಡಾ. ರಾಜಶೇಖರ್ ಚಕ್ಕಿ
Tutorials should strive for educational perfection - Dr. Rajashekhar Chakki
ಶಿಕ್ಷಣ ಪರಿಪೂರ್ಣತೆಗೆ ಟುಟೋರಿಯಲ್ಸ್ಗಳು ಶ್ರಮಿಸಬೇಕು- ಡಾ. ರಾಜಶೇಖರ್ ಚಕ್ಕಿ
ರಾಣೇಬೆನ್ನೂರು 05: ಯಾವುದೇ ಟ್ಯೂಷನ್ ಕ್ಲಾಸ್ಗಳಿರಲಿ ಅವರು ಅಲ್ಲಿ ಬರುವ ವಿದ್ಯಾರ್ಥಿಗಳ ಅಂತ:ಶಕ್ತಿಯನ್ನು ಪರಿಗಣಿಸಿ ಕ್ಲಾಸ್ಗಳು ಮಾಡಿದಾಗ ಮಾತ್ರ ಅವರೆಲ್ಲರ ಪ್ರೀತಿ, ವಿಶ್ವಾಸ, ಅಭಿಮಾನ ಗಳಿಸಲು ಸಾಧ್ಯವಾಗುವುದು ಎಂದು ಡಾ. ರಾಜಶೇಖರ್ ಚಕ್ಕಿ ಹೇಳಿದರು. ಅವರು ಇಲ್ಲಿನ ಶ್ರೀ ಆದಿಶಕ್ತಿ ದೇವಸ್ಥಾನದ ಆಧ್ಯಾತ್ಮ ಮಂದಿರದಲ್ಲಿ, ಚಕ್ಕಿ ಟ್ಯುಟೋರಿಯಲ್ಸ್ ಹಳೆಯ ವಿದ್ಯಾರ್ಥಿಗಳ ಅಭಿಮಾನಿ ಬಳಗ, ಆಯೋಜಿಸಿದ್ದ ಸಂಸ್ಥೆಯ ಬೆಳ್ಳಿ ಹಬ್ಬ ಮತ್ತು ಗುರು ಶಿಷ್ಯರ ಸಮಾಗಮ -2025 ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಮ್ಮ ಸಂಸ್ಥೆ ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಅವರಲ್ಲಿರುವ ಅಂತ:ಶಕ್ತಿ ಪುನರ್ ಮೌಲ್ಯಗಳ ಪರಿಚಾರಕರಾಗಿ ಸೇವೆ ಸಲ್ಲಿಸಿದೆ. ಹಣ ಗಳಿಸುವ ಉದ್ದೇಶ ನನ್ನದಾಗಿರಲಿಲ್ಲ ಜನಸಾಮಾನ್ಯರು ಸಹ ಇಲ್ಲಿ ಟ್ಯೂಷನ್ ಪಡೆಯಬೇಕು, ಸಮಾಜದಲ್ಲಿ ಅಪ್ರತಿಮ ಶೈಕ್ಷಣಿಕ ಸಾಧನೆ ಮಾಡಬೇಕು ಎನ್ನುವ ಏಕೈಕ ಹಂಬಲ ನನ್ನದಾಗಿತ್ತು. ಇದರ ಪರಿಣಾಮ(1995-2009 ರವರೆಗೆ ) ಹತ್ತಾರು ಸಾವಿರ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ಪ್ರಬುದ್ಧತೆ ಮೆರೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ರಾಜಶೇಖರ್ ಚಕ್ಕಿ ಅವರ ಧರ್ಮಪತ್ನಿ ಶ್ರೀಮತಿ ಪ್ರತಿಮಾ ಚಕ್ಕಿ ಅವರನ್ನು ಸಹಾ ಹಳೆಯ ವಿದ್ಯಾರ್ಥಿಗಳ ಅಭಿಮಾನಿ ಬಳಗವು ಹೃದಯಸ್ಪರ್ಶಿ ಸನ್ಮಾನಿಸಿ ಧನ್ಯತೆ ಮೆರೆದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಯೋಧ ಬಸಪ್ಪ ಅಸುಂಡಿ, ಪ್ರೊ, ಪ್ರಭುಲಿಂಗಪ್ಪ ಕೊಡದ, ಸೇರಿದಂತೆ ಮತ್ತಿತರ ಗಣ್ಯರು, ಮುಖಂಡರು ಪಾಲ್ಗೊಂಡಿದ್ದರು . ಈ ನಿಮಿತ್ತ ಮ್ಯೂಸಿಕಲ್ ಚೇರ್, ಅಂತ್ಯಾಕ್ಷರಿ, ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು, ತಮ್ಮಲ್ಲಿರುವ ಆಂತರಿಕ ಪ್ರತಿಭೆ ಹೊರ ಸೂಸಿ ಸಂಭ್ರಮಿಸಿದರು. ವೈಶಾಲಿ ನಾಡಿಗೇರ ಸಂಗಡಿಗರು ಪ್ರಾರ್ಥಿಸಿದರು. ಶ್ರೀಧರ್ ಪಾಸ್ತೆ, ಸ್ವಾಗತಿಸಿ, ವಿನಾಯಕ ಶಿಗ್ಲಿಕರ ನಿರೂಪಿಸಿ, ರಾಜು ಬಿಲ್ಲಳ್ಳಿ ವಂದಿಸಿದರು. ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಸಂಘದ 300ಕ್ಕೂ ಹೆಚ್ಚು ಸಾಧಕರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 