1998-99ರಿಂದ ಇತ್ತೀಚಿನವರೆಗೂ ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕೊನೆ ಹಾಡಲು ಇರುವ ಮಾರ್ಗವೆಂದರೆ ಪಿ. ಸಿ. ಹೋಟಾ ಸಮಿತಿಯ ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನ

 1998-99ರಿಂದ ಇತ್ತೀಚಿನವರೆಗೂ ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕೊನೆ ಹಾಡಲು ಇರುವ ಮಾರ್ಗವೆಂದರೆ ಪಿ. ಸಿ. ಹೋಟಾ ಸಮಿತಿಯ ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನ The only way to end the corruption that has been going on in the KPSC since 1998-99 till recently is

ಕೊಪ್ಪಳ 28:  ವೆಬಿನಾರ್ - ಕೆಪಿಎಸ್ಸಿ ಭ್ರಷ್ಟಾಚಾರಕ್ಕೆ ಕೊನೆ ಯಾವಾಗ? 1998-99ರಿಂದ ಇತ್ತೀಚಿನವರೆಗೂ ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕೊನೆ ಹಾಡಲು ಇರುವ ಮಾರ್ಗವೆಂದರೆ ಪಿ. ಸಿ. ಹೋಟಾ ಸಮಿತಿಯ ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನ. ಮತ್ತದು ಕೈಗೂಡಲು ಬಲಿಷ್ಠವಾದಂತ ಹೋರಾಟ ಅನಿವಾರ್ಯ ಎಂದು ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ ರವೀಂದ್ರ ಭಟ್ ಅವರು ನುಡಿದರು. ಉದ್ಯೋಗಾಕಾಂಕ್ಷೀಗಳ ಹೋರಾಟ ಸಮಿತಿ-ಕರ್ನಾಟಕ ಹಮ್ಮಿಕೊಂಡಿದ್ದ ವೆಬಿನಾರ್ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಕೆಪಿಎಸ್ಸಿಯಲ್ಲಿನ ಭ್ರಷ್ಟಾಚಾರ ಕೇವಲ ಇತ್ತೀಚಿನದಲ್ಲ. 1998 ರಿಂದಲೂ ಒಂದಲ್ಲಾ ಒಂದು ಹಗರಣಗಳು ಬೆಳಕಿಗೆ ಬರುತ್ತಲೇ ಇವೆ. ಈ ಹಗರಣಗಳ ಮೊಕದ್ದಮೆಗಳು ಹೈಕೋರ್ಟಿನಿಂದ ಹಿಡಿದು, ಸುಪ್ರೀಂಕೋರ್ಟಿನವರೆಗೂ ಇನ್ನೂ ನಡೆಯುತ್ತಲೇ ಇವೆ. ಇನ್ನು ಕೆಲವೇ ವರ್ಷಗಳು ಕಳೆದರೆ ಅ ಬ್ಯಾಚಿನಲ್ಲಿ ನೇಮಕವಾಗಿ ಆರೋಪ ಎದುರಿಸುತ್ತಿರುವ ಗೆಜೆಟೆಡ್ ಅಧಿಕಾರಿಗಳು ನಿವೃತ್ತರಾಗಲಿದ್ದಾರೆ!  ಆದರೆ ಮೊಕದ್ದಮೆಗಳು ಇನ್ನೂ ಇತ್ಯರ್ಥವಾಗಿಲ್ಲ. ಕೆಪಿಎಸ್ಸಿ ಭ್ರಷ್ಟಾಚಾರವು ಹುಟ್ಟುವುದು ಅದು ನಡೆಸುವ ನೇಮಕಾತಿಗಳಲ್ಲಿ ಮಾತ್ರವಲ್ಲ. ಕೆಪಿಎಸ್ಸಿ ಯ ಸದಸ್ಯರ ನೇಮಕಾತಿಯಿಂದಲೇ ಭ್ರಷ್ಟಾಚಾರ ಪ್ರಾರಂಭವಾಗುತ್ತದೆ ಅದು ನಿಂತಾಗ ಯೋಗ್ಯ ಸದಸ್ಯರ ನೇಮಕ ಆದಾಗ ಅಲ್ಲಿ ನಡೆಯುವ ಬ್ರಷ್ಟಾಚಾರಕ್ಕೆ ಕಡಿವಾಣ ಬೀಳಬಹುದು ಆದರೆ ಇದಕ್ಕಾಗಿ ಯುವಜನರ ಬಲಿಷ್ಠ ಹೋರಾಟದ ಅವಶ್ಯಕತೆ ಇದೆ ಅಂತಹ ಹೋರಾಟವನ್ನು ನಿಮ್ಮ ಸಂಘಟನೆ ನಾಡಿನ ಹಿರಿಯರ ಮಾರ್ಗದರ್ಶನದೊಂದಿಗೆ ನಡೆಸಲಿ ಎಂದು ಆಶಿಸಿದರು. ನ್ಯಾಯಪರವಾದ ಹೋರಾಟದೊಂದಿಗೆ ನಾವಿರುತ್ತೇವೆ ಎಂದರು.ವೆಬಿನಾರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕದ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಸಲಹೆಗಾರರಾದ ಡಾ. ಜಿ.ಎಸ್‌. ಕುಮಾರ್ ಅವರು ಕೆಪಿಎಸ್ಸಿಯಲ್ಲಿನ ಭ್ರಷ್ಟಾಚಾರದ ನಿರ್ಮೂಲನೆಗಾಗಿ ಯುವಜನರ ಸಂಘಟಿತ ಹೋರಾಟ ಅನಿವಾರ್ಯ.  

ಆದರೆ ನಮ್ಮ ಹೋರಾಟ ಅಷ್ಟಕ್ಕೇ ಸೀಮಿತವಾಗಬಾರದು. ಎಲ್ಲ ರೀತಿಯ ನೇಮಕಾತಿಗಳಲ್ಲಿ ನಡೆಯುವ ಭ್ರಷ್ಟಾಚಾರದ ನಿರ್ಮೂಲನೆಗಾಗಿ ಹಾಗೂ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿಗಾಗಿ ಅವಿರತವಾದ ಹೋರಾಟವನ್ನು ಮುನ್ನಡೆಸಬೇಕಾಗುತ್ತದೆ. ಪ್ರತಿ ನೇಮಕಾತಿ ಪ್ರಕ್ರಿಯೆಗಳು ನಡೆಯುವಾಗಲೂ ಯುವಜನತೆಯ ಒಂದು ಎಚ್ಚರಿಕೆಯ ಕಣ್ಣು ಸದಾ ಜಾಗೃತವಾಗಿರಬೇಕಾಗುತ್ತದೆ. ಆಗ ಮಾತ್ರ ನೇಮಕಾತಿಯಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ. ಅಲ್ಲದೆ ಇದುವರೆಗೂ ನಡೆದ ಹೋರಾಟಗಳ ಫಲವಾಗಿಯೇ ಖಾಲಿ ಇರುವ ಹುದ್ದೆಗಳ ಪೈಕಿ ಸುಮಾರು 56,432 ಹುದ್ದೆಗಳ ನೇಮಕಾತಿ ಮಾಡುವುದಾಗಿ ರಾಜ್ಯ ಸರ್ಕಾರ ಮಾತು ಕೊಟ್ಟಿದೆ. ಇದುವರೆಗೂ ಒಳ ಮೀಸಲಾತಿ ವಿಷಯ ಇತ್ಯರ್ಥವಾಗದ ಕಾರಣ ನೀಡಿ ನೇಮಕಾತಿಯನ್ನು ವಿಳಂಬ ಮಾಡುತ್ತಿದ್ದ ಸರ್ಕಾರ ಈಗಲಾದರೂ ನೇಮಕಾತಿ ಪ್ರಕ್ರಿಯೆಯ ಅಧಿಕೃತ ದಿನಾಂಕಗಳನ್ನು ಪ್ರಕಟಿಸಬೇಕೆಂದು ನಾವು ಹೋರಾಟವನ್ನು ಮುಂದುವರಿಸಬೇಕಿದೆ.  

 ಹೋರಾಟದ ಮಾರ್ಗದಿಂದ ವಿಚಲಿತರಾಗದೆ. ಯಾವುದೇ ವಾಮ ಮಾರ್ಗಗಳಿಂದ ಹೇಗಾದರೂ ನೇಮಕಾತಿ ಪಡೆಯಬಹುದೆಂಬ ಭ್ರಮೆಗೆ ಒಳಗಾಗದೆ, ಹಾಗೂ ನಿರಂತರವಾದ ಹೋರಾಟದಲ್ಲಿ ನಂಬಿಕೆ ಕಳೆದುಕೊಳ್ಳದೆ ನಮ್ಮ ಹೋರಾಟಗಳನ್ನು ಮುಂದುವರೆಸಬೇಕು. ಆಗ ಮಾತ್ರವೇ ಗೆಲುವು ನಿಶ್ಚಿತ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕರಾದ ಸಿದ್ದಲಿಂಗ ಬಾಗೇವಾಡಿಯವರು ಕಳೆದ 2011 ರಿಂದ ಹೋರಾಟ ಸಮಿತಿಯು ನಿರುದ್ಯೋಗದ ವಿರುದ್ಧ ನಡೆಸಿಕೊಂಡು ಬರುತ್ತಿರುವ ಚಳುವಳಿಗಳು ಮತ್ತು ಚಟುವಟಿಕೆಗಳನ್ನು ಕುರಿತು ಮಾತನಾಡಿದರು.

ನಾಡಿನ ಹೆಸರಾಂತ ಹೋರಾಟ ಪರ ಗಣ್ಯರಾದ ಜಸ್ಟಿಸ್ ಎನ್‌. ಸಂತೋಷ್ ಹೆಗ್ಡೆ, ನಿವೃತ್ತ ಐಎಎಸ್ ಅಧಿಕಾರಿಗಳಾದ ಶ್ರೀ ಬಾಲಸುಬ್ರಹ್ಮಣ್ಯ, ಎಸ್‌. ಆರ್‌. ಹಿರೇಮರ್ ಮೊದಲಾದವರ ಪಾಲ್ಗೊಳ್ಳುವಿಕೆಯೊಂದಿಗೆ ಹೋರಾಟವನ್ನು ನಡೆಸುತ್ತಿದ್ದು ಮುಂದೆಯೂ ಕೂಡ ಹೋರಾಟದ ಮೂಲಕವೇ ನಮ್ಮ ಹಕ್ಕುಗಳನ್ನು ಸಾಧಿಸಲಾಗುವುದು ಎಂದರು.ಹೋರಾಟ ಸಮಿತಿಯ ಸಹ-ಸಂಚಾಲಕರುಗಳಾದ ವೀರೇಶ ನರೇಗಲ್ ಸ್ವಾಗತಿಸಿದರು. ಟಿ. ಆರ್‌. ಸುನಿಲ್ ಪ್ರಾಸ್ತವಿಕವಾಗಿ ಮಾತನಾಡಿದರು ಹಾಗೂ ಭವಾನಿ ಶಂಕರ್ ಗೌಡ ವಂದಿಸಿದರು.ವಂದನೆಗಳೊಂದಿಗೆ,ತಮ್ಮ ವಿಶ್ವಾಸಿಶರಣು ಪಾಟೀಲ್‌. ಉದ್ಯೋಗ ಕಾಂಕ್ಷಿಗಳ ಹೋರಾಟ ಸಮಿತಿ ಪರವಾಗಿ ಕೊಪ್ಪಳ.