ಲೇಖನಿ ಖಡ್ಗಕ್ಕಿಂತಲೂ ಹರಿತವಾದುದು: ಕಲ್ಲಗನೂರ
ಲೋಕದರ್ಶನ ವರದಿ
ಗಜೇಂದ್ರಗಡ 09: ಪ್ರಾಚೀನ ಕಾಲದಿಂದಲೂ ಖಡ್ಗಕಿಂತಲೂ ಲೇಖನಿ ಅರಿತವಾಗಿದೆ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೇ ಈ ದಿಸೆಯಲ್ಲಿ ಹವ್ಯಾಸಿ ಬರಹಗಾರ ಚೆನ್ನು ಸಮಗಂಡಿಯವರ ಸತ್ಯ ಮಿಥ್ಯ ಮಾಸ ಪತ್ರಿಕೆಯನ್ನ ಆರಂಭಿಸುವ ಮೂಲಕ ಪತ್ರಿಕಾ ರಂಗವನ್ನೇ ವೃತ್ತಿಯಾಗಿಸಿಕೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದು ಕಲಾವಿದ ಪುಂಡಲಿಕ ಕಲ್ಲಿಗನೂರ ಹೇಳಿದರು.
ಅವರು ಪಟ್ಟಣದ ಜಗದಾಂಬ ಕಲ್ಯಾಣ ಮಂಟಪದಲ್ಲಿ ಜರುಗಿದ ಸತ್ಯ ಮಿಥ್ಯ ಮಾಸ ಪತ್ರಿಕೆ ಬಿಡುಗಡೆಗೋಳಿಸಿ ಮಾತನಾಡಿದರಲ್ಲದೆ ಇಂದಿನ ದಿನಮಾನದಲ್ಲಿ ಪತ್ರಿಕೆಯನ್ನು ನಡೆಸುವುದು ಕಷ್ಟದಾಯಕ ಕೆಲಸ ಪ್ರತಿ ಮಾಸಕೊಮ್ಮೆ ಹೊಸ ಅಚ್ಚರಿಯೊಂದಿಗೆ ಪತ್ರಿಕೆ ಬರಲಿ ಎಂದರು.
ಸಂಪಾದಕ ಚನ್ನು ಸಮಗಂಡಿ ಮಾತನಾಡಿ ಪತ್ರಿಕಾ ರಂಗದೊಂದಿಗೆ ಪ್ರಜಾಪ್ರಭುತ್ವಕ್ಕೆ ಭದ್ರವಾದ ಬುನಾದಿ ಇಗಾಗಿ ಪತ್ರಿಕಾ ರಂಗವನ್ನು ಸಕರ್ಾರದ ನಾಲ್ಕನೇ ಅಂಗ ಎನ್ನುತ್ತಾರೆ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ದಕ್ಕೆ ಬಾರದಂತೆ ಸಾಧಕರನ್ನ ಸಮಾಜಕ್ಕೆ ಪರಿಚಯಿಸುತ್ತಾ ಸ್ವಸ್ಥ ಸಮಾಜ ನಿಮರ್ಾಣಕ್ಕಾಗಿಯೇ ಸತ್ಯ ಮಿಥ್ಯ ಎಂಬ ಪತ್ರಿಕೆ ಆರಂಭಿಸಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಿ ವಿ ಕಂಬಳ್ಯಾಳ ವಹಿಸಿದ್ದರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೇ ಬ್ರ ಕಲ್ಲಿನಾಥ ಭಟ್ಟರು ವಹಿಸಿದ್ದರು. ಮಂಕೇಶ ಪತ್ರಿಕೆಯ ಸಂಪಾದಕರಾದ ಅಕ್ಬರ್ ಬೆಳಗಾಂವ್ಕರ್, ಹನುಮಂತಮ್ಮ ನಾಯಕ, ಸಿ ವ್ಹಿ ಮಾಳಗಿ, ಅರವಿಂದ ಕವಡಿಮಟ್ಟಿ, ಮಾರುತಿ ಮಾಳೋತ್ತರ, ಮಲ್ಲು ಕಸಾಯಿ ರಾಜು ಉಳ್ಳಾಗಡ್ಡಿ, ವಿರೇಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 