ಹಾವೇರಿ: ಜು.06: ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿಗೆ ನೇರ ಸಾಲ ಯೋಜನೆ ಹಾಗೂ ಅರಿವು ಸಾಲ ಯೋಜನೆ ಜಾರಿಯಲ್ಲಿವೆ. ಮುಂದಿನ ವರ್ಷದಿಂದ ಫುಡ್ ಟ್ರಕ್ ಯೋಜನೆ ಹಾಗೂ ಗಂಗಾಕಲ್ಯಾಣ ಯೋಜನೆಯಡಿ ನಿಗಮದಿಂದ ನೆರವು ಒದಗಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ಕನರ್ಾಟಕ ರಾಜ್ಯ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಿ.ಎಸ್.ಅರುಣಕುಮಾರ್ ಹೇಳಿದರು.
ನಗರದ ಪ್ರವಾಸಿ ಮಂದಿರಲ್ಲಿ ಸೋಮವಾರ ನಿಗಮದ ನೇರ ಸಾಲ ಮಂಜೂರಾದ ಫಲಾನುಭವಿಗಳಿಗೆ ತಲಾ ಒಂದು ಲಕ್ಷ ರೂ.ಗಳ ಸಾಲ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು.
ಆರ್ಯ ವೈಶ್ಯ ನಿಗಮ ಸ್ಥಾಪನೆಯಾದ ಮೇಲೆ ಆರ್ಯ ವೈಶ್ಯ ಜನಾಂಗದ ಬಡವರಿಗೆ ಸ್ವಾವಲಂಬಿ ರೂಪಿಸಿಕೊಳ್ಳಲು ಶೇ.4ರ ವಾಷರ್ಿಕ ಬಡ್ಡಿದರದಲ್ಲಿ 20 ಸಾವಿರ ಸಹಾಯಧನ ಹಾಗೂ 80 ಸಾವಿರ ಸಾಲದ ಹಣ ಸೇರಿ ತಲಾ ಒಂದು ಲಕ್ಷ ರೂ. ನೇರ ಸಾಲ ಯೋಜನೆ ರೂಪಿಸಲಾಗಿದೆ ಹಾಗೂ ಈ ಜನಾಂಗದ ಬಡ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಶೇ.2ರ ಬಡ್ಡಿ ದರದಲ್ಲಿ ಅರಿವು ಸಾಲ ಯೋಜನೆಯನ್ನು ನಿಗಮದಿಂದ ಜಾರಿಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ನೇರ ಸಾಲ ಯೋಜನೆಯಡಿ 1665 ಹಾಗೂ ಶೈಕ್ಷಣಿಕ ಅರಿವು ಸಾಲ ಯೋಜನೆಯಡಿ 65 ಜನರಿಗೆ ನೆರವು ಒದಗಿಸಲಾಗುವುದು. ಈಗಾಗಲೇ ಸಾಲ ಮಂಜೂರಾತಿ ಪತ್ರ ನೀಡಲಾಗುತ್ತಿತ್ತು, ಸಾಲ ಮಂಜೂರಾತಿ ಪತ್ರ ಪಡೆದ ಒಂದು ವಾರದಲ್ಲಿ ಫಲಾನುಭವಿಗಳಿಗೆ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಹೇಳಿದರು.
ಮುಂದಿನ ಆಥರ್ಿಕ ವರ್ಷದಿಂದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಆರ್ಯ ವೈಶ್ಯ ಸಮಾಜದ ಕೃಷಿ ಕಾರ್ಯಕ್ಕೆ ಬೆಂಬಲಿಸಲು ಗಂಗಾ ಕಲ್ಯಾಣ ಯೋಜನೆಯಡಿ ನೆರವು ನೀಡುವ ಉದ್ದೇಶ ಹೊಂದಲಾಗಿದೆ. ನಿಗಮದಿಂದ ಕೊಳವೆಬಾವಿ ಕೊರೆಸಿಕೊಡಲು ನಿಗಮಕ್ಕೆ ಕನಿಷ್ಠ ಒಂದು ಕೋಟಿ ರೂ. ಅನುದಾನ ಒದಗಿಸಲು ಮುಖ್ಯಮಂತ್ರಿಗಳನ್ನು ಕೋರಲಾಗಿದೆ ಹಾಗೂ ಸಣ್ಣ-ಪುಟ್ಟ ತಿಂಡಿ ತಿನಿಸು ತಯಾರಿಸುವ ವೃತ್ತಿಯಲ್ಲಿ ತೊಡಗಿರುವ ಆರ್ಯ ವೈಶ್ಯ ಸಮಾಜದ ಜನರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಫುಡ್ ಟ್ರಕ್ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಈ ಕುರಿತಂತೆ ಚಚರ್ಿಸಲಾಗಿದೆ. ಒಂದು 100 ಫುಡ್ ಟ್ರಕ್ಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಗೂಡಂಗಡಿ, ಚಕ್ಕಲಿ, ನಿಪ್ಪಟ್ಟು ಇತರ ಆಹಾರ ಪದಾರ್ಥಗಳನ್ನು ತಯಾರಿಸಲು ನೈಪುಣ್ಯ ಹೊಂದಿರುವ ವೃತ್ತಿಪರ ಆರ್ಯವೈಶ್ಯರಿಗೆ ಆಧುನಿಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕುರಿತಂತೆ ತರಬೇತಿ ನೀಡಲು ವೃತ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ನಿಗಮದಿಂದ ಆಯೋಜಿಸಲು ಉದ್ದೇಶಿಸಲಾಗಿದೆ ಹಾಗೂ ನಿಗಮದ ಎಲ್ಲ ಸಾಲ ಸೌಲಭ್ಯಗಳು ಅತ್ಯಂತ ಪಾರದರ್ಶಕವಾಗಿ ಭ್ರಷ್ಟಾಚಾರ ರಹಿತವಾಗಿ ಜನರಿಗೆ ತಲುಪಿಸುವ ಪ್ರಮಾಣಿಕ ಕೆಲಸ ನಡೆಸಲಾಗುತ್ತಿದೆ.
ಈ ಉದ್ದೇಶಕ್ಕಾಗಿ ಆನ್ಲೈನ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಆರ್ಯ ವೈಶ್ಯ ಸಮಾಜಕ್ಕೆ ಸ್ವಾತಂತ್ರ್ಯ ನಂತರ ಸಕರ್ಾರದ ಯಾವುದೇ ಯೋಜನೆಗಳು ಇಲ್ಲ, ನೆರವು ದೊರೆತಿಲ್ಲ. ಈ ಜನರಿಗೆ ಸಕರ್ಾರದ ಯೋಜನೆಗಳ ನೆರವು ಪಡೆಯುವ ಹೆಚ್ಚಿನ ಅರಿವು ಇರುವುದಿಲ್ಲ. ಹಾಗೂ ಸಕರ್ಾರದ ನೆರವು ಪಡೆಯಲು ಬೇಕಾದ ಜಾತಿ ಪ್ರಮಾಣಪತ್ರ ಹಾಗೂ ಆದಾಯ ಪ್ರಮಾಣಪತ್ರ ಪಡೆಯುವ ತೊಡಕನ್ನು ನಿವಾರಣೆ ಮಾಡಲಾಗಿದೆ. ಆರ್ಯವೈಶ್ಯ ಜನಾಂಗದವರು ಆನ್ಲೈನ್ ಮುಖಾಂತರ ನಿಗಮಕ್ಕೆ ಅಜರ್ಿ ಸಲ್ಲಿಸಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯುವ ವ್ಯವಸ್ಥೆ ಮಾಡಲಾಗಿದೆ ಹಾಗೂ ಈ ಜನರ ಏಳ್ಗೆಗಾಗಿ 2019 ಜನೇವರಿಯಲ್ಲಿ ಆರ್ಯ ವೈಶ್ಯ ಸಮುದಾಯ ನಿಗಮ ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳಿದರು.
ಈ ನಿಗಮದ ಬೆಳವಣಿಗೆ ಹಾಗೂ ಸಮಾಜದ ಇತರ ಬಡ ಜನರ ಏಳಿಗೆಗಾಗಿ ನಿಗಮದಿಂದ ವಿವಿಧ ಯೋಜನೆಯಡಿ ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿಮಾಡಬೇಕು. ಸಕಾಲದಲ್ಲಿ ಮರುಪಾವತಿ ಮಾಡಿದರೆ ಆರ್ಯ ವೈಶ್ಯ ಸಮಾಜದ ಇತರ ಬಡ ಜನರಿಗೆ ಮತ್ತೆ ಸಾಲ ನೀಡಲು ಅನುಕೂಲವಾಗುತ್ತದೆ. ಇದರಿಂದ ಸಮುದಾಯ ಹಾಗೂ ಸಮುದಾಯದ ಏಳ್ಗೆಗಾಗಿ ರಚಿತವಾಗಿರುವ ನಿಗಮದ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಪರಿಸ್ನೇಹಿ:
ನಿಗಮದ ಪ್ರಚಾರದ ಸಾಮಗ್ರಿಗಳನ್ನು ಪರಿಸರಸ್ನೇಹಿಯಾಗಿ ಮುದ್ರಿಸಲಾಗಿದೆ. ಈ ಮುದ್ರಣ ಸಾಮಗ್ರಿಗಳಲ್ಲಿ ಹೂವು-ಹಣ್ಣು, ಇತರ ಜಾತಿಯ ಬೀಜಗಳನ್ನು ಕಾಗದದ ಒಳಗೆ ಸೇರಿಸಿ ಮುದ್ರಿಸಲಾಗಿದೆ. ಬಳಕೆಯಾದ ನಂತರ ಎಸೆದಾಗ ನೆಲದಲ್ಲಿ ಬಿದ್ದ ಈ ಪ್ರಚಾರ ಪತ್ರಗಳ ಒಳಗಿರುವ ಪತ್ರಗಳು ಮಣ್ಣಲ್ಲಿ ಸೇರಿ ಒಂದು ಸಸಿಯಾಗಿ ಪರಿವರ್ತನೆಯಾಗುತ್ತದೆ. ಮೊಟ್ಟಮೊದಲ ಬಾರಿಗೆ ನಿಗಮ ಈ ರೀತಿಯ ಪ್ರಚಾರ ಸಾಮಗ್ರಿಗಳನ್ನು ರೂಪಿಸಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿದರ್ೆಶಕ ಚನ್ನಬಸಪ್ಪ ಡಿ. ಹಾವಣಗಿ, ಆರ್ಯ ವೈಶ್ಯ ಸಮಾಜದ ಮುಖಂಡರಾದ ಡಿ.ಅರುಣಕುಮಾರ ಶೆಟ್ಟರ್, ಮಂಜುನಾಥ್ ಶೆಟ್ಟಿ, ಪ್ರಶಾಂತ ಗುತ್ತಲ, ಮಂಜುನಾಥ ಬೆಟದೂರ, ಬಸವರಾಜ, ಆನಂದ ಹಾಗೂ ಫುಂಡಲಿಕ್ ಇತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕುಮಾರಿ ಅಕ್ಷತಾ ಚಿಕ್ಕೇರೂರ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ನಿಗಮದಿಂದ ಮಂಜೂರಾಗಿರುವ ವಿವಿಧ ಸಾಲದ ಮಂಜೂರಾತಿ ಪ್ರಮಾಣಪತ್ರವನ್ನು ವಿತರಿಸಲಾಯಿತು.