ಉಗಾರದಲ್ಲಿ ಸರಣಿ ಮನೆಗಳ ಕಳ್ಳತನ
Theft of row houses in Ugara
ಉಗಾರದಲ್ಲಿ ಸರಣಿ ಮನೆಗಳ ಕಳ್ಳತನ
ಕಾಗವಾಡ, 06 ; ತಾಲ್ಲೂಕಿನ ಉಗಾರ ಖುರ್ದ ಪಟ್ಟಣದ ಮೂರು ಮನೆಗಳಲ್ಲಿ ಮಂಗಳವಾರ ನಸುಕಿನ ಜಾವದಲ್ಲಿ ಕಳ್ಳರು ಎರಡು ಮನೆ ಬಾಗಿಲು ಮುರಿದು ಹಣ ಒಡವೆಗಳನ್ನು ದೋಚಿ ಮತ್ತೊಂದು ಮನೆಯ ಹೆಂಚು ಒಡೆದು ಪರಾರಿಯಾಗಿರು ಘಟನೆ ನಡೆದಿದೆ.
ಉಗಾರ ಖುರ್ದ ಪಟ್ಟಣದ ವೈಶಾಲಿ ಪ್ರವೀಣ ಶೆಟ್ಟಿ ಅವರು ಮನೆಗೆ ಬೀಗ ಹಾಕಿ ಸಂಬಂದಿಗಳ ಮನೆಗೆ ಹೋದಾಗ ಮನೆ ಬೀಗ ಮುರಿದು ಬಟ್ರಿ ಇದ್ದ ಐವತ್ತು ಐದು ಸಾವಿರ ಹಣ ಹಾಗೂ ಅರವತ್ತು ಗ್ರಾಂ ಬೆಳ್ಳಿ ದೋಚಿದ್ದಾರೆ ಮತ್ತೊಂದು ಮನೆ ಮಾಲೀಕರಾದ ತೋಪಿಕ್ ಮುಲ್ಲಾ ಅವರ ಮನೆ ಮೇಲಿನ ಮಹಡಿಯಲ್ಲಿ ತೆಳಗಡೆ ಮನೆಯ ಬಾಗಿಲು ಬೀಗ ಹಾಕಿ ಮಲಗಿರುವಾಗ ಅವರು ಮಲಗಿರುವ ಮನೆಯ ಬೀಗ ಮುರಿದು ಇಪ್ಪತ್ತು ಸಾವಿರ ನಗದು ಹಣ ಹಾಗೂ ಎಂಟು ಗ್ರಾಂ ಚಿನ್ನ ದೋಚಿದ್ದಾರೆ ಅದರಂತೆ ಕಲ್ಲಪ್ಪ ಅಕ್ಕಿ ಅವರ ಮನೆಯ ಮೇಲಿನ ಹಂಚನ್ನು ತೆಗೆದು ಬೀರೂ ಒಡೆದು ಜಾಲಾಡಿ ಅಲ್ಲಿ ಏನು ಸಿಗದೆ ಇರುವುದರಿಂದ ಅಲ್ಲಿಂದ ಕಾಲಕಿತ್ತಿದ್ದಾರೆ.
ಸ್ಥಳಕ್ಕೆ ಕಾಗವಾಡ ಠಾಣೆಯ ಪಿಎಸ್ಐ ರಾಘವೇಂದ್ರ ಖೋತ ಭೇಟಿ ನೀಡಿ ಪರೀಶೀಲನೆ ನಡೆಸಿದರು ಬೆಳಗಾವಿಯಿಂದ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಂಡ ತನಿಖೆ ನಡೆಸಿದರು.ಸಮೀಪದ ಸಿ ಸಿ ಟಿವಿಗಳಲ್ಲಿ ಕಳ್ಳರ ಚಲನ ವಲನಗಳ ದೃಶ್ಯ ಸೇರೆಯಾಗಿದ್ದ ಅದನ್ನು ಆಧರಿಸಿ ಕಳ್ಳರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ 