ಶಿಕ್ಷಣದ ಪ್ರಾಮುಖ್ಯತೆಯು ಅದರ ನಿರಂತರತೆಯಲ್ಲಿದೆ: ಹೊಳೆಪ್ಪ

The importance of education lies in its continuity: Holeppa

ಬಿಎಡ್‌. ಪ್ರಶಿಕ್ಷಣಾರ್ಥಿಗಳಿಗೆ ಪೌರತ್ವ ತರಬೇತಿ ಶಿಬಿರ 

ಹಿಡಕಲ್ ಡ್ಯಾಂ 07: ಕಲಿಕೆಯು ಅಜೀವ ಪ್ರಕ್ರಿಯೆಯಾಗಿದ್ದು, ಅದು ನಮ್ಮ ಸಾವಿನೊಂದಿಗೆ ನಿಲ್ಲುತ್ತದೆ. ಸಂಸ್ಕ್ರತಿಗೆ ಶಿಕ್ಷಣದ ಕೊರತೆಯಿದ್ದರೆ ದೇಶ ಉಜ್ವಲ ಭವಿಷ್ಯವನ್ನು ಹೊಂದಲು  ಸಾಧ್ಯವಿಲ್ಲ. ಬದಲಾವಣೆಗೆ ಶಿಕ್ಷಣವೇ ಮುಖ್ಯ. ಕಲಿಕೆ ನಿರಂತರವಾಗಿರಬೇಕು ಆಗ ಮಾತ್ರ ಪ್ರತಿಯೊಬ್ಬರು ಅಭಿವೃದ್ದಿ ಹೊಂದಲು ಸಾಧ್ಯ ಎಂದು ಶಿಶು ಅಭಿವೃದ್ಧಿ  ಯೋಜನಾಧಿಕಾರಿ ಹೊಳೆಪ್ಪ ಅಭಿಪ್ರಾಯಪಟ್ಟರು. 

ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಚಂದ್ರಗಿರಿ ಶಿಕ್ಷಣ ಮಹಾವಿದ್ಯಾಲಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಮಹಿಳಾ ಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ 3 ದಿನಗಳ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಂದುವರೆದು ಮಾತನಾಡುತ್ತ ವಿದ್ಯಾರ್ಥಿಗಳ ವೈಯಕ್ತಿಕ ಮತ್ತು ವೃತ್ತಿ ಬೆಳವಣಿಗೆಯಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ, ಪೌರತ್ವ ತರಬೇತಿ ಮೂಲಕ ಶಿಬಿರಾರ್ಥಿಗಳು ಸಹಕಾರ ಸಹೋದರತೆ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ ಹೊಸಮನಿ ಮಾತನಾಡಿ  ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಹೆಚ್ಚಿದೆ. ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದ್ದೆ ಆದರೆ  ಸುಂದರ ಜವಾಬ್ದಾರಿಯುತ ಸಮಾಜ  ನಿರ್ಮಾಣ ಸಾಧ್ಯ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎ.ಎಲ್ ಪಾಟೀಲ ವಹಿಸಿ ಮಾತನಾಡಿದರು.  ಪ್ರಾರಂಭದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಲರಾದ ಕಿರಣ ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.  ಚಂದ್ರಗಿರಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಜಯಶ್ರೀ ಕೆಂಗೇರ, ಸಾವಿತ್ರಿ ಎಲಿಗಾರ ಉಪಸ್ಥಿತರಿದ್ದರು.