ವೀರಶೈವರಿಗೆ ಆಚಾರಕ್ಕೀಂತ ಅಲಂಕಾರ ಮತ್ತೋಂದಿಲ್ಲ
There is no other decoration for Veerashaivas than ritual
ಶಿಗ್ಗಾವಿ 30 : ಚರ್ಮಾಂಭರನಾದ ಶಿವನು ಬಾಹ್ಯ ಅಲಂಕಾರ ಪ್ರೇಮಿಯಾಗಿರದೇ, ಆಚಾರೀ್ರಯನಾಗಿದ್ದಾನೆ. ವೀರಶೈವರಿಗೆ ಆಚಾರಕ್ಕೀಂತ ಅಲಂಕಾರ ಮತ್ತೋಂದಿಲ್ಲ. ಆ ಹಿನ್ನಲೆಯಲ್ಲಿ ವೀರಶೈವರು ಆಚಾರೀ್ರಯರಾಗಬೇಕು ಎಂದು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಫಾದರು ನುಡಿದರು.
ಬಿಸನಳ್ಳಿ ಗ್ರಾಮದ ಶ್ರೀ ಜ.ಪಂ.ವೇ.ಆ.ಸಂ.ಸಂ.ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ 4 ನೇ ದಿನದ ಧರ್ಮಸಭೆಯನ್ನುದ್ದೇಸಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು, ಸಂಪತ್ತು ಇರುವವರೆಗೆ ಮಾತ್ರ, ಮನುಷ್ಯ ಅಲಂಕಾರ ಪ್ರೀಯನಾಗಿ ಮೇರೆಯುತ್ತಾನೆ. ಆದರೆ ಅದು ಶಾಶ್ವತವಲ್ಲ, ವೀರಶೈವ ಧರ್ಮದಲ್ಲಿ ಶಾಶ್ವತವಾದ ಅಲಂಕಾರವೆಂದರೆ ಆಚಾರವಾಗಿದೆ ಎಂದು ನುಡಿದರು.
ಶಿವಗಂಗಾ ಡಾ.ಮಲಯಶಾಂತಮುನಿ ಶಿವಾಚಾರ್ಯರು ಮಾತನಾಡಿ, ಈ ಬಿಸನಳ್ಳಿ ಗ್ರಾಮದಲ್ಲಿ ಶ್ರೀ ಕಾಶೀ ಜಗದ್ಗುರುಗಳು ಧರ್ಮಯಜ್ಞ ಪ್ರಾರಂಭಿಸಿದ್ದಾರೆ. ಬೆಳೆ ಬೆಳೆಯುವ ಈ ಫವಿತ್ರಭೂಮಿಯಲ್ಲಿ ಸಂಸ್ಕೃತ ಪಾಠಶಾಲೆಯನ್ನು ತೆರೆದು ಜ್ಞಾನ ಬೆಳೆಯುವಂತ ಭೂಮಿಯನ್ನಾಗಿ ಪರಿವರ್ತಿಸಿ, ವಟುಗಳಮೂಲಕ ಆ ಜ್ಞಾನವನ್ನು ವಿಶ್ವಕ್ಕೆ ಪಸರಿಸುವಂತ ಕೇಲಸ ಮಾಡುತ್ತಿರುವುದು ಕಾಶೀ ಜ್ಞಾನಪೀಠದ ಹಿರಿಮೆಯನ್ನು ಹೆಚ್ಚಿಸಿದಂತಾಗಿದೆ. ಗುರುವಿನ ಗುಲಾಮನಾಗಿ ಗುರುವುಗೆ ತಲೆಬಾಗಿ ಧರ್ಮದ ದಾರಿಯಲ್ಲಿ ನಡೆಯುವುದೇ ಬೃತ್ಯಾಚಾರವಾಗಿದೆ ಎಂದು ಹೇಳಿದರು. ಕೆರೂರ ಡಾ.ಶಿವಕುಮಾರ ಶಿವಾಚಾರ್ಯರು, ಡಾ.ಆರ್.ಎಸ್. ಅರಳೆಲೆಮಠ, ಶೋಭಾ ನಿಸ್ಸಿಮಗೌಡ್ರ, ಪ್ರೇಮಾ ಪಾಟೀಲಮಾತನಾಡಿದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 