ವಿದ್ಯಾರ್ಥಿನಿ ಚಿತ್ರಾಂಜಲಿ ಮುರುಗುಡೆಗೆ ಸನ್ಮಾನ

ವಿದ್ಯಾರ್ಥಿನಿ ಚಿತ್ರಾಂಜಲಿ ಮುರುಗುಡೆಗೆ ಸನ್ಮಾನ Tribute to student Chitranjali Murugude

ಗೋಕಾಕ 29: ನಗರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಯಲ್ಲಿ ಚಿತ್ರಕಲೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ರಾಯಬಾಗ ತಾಲೂಕಿನ ಖೈರವಾಡಿಯ (ರೈಲ್ವೆ ಸ್ಟೇಷನ) ಹಾಲಸಿದ್ದೇಶ್ವರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿನಿ ಚಿತ್ರಾಂಜಲಿ ಬಸವರಾಜ ಮುರುಗುಡೆ ಇವಳನ್ನು ಸೋಮವಾರ ಶಾಲೆಯ ಸಂಸ್ಥಾಪಕ ಅಧ್ಯಕ್ಷ, ವಕೀಲ ಆರ್‌.ಎಚ್‌.ಗೊಂಡೆ ಸತ್ಕರಿಸಿದರು. ಪ್ರಧಾನ ಗುರುಗಳಾದ ಲಕ್ಷ್ಮಣ ಕಾಂಬಳೆ, ಆಡಳಿತ ಮಂಡಳಿ ಸದಸ್ಯರು ಮತ್ತು ಶಿಕ್ಷಕರು ಇದ್ದರು.