ಶಾಸಕ ಅಪ್ಪಾಜಿ ನಾಡಗೌಡರಿಗೆ ಗೌರವ

ಶಾಸಕ ಅಪ್ಪಾಜಿ ನಾಡಗೌಡರಿಗೆ ಗೌರವ Tribute to MLA Appaji Nadagowda

 ತಾಳಿಕೋಟಿ 14 : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಪ್ರಾಂಗಣದಲ್ಲಿ ರೂ.5 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅಭಿವೃದ್ಧಿಗೆ ಸಹಕರಿಸಿದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ,ಶಾಸಕರಾದ ಅಪ್ಪಾಜಿ ನಾಡಗೌಡರಿಗೆ ಸಮಿತಿ ವತಿಯಿಂದ ಗೌರವ ಸಮರೆ​‍್ಣ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ಸಯ್ಯದ್ ಶಕೀಲ್ ಅಹಮದ್ ಖಾಜಿ,ಬೆಳಗಾವಿ ವಲಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ, ಜಿಲ್ಲಾ ಕಾರ್ಯನಿರ್ವಾಹಕ ಅಭಿಯಂತರ ಎಲ್ ಬಿ ಲಮಾಣಿ, ಮುಖಂಡರಾದ ಸುರೇಶ ಧಣಿ ನಾಡಗೌಡ(ಬಿಂಜಲಭಾವಿ),ಸಿದ್ದನಗೌಡ ಪಾಟೀಲ(ನಾವದಗಿ), ಪ್ರಭುಗೌಡ ಮದರಕಲ್ಲ, ಎಂ.ಎಸ್‌.ಸರಶಟ್ಟಿ, ಕಾರ್ಯದರ್ಶಿ ಆರ್ ಎಸ್ ರಾಠೋಡ, ಮಹದೇವಪ್ಪ ಕುಂಬಾರ, ಚಿಂತಪ್ಪಗೌಡ ಯಾಳಗಿ,ಕಾಶಿನಾಥ ಮುರಾಳ, ಶ್ರೀಕಾಂತ್ ಎಸ್ ಪಾಟೀಲ, ಸಿ.ಎಸ್‌.ಮಾಳಿ,ಬಿ.ಎಂ.ಕುಂಬಾರ, ಸಂಗನಗೌಡ ಅಸ್ಕಿ, ಮೋದಿನಸಾ ನಗಾರ್ಚಿ, ಮೆಹಬೂಬ ಕೆಂಭಾವಿ,ಫಯಾಜ ಉತ್ನಾಳ, ಆಸೀಫ ಕೆಂಭಾವಿ, ಗೋಪಾಲ ಕಟ್ಟಿಮನಿ ಹಾಗೂ ಎಪಿಎಂಸಿ ಕಾರ್ಯಾಲಯ ಸಿಬ್ಬಂದಿಗಳು ಇದ್ದರು.