ತ್ರಿವೇಣಿಯವರ ಶರಪಂಜರ ಕೃತಿ: ಉಪನ್ಯಾಸ, ಚರ್ಚೆ
Triveni's Sharapanjara Kriti: Lecture, Discussion
ಬೆಳಗಾವಿ 18: ರಂಗಸಂಪದ ಬೆಳಗಾವಿಯ ಸ.ಮಾ.ಸ.ದ ಐದನೆಯ ಸಮ್ಮಿಲನ ಇಂದು ರಾಘವೇಂದ್ರ ದೇಶಮುಖ ಅವರ ಆತಿಥ್ಯದಲ್ಲಿ ಗಣೇಶಪೂರದ ಅವರ ಅಪಾರ್ಟಮೆಂಟನ ಹಾಲನಲ್ಲಿ ಜರುಗಿತು.
ಖ್ಯಾತ ಲೇಖಕಿ ತ್ರಿವೇಣಿ ಅವರ ಶರಪಂಜರ ಕಾದಂಬರಿಯ ಕುರಿತು ಲೇಖಕಿ ಕಲಾವಿದೆ ಪ್ರಾಂಶುಪಾಲ ಡಾ.ನಿರ್ಮಲಾ ಬಟ್ಟಲ ತಮ್ಮ ಉಪನ್ಯಾಸದಲ್ಲಿ ತ್ರಿವೇಣಿಯವರ ಜೀವನ ಮತ್ತು ಸಾಹಿತ್ಯ ಕುರಿತಂತೆ ಎಳೆ ಎಳೆಯಾಗಿ ಬಿಚ್ಚಿಟ್ಟರು
ವೀನೀತಾ ಗೆಜ್ಜಿ, ಸತೀಷ ಕುಲಕರ್ಣಿ, ಬಸವರಾಜ.ಕೆ.ಎನ್.,ಶಿವಬಸಪ್ಪಾ ಕುಂಬಾರ ಅವರು ಶರಪಂಜರ ಕಾದಂಬರಿ ಕುರಿತಂತೆ ತಮ್ಮ ಅನಿಸಿಕೆಗಳನ್ನು ತಿಳಿಸುತ್ತ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತ್ರಿವೇಣಿಯವರಂತಹ ಲೇಖಕಿ ಬೇರೊಬ್ಬರಿಲ್ಲ. ಅವರು ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಇಲ್ಲವಾದುದು ಬೇಸರದ ಸಂಗತಿ ಎಂದು ಹೇಳಿದರು.
ಅರವಿಂದ ಕುಲಕರ್ಣಿ, ಎಲ್ ಎಸ್. ಶಾಸ್ತ್ರೀ, ಶೀರೀಷ ಜೋಶಿ, ಮನೋಜ ಚರಂತಿಮಠ, ಎಸ್. ವಿ. ದಿಕ್ಷೀತ, ಶ್ವೇತಾ ನರಗುಂದ, ಭವ್ಯಾ ಸಂಪಗಾರ ಮುಂತಾದವರು ಭಾಗವಹಿಸಿದ್ದರು. ರಾಘವೇಂದ್ರ ದೇಶಮುಖ ಸ್ವಾಗತಿಸಿದರು. ಗುರುನಾಥ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪದ್ಮಾ ಕುಲಕರ್ಣಿ ನಿರೂಪಿಸಿದರು. ಅರವಿಂದ ಕುಲಕರ್ಣಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 