ವೀರಶೈವರಿಗೆ ಆಚಾರಕ್ಕೀಂತ ಅಲಂಕಾರ ಮತ್ತೋಂದಿಲ್ಲ
There is no other decoration for Veerashaivas than ritual
ಶಿಗ್ಗಾವಿ 30 : ಚರ್ಮಾಂಭರನಾದ ಶಿವನು ಬಾಹ್ಯ ಅಲಂಕಾರ ಪ್ರೇಮಿಯಾಗಿರದೇ, ಆಚಾರೀ್ರಯನಾಗಿದ್ದಾನೆ. ವೀರಶೈವರಿಗೆ ಆಚಾರಕ್ಕೀಂತ ಅಲಂಕಾರ ಮತ್ತೋಂದಿಲ್ಲ. ಆ ಹಿನ್ನಲೆಯಲ್ಲಿ ವೀರಶೈವರು ಆಚಾರೀ್ರಯರಾಗಬೇಕು ಎಂದು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಫಾದರು ನುಡಿದರು.
ಬಿಸನಳ್ಳಿ ಗ್ರಾಮದ ಶ್ರೀ ಜ.ಪಂ.ವೇ.ಆ.ಸಂ.ಸಂ.ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ 4 ನೇ ದಿನದ ಧರ್ಮಸಭೆಯನ್ನುದ್ದೇಸಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು, ಸಂಪತ್ತು ಇರುವವರೆಗೆ ಮಾತ್ರ, ಮನುಷ್ಯ ಅಲಂಕಾರ ಪ್ರೀಯನಾಗಿ ಮೇರೆಯುತ್ತಾನೆ. ಆದರೆ ಅದು ಶಾಶ್ವತವಲ್ಲ, ವೀರಶೈವ ಧರ್ಮದಲ್ಲಿ ಶಾಶ್ವತವಾದ ಅಲಂಕಾರವೆಂದರೆ ಆಚಾರವಾಗಿದೆ ಎಂದು ನುಡಿದರು.
ಶಿವಗಂಗಾ ಡಾ.ಮಲಯಶಾಂತಮುನಿ ಶಿವಾಚಾರ್ಯರು ಮಾತನಾಡಿ, ಈ ಬಿಸನಳ್ಳಿ ಗ್ರಾಮದಲ್ಲಿ ಶ್ರೀ ಕಾಶೀ ಜಗದ್ಗುರುಗಳು ಧರ್ಮಯಜ್ಞ ಪ್ರಾರಂಭಿಸಿದ್ದಾರೆ. ಬೆಳೆ ಬೆಳೆಯುವ ಈ ಫವಿತ್ರಭೂಮಿಯಲ್ಲಿ ಸಂಸ್ಕೃತ ಪಾಠಶಾಲೆಯನ್ನು ತೆರೆದು ಜ್ಞಾನ ಬೆಳೆಯುವಂತ ಭೂಮಿಯನ್ನಾಗಿ ಪರಿವರ್ತಿಸಿ, ವಟುಗಳಮೂಲಕ ಆ ಜ್ಞಾನವನ್ನು ವಿಶ್ವಕ್ಕೆ ಪಸರಿಸುವಂತ ಕೇಲಸ ಮಾಡುತ್ತಿರುವುದು ಕಾಶೀ ಜ್ಞಾನಪೀಠದ ಹಿರಿಮೆಯನ್ನು ಹೆಚ್ಚಿಸಿದಂತಾಗಿದೆ. ಗುರುವಿನ ಗುಲಾಮನಾಗಿ ಗುರುವುಗೆ ತಲೆಬಾಗಿ ಧರ್ಮದ ದಾರಿಯಲ್ಲಿ ನಡೆಯುವುದೇ ಬೃತ್ಯಾಚಾರವಾಗಿದೆ ಎಂದು ಹೇಳಿದರು. ಕೆರೂರ ಡಾ.ಶಿವಕುಮಾರ ಶಿವಾಚಾರ್ಯರು, ಡಾ.ಆರ್.ಎಸ್. ಅರಳೆಲೆಮಠ, ಶೋಭಾ ನಿಸ್ಸಿಮಗೌಡ್ರ, ಪ್ರೇಮಾ ಪಾಟೀಲಮಾತನಾಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 