ವಿದ್ಯುತ್ ತಂತಿ ಸ್ಪರ್ಶಿಸಿ ಮೂರು ಎಮ್ಮೆಗಳು ಸಾವು
Three buffaloes die after touching electric wires
ಕಂಪ್ಲಿ 20: ಮಳೆಯ ಆವಾಂತರದಿಂದಾಗಿ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಮೂರು ಎಮ್ಮೆಗಳು ಸ್ಥಳದಲ್ಲೇ ಜೀವತೆತ್ತ ಘಟನೆ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊರವಲಯದಲ್ಲಿರುವ ಸೂಗಪ್ಪ ಎಂಬುವರ ಹೊಲದಲ್ಲಿ ಬಿ.ಮಲಿಕ್ ಬೀ ಎಂಬುವರು ಮೂರು ಎಮ್ಮೆಗಳನ್ನು ಮೇಯಿಸಲು ಬಿಟ್ಟಿದ್ದರು. ನಂತರ ಬಂದ ಮಂಗಳವಾರ ಸುರಿದ ಮಳೆ ಗಾಳಿಯ ರಭಸಕ್ಕೆ ಹೊಲದ ಬಳಿಯಲ್ಲಿದ್ದ ಟಿ.ಸಿ ಮೋಟರ್ನ ವೈರ್ ಕಳಚಿ ಬಿದ್ದದ್ದರಿಂದ ಮೂರು ಎಮ್ಮೆಗಳು ಅಸುನೀಗಿವೆ. ಬಿ.ಮಲಕ್ ಬೀ ಎಂಬುವರಿಗೆ ಸೇರಿದ ಸುಮಾರು 270000 ರೂ.ಗಳ ಮೌಲ್ಯದ ಮೂರು ಎಮ್ಮೆಗಳು ಮೃತಪಟ್ಟಿದ್ದು, ಸಂಕಷ್ಟಕ್ಕ ಈಡಾಗಿದ್ದಾರೆ. ಆದ್ದರಿಂದ ಸರ್ಕಾರ ನಷ್ಟ ಪರಿಹಾರ ಒದಗಿಸಬೇಕೆಂಬುದು ಮಾಲೀಕರ ಮತ್ತು ಗ್ರಾಮಸ್ಥರ ಒತ್ತಾಯವಾಗಿದೆ.
ಪಶು ಇಲಾಖೆಯ ಪಶುವೈದ್ಯಾಧಿಕಾರಿ ಕೆ.ಬಸವರಾಜ ಇವರು ಘಟನಾ ಸ್ಥಳಕ್ಕೇ ಭೇಟಿ ನೀಡಿ, ಪರೀಶೀಲಿಸಿ, ನಷ್ಟ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 