ಶಿಕ್ಷಕನೇ ಸಮುದಾಯದ ಮಾರ್ಗದರ್ಶಕ: ಶ್ರೀಶೈಲ ಕುರಣಿ
The teacher is the mentor of the community: Srishaila Kurani
ಶಿಕ್ಷಕನೇ ಸಮುದಾಯದ ಮಾರ್ಗದರ್ಶಕ: ಶ್ರೀಶೈಲ ಕುರಣಿ
ರನ್ನ ಬೆಳಗಲಿ 05: ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಶಾಲೆಯ ಮುಖ್ಯ ಶಿಕ್ಷಕಿಯಾದ ಶಶಿಕಲಾ ಕಠಾರೆ ಸೇವಾ ನಿವೃತ್ತಿ, ಬೀಳ್ಕೊಡುಗೆ ಸನ್ಮಾನ ಸಮಾರಂಭ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕಾ ದೈಹಿಕ ಶಿಕ್ಷಣ ಪರೀವೀಕ್ಷಾಣಾಧಿಕಾರಿ ಶ್ರೀಶೈಲ ಕುರಣಿ ಶಿಕ್ಷಕ ವೃತ್ತಿ ಪವಿತ್ರವಾದದ್ದು, ಶಿಕ್ಷಕನೇ ಸಮುದಾಯದ ಮಾರ್ಗದರ್ಶಕ ನಾಗಿದ್ದಾನೆ. ಕಠಾರೆ ದಂಪತಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಗೈದು ವಿಶ್ರಾಂತ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಶೈಕ್ಷಣಿಕ ಅನುಭವಗಳು ಇಂದಿನ ಯುವ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸದಾ ಲಭ್ಯವಾಗಬೇಕು.
ತಾವು ಸೇವೆಯಿಂದ ನಿವೃತ್ತಿ ಅಲ್ಲ, ವಯಸ್ಸಿನಿಂದ ನಿವೃತ್ತಿ. ಆದರಿಂದ ಮಕ್ಕಳು ನಿಮಗಾಗಿ ಕಾಯುತ್ತೇವೆ ಅವರ ಅನಿಸಿಕೆಯಲ್ಲಿ ನಿಮ್ಮ ವ್ಯಕ್ತಿತ್ವ ಅರಳಿದೆ. ಬಿಡುವಿನ ಅವಧಿಯಲ್ಲಿ ನಮ್ಮ ಶಾಲೆಗೆ ಸದಾ ಸ್ವಾಗತಿಸುತ್ತೇವೆ. ಶಿಕ್ಷಕರಾಗಿ ಬಂದು ಮತ್ತೆ ಶಾಲೆಯನ್ನು ಬೆಳಗಿಸಿ ಎಂದು ತಿಳಿಸಿದರು.ನಿವೃತ್ತ ಮುಖ್ಯೋಪಾಧ್ಯಯ ಜೆ ಆರ್ ಹಂಚಾಟೆ, ಎಸ್ ಎಲ್ ಕಠಾರೆ ದಂಪತಿಗಳು ತಮ್ಮ ಸೇವಾ ಅನುಭವಗಳನ್ನು ಹಂಚಿಕೊಂಡರು. ಅಧ್ಯಕ್ಷತೆ ವಹಿಸಿದ ಯಮನಪ್ಪ ಆಲಗೂರ, ಹಿರಿಯ ಶಿಕ್ಷಕರಾದ ಆರ್ ಡಿ ಗಲಗಲಿ, ಮಹಾಂತೇಶ ಗೂಳಪ್ಪಗೋಳ, ರಾಘವೇಂದ್ರ ನೀಲನ್ನವರ, ಆರ್ ಡಿ ಬಂಡಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ಉಪಾಧ್ಯಕ್ಷೆ ಪ್ರೇಮಾ ಲೋಹಾರ, ನ್ಯಾಯವಾದಿ ಸದಾಶಿವ ಹಳ್ಳೂರ, ಡಿ ಎಸ್ಎಸ್ ಮುಖಂಡ ಭೀಮರಾವ ಕಾಳವ್ವಗೋಳ, ಎಸ್.ಡಿ.ಎಮ್.ಸಿ ಸದಸ್ಯರಾದ ಸದಾಶಿವ ಗುಲಗಂಜಿಕೊಪ್ಪ (ಪೂಜೇರಿ), ರಾಜೇಶ್ವರಿ ಪುರಾಣಿಕ, ಲಕ್ಷ್ಮೀ ನಾವಿ, ಬಂದವ್ವ ಲಾಲಸಿಂಗಿ, ಮಹಾನಂದ ಬಬಲಾದಿ, ಪವಿತ್ರಾ ಜಿರಗಾಳ, ಶಿಕ್ಷಕ ಸಿಬ್ಬಂದಿಗಳಾದ ಎಸ್ ಪಿ ಜೋಶಿ, ಎಚ್ ಬಿ ಜಮಾದಾರ, ರೂಪಾ ದಂಡಿನ, ಸದಾಶಿವ ಪುರಾಣಿಕ, ಸದಾಶಿವ ಹನಗಂಡಿ, ಹಣಮಂತ ಮಲವಾಡಿ ಮತ್ತು ಪಾಲಕ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 