ಗದಗ-18, ನಗರದಲ್ಲಿ ಸುಮಾರು 48 ಗುಡಿಸಲು ಪ್ರದೇಶಗಳನ್ನು ಸ್ಲಂ ಕಾಯ್ದೆ 1973 ರ ಪ್ರಕಾರ ಅಧಿಕೈತವಾಗಿ ಘೋಷಣೆ ಮಾಡಲಾಗಿದೆ, ಇನ್ನು ಸುಮಾರು 30ಕ್ಕೊ ಹೆಚ್ಚು ಗುಡಿಸಲು ಪ್ರದೇಶಗಳನ್ನು ಗುರುತಿಸಲಾಗಿದ್ದು ಅಧಿಕೃತವಾಗಿ ಘೋಷಣೆ ಮಾಡಬೇಕಾಗಿದೆ. ಘೋಷಿತ ಮತ್ತು ಅಘೋಷಿತ ಸ್ಲಂ ಪ್ರದೇಶಗಳಲ್ಲಿ ವಸತಿ ಹಾಗೂ ನಾಗರೀಕ ಸೌಲಭ್ಯಗಳನ್ನು ಕಲ್ಪಿಸಬೇಕಾದ ಅಧಿಕಾರಿಗಳು ನಗರದ ಗೋಸಾವಿ ಸ್ಲಂ ಮತ್ತು ಕೆಲವುಂದು ಕೊಳಗೇರಿ ಪ್ರದೇಶಗಳನ್ನು ವಿನಾಕಾರಣ ತೆರವುಗೊಳಿಸುವ ಹುನ್ನಾರ ನಡೆಸುತ್ತಿರುವ ನಗರಸಭೆ ಪೌರಾಯುಕ್ತರ ಕ್ರಮವನ್ನು ಖಂಡಿಸಿ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ನಗರಸಭೆ ಮುಂದೆ ಪ್ರತಿಭಟನೆ ನಡೆಸಿ ಕೊಳಗೇರಿ ಪ್ರದೇಶಗಳ ವಿರೋಧಿ ನೀತಿಯನ್ನು ಕೈಬಿಡದೇ ಇದ್ದಲ್ಲಿ ಗದಗ-ಬೆಟಗೇರಿ ನಗರದ ಸಾವಿರಾರು ಸ್ಲಂ ನಿವಾಸಿಗಳಿಂದ ನಗರಸಭೆಗೆ ಮುತ್ತಿಗೆ ಹಾಕಿ ಉಗ್ರವಾದ ಹೋರಾಟ ನಡೆಸಲಾಗುವುದೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಮಾತನಾಡಿ ಗದಗ-ಬೆಟಗೇರಿ ನಗರದ ನವನಗರ ಸ್ಲಂ, ಗಂಗಿಮಡಿ ಗುಡಿಸಲು ಪ್ರದೇಶ, ಖಾನತೋಟ್ ಜನತಾ ಕಾಲೋನಿ, ಆಕಾಶನಗರ ಇನ್ನು ಹಲವಾರು ಅಘೋಷಿತ ಗುಡಿಸಲು ಪ್ರದೇಶಗಳ ಘೋಷಣೆಗಾಗಿ ನಗರಸಭೆಯಿಂದ ನಿರೇಕ್ಷಪಣಾ ಪತ್ರ ನೀಡಲು ಸ್ಲಂ ಬೋರ್ಡನಿಂದ ಪತ್ರ ಕಳುಹಿಸಿ 3 ವರ್ಷ ಕಳದರು ಸಹ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಗದಗ ನಗರದ ವಿವೇಕಾನಂದ ರಸ್ತೆ ಪಕ್ಕದಲ್ಲಿರುವ ಗೋಸಾವಿ ಸುಡಿಸಲು ಪ್ರದೇಶದಲ್ಲಿ ಸುಮಾರು 30 ಕುಟುಂಬಗಳು ಕಳೆದ 70 ವರ್ಷಗಳಿಂದ ಯಾವುದೇ ನಾಗರೀಕ ಸೌಲಭ್ಯಗಳು ಇಲ್ಲದೇ ಪ್ರಾಣಿಕ್ಕಿಂತ ಕೀಳಾಗಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ, ಈ ಪ್ರದೇಶದ ಜನರು ಚಿಂದಿ ಆಯುವ ಕೆಲಸ ಮಾಡಿ ಕಷ್ಟಪಟ್ಟು ತಮ್ಮ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ, ಇಂತಹ ನೈಜ್ ಗುಡಿಸಲು ಪ್ರದೇಶವನ್ನು ಗುರುತಿಸಿ ವಸತಿ ಯೋಜನೆ ಕಲ್ಪಿಸಬೇಕಾದ ನಮ್ಮ ಜನಪ್ರತಿಧಿಗಳು ಮತ್ತು ಅಧಿಕಾರಿಗಳು ವಸತಿ ಮನೆಗಳು ಹಂಚಿಕೆ ಮಾಡುವ ಸಂದರ್ಭದಲ್ಲಿ ಇಂತಹ ಅಸಂಘಟಿತ ಕಾರ್ಮಿಕ ವಲಯದ ಕುಟುಂಬಗಳನ್ನು ಕಡೆಗಣಿಸಿರುವ ಕ್ರಮವನ್ನು ನಾವು ಖಂಡಿಸುತ್ತೇವೆ, ಗದಗ-ಬೆಟಗೇರಿ ನಗರದಲ್ಲಿ ಸರ್ಕಾರದಿಂದ ಅನೇಕ ಯೋಜನೆಗಳ ಮೂಲಕ ಸಾವಿರಾರು ಮನೆಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಲಾಗಿದೆ, ಮನೆಗಳು ಹಂಚಿಕೆ ಮಾಡುವ ಸಂದರ್ಭದಲ್ಲಿ ಹಾಗೂ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ನಗರದ ಗುಡಿಸಲು ಪ್ರದೇಶಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದೇ ಚಿಕ್ಕ-ಚಿಕ್ಕ ಗುಡಿಸಲುಗಳಲ್ಲಿ ಬದುಕು ಕಟ್ಟಿಕೊಂಡಿರುವ ನೈಜ್ ಫಲಾನುಭವಿಗಳನ್ನು ಕಡೆಗಣಿಸಿ ಮನೆಗಳನ್ನು ಹಂಚಿಕೆ ಮಾಡಿದ್ದರಿಂದ ಇವತ್ತು ನಗರದ ಗುಡಿಸಲು ಪ್ರದೇಶದ ಸಾವಿರಾರು ಕುಟುಂಬಗಳು ಸರ್ಕಾರದ ವಸತಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇದಕ್ಕೆ ನೇರವಾಗಿ ನಮ್ಮ ಭಾಗದ ಜನಪ್ರತಿನಿಧಿಗಳು ಹಾಗೂ ನಗರದಸಭೆ ಅಧಿಕಾರಿಗಳು ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು, ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಗದಗ ನಗರದ ಗೋಸಾವಿ ಗುಡಿಸಲು ಪ್ರದೇಶ ಮತ್ತು ಇನ್ನು ಅನೇಕ ಇಂತಹ ನಾಗರೀಕ ಸೌಲಭ್ಯಗಳಿಂದ ವಂಚಿತರಾಗಿರುವ ಮತ್ತು ವಸತಿ ಯೋಜನೆಗಳಲ್ಲಿ ಕಡೆಗಣಿಸಲಾಗಿರುವ ಕುಟುಂಬಗಳಿಗೆ ಮನೆಗಳನ್ನು ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತ ಸ್ಥಳೀಯ ಜನಪ್ರತಿಧಿಗಳಿಗೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದರು ಸಹ ನೈಜ್ ಫಲಾನುಭವಿಗಳನ್ನು ಕಡೆಗಣಿಸಿರುವುದನ್ನು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ತೀವ್ರವಾಗಿ ಖಂಡಿಸುತ್ತೇವೆ, ನಮ್ಮ ದೇಶದ ಸಂವಿಧಾನದ ಪ್ರಕಾರ ದೇಶದಲ್ಲಿ ವಾಸಿಸುವ ಪ್ರತಿಯೂಬ್ಬ ನಾಗರೀಕನಿಗೆ ಬದುಕುವ ಹಕ್ಕು ಇದೆ, ಎಲ್ಲರಿಗೊ ನಮ್ಮ ದೇಶದ ನೆಲದಲ್ಲಿ ವಸತಿ ಮತ್ತು ಮೂಲಭೂತ ಸೌಲಭ್ಯಗಳನ್ನು ಸಮಾನವಾಗಿ ಪಡೆದುಕೊಳ್ಳುವ ಅಧಿಕಾರವಿದೆ, ಆದರೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಮ್ಮ ದೇಶದ ಸಂವಿಧಾನದ ಆಶೆಯನ್ನು ಗಾಳಿಗೆ ತೂರಿ ಬಡಜನರ ಮತ್ತು ಸ್ಲಂ ಜನರ ವಿರುಧ್ದವಾಗಿ ನಡೆದುಕೊಳ್ಳುತ್ತಿರುವುದು ಖಂಡನೀಯವಾಗಿದೆ, 21ನೇ ಶತಮಾನದಲ್ಲಿ ನಾವು ಇದ್ದೇವೆ ಆದರೆ ಈ ವರೆಗೊ ಗೋಸಾವಿ ಗುಡಿಸಲು ಪ್ರದೇಶದ ಕುಟುಂಬಗಳಿಗೆ ಅವರು ವಾಸಿಸುತ್ತಿರುವ ಮನೆಗಳಿಗೆ ಈಗೊ ಕೂಡಾ ವಿದ್ಯುತ್ ಸಂಪರ್ಕವಿಲ್ಲದೇ ಬದುಕು ನಡೆಸುತ್ತಿರುವುದು ದುರದುಷ್ಟಕರ ಸಂಗತಿಯಾಗಿದೆ, ಇಂತಹ ವಂಚಿತ ಸಮುದಾಯಕ್ಕೆ ಪ್ರಮಾಣಿಕವಾಗಿ ವಸತಿ, ನಾಗರೀಕ ಸೌಲಭ್ಯಗಳು ಕಲ್ಪಿಸಬೇಕಾದ ಅಧಿಕಾರಿಗಳು ಗುಡಿಸಲುಗಳನ್ನು ತೆರವುಗೊಳಿಸುವ ಹುನ್ನಾರ ನಡೆಸುತ್ತಿದ್ದಾರೆ, ಇಂತಹ ವಂಚಿತ ಸಮುದಾಯಗಳು ವಾಸವಾಗಿರುವ ಗುಡಿಸಲು ಪ್ರದೇಶವನ್ನು ತೆರವುಗೊಳಿಸಲು ನಗರಸಭೆ ಮುಂದಾದರೆ ನಗರದ ಸಾವಿರಾರು ಸ್ಲಂ ನಿವಾಸಿಗಳಿಂದ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ, ಪ್ರತಿಭಟನೆ ವೇಳೆ ಆಗುವ ಯಾವುದೇ ಅನಾಹುತಗಳಿಗೆ ನೇರವಾಗಿ ನಗರಸಭೆ ಪೌರಾಯುಕ್ತರು ಮತ್ತು ಸಿಬ್ಬಂದಿಗಳಿಗೆ ಕಾರಣರಾಗುತ್ತಿರಿ ಎಂದು ಮನವಿ ಮೂಲಕ ಎಚ್ಚರಿಸಲಾಗಿದೆ.
ಗದಗ ಜಿಲ್ಲಾ ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಅಶೋಕ ಕುಡತಿನ್ನಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹರುನಿಸಾ ಢಾಲಾಯತ, ಸ್ಲಂ ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಶರಣಪ್ಪ ಸೂಡಿ, ಮೆಹಬೂಬಸಾಬ ಬಳ್ಳಾರಿ, ಖಾಜಾಸಾಬ ಇಸ್ಮಾಯಿಲನವರ, ಮಲೇಶಪ್ಪ ಕಲಾಲ, ಮುನ್ನಾ ಅಗಡಿ, ಮೆಹರುನಿಸಾ ಡಂಬಳ, ಮೂಮುನ ಬೈರಕದಾರ, ಮಕ್ತುಮಸಾಬ ಮುಲ್ಲಾನವರ, ಮಂಜುನಾಥ ಶ್ರಿಗಿರಿ, ದಾದು ಗೋಸಾವಿ, ರವಿಕುಮಾರ ಗೋಸಾವಿ, ಸಾಕ್ರುಬಾಯಿ ಗೋಸಾವಿ, ಮಂಜುನಾಥ ಒಂಟಿಯಲಿ, ರೇಷ್ಮಾ ಢಾಲಾಯತ, ಶಂಕ್ರ್ಪ ಶಿರಹಟ್ಟಿ, ಗೌಸಸಾಬ ಅಕ್ಕಿ, ಸಲೀಂ ಹರಿಹರ ಹಾಗೂ ನಗರದ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಪ್ರತಿಭಟಣೆಯಲ್ಲಿ ಭಾಗವಹಿಸಿದ್ದರು.