ಇಂದು ಸೈದಾಪೂರ ಅಮೋಘಸಿದ್ದೇಶ್ವರ ಜಾತ್ರೆ
ಲೋಕದರ್ಶನವರದಿ
ಮಹಾಲಿಂಗಪುರ: ಸಮೀಪದ ಸ್ಯದಾಪೂರ ಗ್ರಾಮದಲ್ಲಿ ಇಂದು ದಿ.17 ರಂದು ಅಮೋಘಸಿದ್ದೇಶ್ವರ ಜಾತ್ರೆ ಜರುಗಲಿದ್ದು ತನ್ನಿಮಿತ್ಯ ಇಂದು ಬೆಳಿಗ್ಗೆ 5 ಕ್ಕೆ ರುದ್ರಾಭಿಷೇಕ ಮುಂಜಾನೆ 10 ಗಂಟೆಗೆ ಶ್ರಿ ಶಿವಲಿಂಗೇಶ್ವರ,ಶ್ರೀ ಮಾರುತಿದೇವರ,ಶ್ರೀ ಯಲ್ಲಮ್ಮದೇವಿಯ ಪಲ್ಲಕ್ಕಿ,ನಂದಿಕೋಲ,ಕರಡಿಮೇಳ,ಹಾಗೂ ಡೊಳ್ಳಿನ ವಾಲಗದೊಂದಿಗೆ ಸ್ಯದಾಪೂರ ಗ್ರಾಮದಿಂದ ಅಮೋಘಸಿದ್ದೇಶ್ವರ ದೇವಸ್ಥಾನಕ್ಕೆ ಆಗಮಿಸುವವು.
ಪವಾಡ ಪುರುಷರ ಬೆಟ್ಟಿ ಕಾರ್ಯಕ್ರಮ: ಮಧ್ಯಾಹ್ನ 3 ಕ್ಕೆ ಸೈದಾಪೂರಕ್ಕೆ ಆಗಮಿಸುವ ಪವಾಡಪುರುಷರಾದ ನಾಗರಾಳ ಗ್ರಾಮದ ಗುರು ಸೋಮಲಿಂಗೇಶ್ವರ ಪಲ್ಲಕ್ಕಿ,ಅಮೋಘಸಿದ್ದೇಶ್ವರ ಪಲ್ಲಕ್ಕಿ,ಕೆಸರಗೊಪ್ಪ ಶ್ರೀ ಮಾಧುಲಿಂಗನ ಪಲ್ಲಕ್ಕಿ,ನಾಗನೂರ ಗ್ರಾಮದ ಕರಣಿಮಲಕಾರಸಿದ್ದ ಪಲ್ಲಕ್ಕಿ,ಹಾರೂಗೇರಿಯ ಅರಣ್ಯ ಸಿದ್ದೇಶ್ವರ ಪಲ್ಲಕ್ಕಿ ಗಳನ್ನು ಮುತ್ತೈದೆಯರ ಆರತಿ ಹಾಗೂ ಸಕಲ ವಾದ್ಯಗಳೊಂದಿಗೆ ಬರಮಾಡಿಕೊಳ್ಳುವದು.ನಂತರ ವಾಲಗ ಗರ್ಜನೆ ಹಾಗು ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ ನಂತರ ಮಹಾಪ್ರಸಾದ ಜರುಗುವದು.
ರಾತ್ರಿ 10-30 ಕ್ಕೆ ಗ್ರಾಮದ ಸುತ್ತಮುತ್ತಲಿನ ಕಲಾವಿದರಿಂದ ಸುಪ್ರಸಿದ್ದ ಡೊಳ್ಳಿನ ಪದಗಳು ಇರುತ್ತವೆ.ನಾಳೆ ದಿ.18 ರಂದು ಮುಂಜಾನೆ ಮಹಾಮಂಗಳಾರತಿಯೊಂದಿಗೆ ಭಂಡಾರ ಒಡೆಯುವ ಕಾರ್ಯಕ್ರಮವಿದ್ದು ಸಕಲ ಸದ್ಭಕ್ತರು ಆಗಮಿಸಿ ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಸ್ಯದಾಪೂರ ಶ್ರೀ ಅಮೋಘಸಿದ್ದೇಶ್ವರ ಸದ್ಭಕ್ರ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 