ಬದುಕು ಸಾರ್ಥಕಗೊಳಿಸಲು ಸಾಹಿತ್ಯದ ಮೌಲ್ಯ ಅಗತ್ಯ: ಬಂಡಿ

ಬದುಕು ಸಾರ್ಥಕಗೊಳಿಸಲು ಸಾಹಿತ್ಯದ ಮೌಲ್ಯ ಅಗತ್ಯ: ಬಂಡಿ The value of literature is essential to make life meaningful: Bundi

ಸವದತ್ತಿ 30: ಬದುಕನ್ನು ಸಾರ್ಥಕತೆಯ ಕಡೆಗೆ ಕೊಂಡೊಯ್ಯುವುದು ಮನುಷ್ಯನ ಗುರಿಯಾಗಬೇಕು. ಇಂತಹ ಶ್ರೇಷ್ಠ ಮೌಲ್ಯಗಳನ್ನು ನಾವು ಸಾಹಿತ್ಯದಲ್ಲಿ ಕಾಣಲು ಸಾಧ್ಯ, ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್‌. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ಡಾ. ಮಲ್ಲಪ್ಪ ಎನ್‌. ಬಂಡಿ ಹೇಳಿದರು.ಇಲ್ಲಿನ ಕೆ.ಎಲ್‌.ಇ. ಸಂಸ್ಥೆಯ ಎಸ್‌. ವಿ. ಎಸ್‌. ಬೆಳ್ಳುಬ್ಬಿ ಮಹಾವಿದ್ಯಾಲಯದ ಐಕ್ಯೂಎಸಿ  ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ ಏರಿ​‍್ಡಸಿದ್ದ ಭಾರತೀಯ ಮತ್ತು ಪಾಶ್ಚಾತ್ಯ ಕಾವ್ಯ ಮೀಮಾಂಸೆ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬದುಕಿನ ಅನುಭವಗಳು ಕಲಾತ್ಮಕವಾಗಿ ಅಭಿವ್ಯಕ್ತಿಗೊಂಡಾಗ ಅದು ಸಾಹಿತ್ಯವಾಗುತ್ತದೆ ಅದೇ ಭಾವನೆಗಳು ಚಿತ್ರದ ರೂಪ ಪಡೆದರೆ ಚಿತ್ರಕಲೆಯಾಗುತ್ತದೆ. ಲೋಕದ ಅನುಭವಗಳನ್ನು ಅಕ್ಷರ ರೂಪಕ್ಕಿಳಿಸುವಲ್ಲಿ ಮನುಷ್ಯನ ಪ್ರತಿಭೆ ಅಡಗಿರುತ್ತದೆ. ಸಾಮಾನ್ಯರಲ್ಲಿ ಇರದ ಅಂತರ್‌ದೃಷ್ಟಿ ಕವಿ ಮತ್ತು ಕಲಾವಿದರಲ್ಲಿ ಇರುತ್ತದೆ. ಈ ಕಾರಣಕ್ಕಾಗಿಯೇ ಅವರು ಸಮಾಜದಲ್ಲಿ ವಿಶಿಷ್ಟವಾಗಿ ಮತ್ತು ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ, ಎಂದು ಅಭಿಪ್ರಾಯಪಟ್ಟರು.  

ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಎನ್‌. ಆರ್‌. ಸವತಿಕರ, ಪ್ರೊ. ಕೆ. ರಾಮರೆಡ್ಡಿ, ಪ್ರೊ. ವಿ. ಎಸ್‌. ಮೀಶಿ, ಮೋಹನ್ ಬೆಣಚಮರ್ಡಿ, ಐಶ್ವರ್ಯ ಗುಡೆನವರ ಹಾಗೂ ಪ್ರತಿಭಾ ಕರನಾಯ್ಕರ, ಸರಸ್ವತಿ ಪಾಣಿಗಟ್ಟಿ ಸೌಂದರ್ಯ ಸೂರ್ಯವಂಶಿ, ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ಹಾಗೂ ಸಿಬ್ಬಂದಿ, ಉಪಸ್ಥಿತರಿದ್ದರು.