ತಂಬಾಕು ಸೇವನೆಯಿಂದ ಮಹಾಮಾರಿ ರೋಗ : ವೈ.ಎಂ.ಪೂಜಾರ
Tobacco consumption is a pandemic: Y.M. Pujar
ಇಂಡಿ 30 : ತಂಬಾಕು ಮೂಲ ಉತ್ಪನ್ನಗಳಾದ ಗುಟ್ಕಾ, ಪಾನಪರಾಗ, ಬಿಡಿ, ಸಿಗರೇಟು, ಸೇವನೆಯಿಂದ ಕ್ಯಾನ್ಸರ, ಲಕ್ವಾ, ಹಾರ್ಟ್ ಅಟ್ಯಾಕ್ಕೆದಂತಹ ಮಹಾಮಾರಿ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಪೂಜಾರ ಹೇಳಿದರು.
ಅವರು ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ತಂಬಾಕು ಮುಕ್ತ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ಆದೇಶದಂತೆ ಸಮಿತಿ ರಚಿಸಿ. ಈಗಾಗಲೇ ತಾಲೂಕಿನ ಜನಸಂಖ್ಯೆಯಲ್ಲಿ 2,000 ಕ್ಕಿಂತ ಕಡಿಮೆ ಇರುವ ಆಯ್ದ ಗ್ರಾಮಗಳು ಆಯ್ಕೆ ಮಾಡಿಕೊಂಡು ಅದರಲ್ಲಿ ಹಂಚಿನಾಳ ಗ್ರಾಮ ಆಯ್ದುಕೋಳ್ಳಲಾಗಿದೆ. ಈ ಗ್ರಾಮದಲ್ಲಿ ಸಮಿತಿ ನಿರ್ಮಿಸಿದ ಉದ್ದೇಶವೆಂದರೆ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುವದಲ್ಲದೇ ಎಷ್ಟೋ ಕುಟುಂಬಗಳು ನಾಶವಾಗಿದ್ದರಿಂದ ಇವುಗಳನ್ನು ಇಂದಿನಿಂದಲೇ ನಿರ್ಮೂಲನೆ ಆಗಬೇಕಾಗಿದೆ ಎಂದರು. ಕಾರ್ಯಕ್ರಮದ ನಂತರ ಗ್ರಾಮದಲ್ಲಿರುವ 2 ಅಂಗಡಿಯ ಮಾಲೀಕರು ಹಾಗೂ ಮಕ್ಕಳ ಸಿಹಿ ತಿಂಡಿ ಮಾರುತ್ತಿದ್ದ ಅಂಗಡಿ ಮಾಲೀಕರಿಗೂ ಮನವರಿಕೆ ಮಾಡಿ ಅವರಿಂದಲೇ ತಂಬಾಕು ಮುಕ್ತ ಗ್ರಾಮಕ್ಕಾಗಿ ಪ್ರತಿಜ್ಞೆ ಮಾಡಿಸಿ ಅಲ್ಲಿಯೇ ಇದ್ದ ಶಾಲಾ ಮಕ್ಕಳಿಂದ ಗುಲಾಬಿ ಹೂ ಕೊಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ವಿದ್ಯಾಧರ ಮಂಗಳೂರೆ, ಹೂವಣ್ಣ ಚೌಡಿಯಾಳ, ಅಂಗಡಿಯ ಮಾಲೀಕರುಗಳಾದ ಸದ್ದಾಮ ರೇವುರ, ಚಾಂದಸಾಬ, ಅರವಿಂದ ತಳವಾರ, ಬಾಬು ಹೊಸಮನಿ, ಮುಖ್ಯ ಗುರುಗಳಾದ ಭೀಮರಾಯ ಜಮಖಂಡಿ, ಸಮುದಾಯ ಆರೋಗ್ಯಾಧಿಕಾರಿ ಸದ್ದಾಂ ಹುಸೇನ ನಾಗುರ, ಆರೋಗ್ಯನಿರಕ್ಷಣಾಧಿಕಾರಿ ದೇವೇಂದ್ರ್ಪ ಪತ್ತಾರ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀದೇವಿ ಕೂಟನೂರ, ರಾಧಿಕಾ ವಾಲಿಕರ, ಆಶಾ ಕಾರ್ಯಕರ್ತೆ ಅನ್ನಪೂರ್ಣ ತೊನಿಶಾಳ ಸೇರಿದಂತೆ ಗ್ರಾಮಸ್ಥರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ದೇವೇಂದ್ರ್ಪ ಪತ್ತಾರ ಸ್ವಾಗತಿಸಿದರು, ಸದ್ದಾಮ ಮಹುಸೇನ ನಿರೂಪಿಸಿದರು, ಭೀಮರಾಯ ಜಮಖಂಡಿ ವಂದಿಸಿದರು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 