ಸಂತ್ರಸ್ತರ ರಕ್ಷಣೆಗೆ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕಾಯರ್ಾಚರಣೆ


ಬೆಂಗಳೂರು,ಆ.20- ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗಿನಲ್ಲಿ ಸಂತ್ರಸ್ತರ ರಕ್ಷಣೆಗೆ ಸೇನೆ, ಎನ್ಡಿಆರ್ಎಫ್, ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ತಂಡ ಕಾಯರ್ಾಚರಣೆ ನಡೆಸುತ್ತಿದೆ.

ಕಳೆದ 15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ತತ್ತರಿಸಿರುವ ಕೊಡಗಿನಲ್ಲಿ ಮಳೆಯ ಪ್ರಮಾಣ ಕೊಂಚ ತಗ್ಗಿದ್ದು , ನಾಲ್ಕು ದಿನಗಳಿಂದ ಕಾಯರ್ಾಚರಣೆ ನಡೆಸುತ್ತಿರುವ ವಿವಿಧ ತಂಡಗಳ ಕಾಯರ್ಾಚರಣೆ ಇಂದು ಸಂಜೆ ಬಹುತೇಕ ಮುಗಿಯಲಿದೆ. 

ಭಾರೀ ಮಳೆಗೆ ಬೆಟ್ಟಗುಡ್ಡ ಕುಸಿದಿದ್ದು ಹಲವಾರು ಮನೆಗಳು ನೆಲಕ್ಕುರುಳಿದ್ದು,ರಸ್ತೆ ಸಂಪರ್ಕ ಕಡೆದುಕೊಂಡಿದ್ದು, ಈವರೆಗೆ ಎಂಟು ಮಂದಿ ಮೃತರಾಗಿದ್ದಾರೆ. 

ಕೆಎಸ್ಆರ್ಪಿಯ ಮೂರು  ತುಕಡಿ ಗರುಡಾ ಪಡೆ, ಕಮಾಂಡೊ ಪಡೆ ಕೂಡ  ಸ್ಥಳದಲ್ಲಿದ್ದು, ಕೆಎಸ್ಆರ್ಪಿ  ಎಡಿಜಿಪಿ ಭಾಸ್ಕರ್ ರಾವ್ ಅವರಲ್ಲಿ ಅಲ್ಲೇ ಮೊಕ್ಕಾಂ ಹೂಡಿದ್ದಾರೆ. 

ಕಾಯರ್ಾಚರಣೆ ಪಡೆಗಳು ಅಪಾಯದಲ್ಲಿ ಸಿಲುಕಿರುವವರನ್ನು ರಕ್ಷಿಸಿ ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರ ಮಾಡುತ್ತಿವೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್ ಪಂಥ್ ಅವರು  ತಿಳಿಸಿದ್ದಾರೆ.