ಇಂದು ಬಲ್ದೋಟ ಅತಿಕ್ರಮಣ ಬಸಾಪುರ ಕೆರೆ ಉಳಿಸಲು ಬೃಹತ್ ಹೋರಾಟ
Today there is a massive struggle to save the Baldota encroachment Basapura lake
ಲೋಕದರ್ಶನ ವರದಿ
ಕೊಪ್ಪಳ 04: ಬಲ್ದೋಟ ಎಐಎಸ್ಎಲ್ ಅತಿಕ್ರಮಣದಿಂದ ಬಸಾಪುರ ಕೆರೆ ಸುಮಾರು 44 35 ಎಕರೆಯನ್ನು ಕೆರೆ ಒತ್ತು ವರಿ ಜಮೀನನ್ನು ಬಿಡಿಸಲು ಜನ ಮತ್ತು ಜಾನುವಾರು ಗಳು ನೀರು ಕುಡಿಯಲು ಮುಕ್ತ ಗೊಳಿಸಲು ಒತ್ತಾಯಿಸಿ ನಾಳೆ ಮೇ 5 ರ ಮಠಳವಾರ ದಂದು ಬೃಹತ್ ಪ್ರತಿಭಟನೆ ಮತ್ತು ಹೋರಾಟ ನಡೆಯಲಿದೆ ಎಂದು ರೈತ ಹೋರಾಟಗಾರ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಭೀಮಸೇನ್ ಕಲಿಕೇರಿ ತಿಳಿಸಿದ್ದಾರೆ, ಅವರು ಸೋಮವಾರದಂದು ನಗರದ ಪತ್ರಿಕಾ ಭವನದಲ್ಲಿ ಏರಿ್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಈ ಕುರಿತು ತಮ್ಮ ನಿರ್ಧಾರ ಪ್ರಕಟಿಸಿದರು ,ಸರ್ಕಾರ ಕೂಡಲೇ ನಗರದ ಸುಮಾರು ಒಂದುವರೆ ಲಕ್ಷ ಜನರ ಆರೋಗ್ಯದ ಹಿತದೃಷ್ಟಿಯಿಂದ ಬಲದೋಟ ಬಿ ಎಸ್ ಪಿ ಎಲ್ ಕಾರ್ಖಾನೆಯ 54,000 ಕೋಟಿ ಹೂಡಿಕೆಯ ವಿಸ್ತೀರ್ಣ ರದ್ದು ಮಾಡಬೇಕು ಹಾಗೂ 2011 ರಿಂದ ನಡೆಯುತ್ತಿರುವ ಎಂ ಎಸ್ ಪಿ ಎಲ್ ಪೆಲ್ಲೆಟ್ ಘಟಕ ಕೂಡಲೇ ತೆಗಿತಗೊಳಿಸಬೇಕು ಅರ್ಧದಷ್ಟು ನಗರ ಜನರ ಜೀವ ಕಾಪಾಡಲು ಇದನ್ನು ಕೂಡಲೇ ಬಂದು ಮಾಡಬೇಕು ಎಂದು ಒತ್ತಾಯಿಸಿದರು, ಮಂಗಳವಾರದಂದು ಕೆರೆ ಉಳಿಸಿ ಹೋರಾಟದಲ್ಲಿ ಸಾವಿರಾರು ಕುರಿ ಜಾನುವಾರು ಸಹಿತ ನೀರು ಕುಡಿಯಲು ನಡೆಸುವ ಹೋರಾಟ ಯಶಸ್ವಿಗೆ ವಿವಿಧ ಸಂಘಟನೆಗಳು ಸಹಕಾರ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ್ ಕಲಿಕೇರಿ ಮನವಿ ಮಾಡಿಕೊಂಡರು, ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಮೂಕಪ್ಪ ಏನ್ ಮೇಸ್ತ್ರಿ ,ತಿಪ್ಪೇಸ್ವಾಮಿ ಹಿರೇಮಠ, ಶೇಕಪ್ಪ ಮೈನಹಳ್ಳಿ, ಯಮನೂರ್ಪ ಹಾಲಹಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು,
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 