ವೀರಶೈವರಿಗೆ ಆಚಾರಕ್ಕೀಂತ ಅಲಂಕಾರ ಮತ್ತೋಂದಿಲ್ಲ
There is no other decoration for Veerashaivas than ritual
ಶಿಗ್ಗಾವಿ 30 : ಚರ್ಮಾಂಭರನಾದ ಶಿವನು ಬಾಹ್ಯ ಅಲಂಕಾರ ಪ್ರೇಮಿಯಾಗಿರದೇ, ಆಚಾರೀ್ರಯನಾಗಿದ್ದಾನೆ. ವೀರಶೈವರಿಗೆ ಆಚಾರಕ್ಕೀಂತ ಅಲಂಕಾರ ಮತ್ತೋಂದಿಲ್ಲ. ಆ ಹಿನ್ನಲೆಯಲ್ಲಿ ವೀರಶೈವರು ಆಚಾರೀ್ರಯರಾಗಬೇಕು ಎಂದು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಫಾದರು ನುಡಿದರು.
ಬಿಸನಳ್ಳಿ ಗ್ರಾಮದ ಶ್ರೀ ಜ.ಪಂ.ವೇ.ಆ.ಸಂ.ಸಂ.ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ 4 ನೇ ದಿನದ ಧರ್ಮಸಭೆಯನ್ನುದ್ದೇಸಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು, ಸಂಪತ್ತು ಇರುವವರೆಗೆ ಮಾತ್ರ, ಮನುಷ್ಯ ಅಲಂಕಾರ ಪ್ರೀಯನಾಗಿ ಮೇರೆಯುತ್ತಾನೆ. ಆದರೆ ಅದು ಶಾಶ್ವತವಲ್ಲ, ವೀರಶೈವ ಧರ್ಮದಲ್ಲಿ ಶಾಶ್ವತವಾದ ಅಲಂಕಾರವೆಂದರೆ ಆಚಾರವಾಗಿದೆ ಎಂದು ನುಡಿದರು.
ಶಿವಗಂಗಾ ಡಾ.ಮಲಯಶಾಂತಮುನಿ ಶಿವಾಚಾರ್ಯರು ಮಾತನಾಡಿ, ಈ ಬಿಸನಳ್ಳಿ ಗ್ರಾಮದಲ್ಲಿ ಶ್ರೀ ಕಾಶೀ ಜಗದ್ಗುರುಗಳು ಧರ್ಮಯಜ್ಞ ಪ್ರಾರಂಭಿಸಿದ್ದಾರೆ. ಬೆಳೆ ಬೆಳೆಯುವ ಈ ಫವಿತ್ರಭೂಮಿಯಲ್ಲಿ ಸಂಸ್ಕೃತ ಪಾಠಶಾಲೆಯನ್ನು ತೆರೆದು ಜ್ಞಾನ ಬೆಳೆಯುವಂತ ಭೂಮಿಯನ್ನಾಗಿ ಪರಿವರ್ತಿಸಿ, ವಟುಗಳಮೂಲಕ ಆ ಜ್ಞಾನವನ್ನು ವಿಶ್ವಕ್ಕೆ ಪಸರಿಸುವಂತ ಕೇಲಸ ಮಾಡುತ್ತಿರುವುದು ಕಾಶೀ ಜ್ಞಾನಪೀಠದ ಹಿರಿಮೆಯನ್ನು ಹೆಚ್ಚಿಸಿದಂತಾಗಿದೆ. ಗುರುವಿನ ಗುಲಾಮನಾಗಿ ಗುರುವುಗೆ ತಲೆಬಾಗಿ ಧರ್ಮದ ದಾರಿಯಲ್ಲಿ ನಡೆಯುವುದೇ ಬೃತ್ಯಾಚಾರವಾಗಿದೆ ಎಂದು ಹೇಳಿದರು. ಕೆರೂರ ಡಾ.ಶಿವಕುಮಾರ ಶಿವಾಚಾರ್ಯರು, ಡಾ.ಆರ್.ಎಸ್. ಅರಳೆಲೆಮಠ, ಶೋಭಾ ನಿಸ್ಸಿಮಗೌಡ್ರ, ಪ್ರೇಮಾ ಪಾಟೀಲಮಾತನಾಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 