ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶ ತನ್ನದೇ ಆದ ವಿಶೇಷ ಸ್ಥಾನವನ್ನು ಹೊಂದಿದೆ
ಇಂಡಿ 26: ದೇಶದ ಬಹುಪಕ್ಷ ಪದ್ಧತಿ ಆಡಳಿತ ವ್ಯವಸ್ಥೆ ಕಾಂಗ್ರೆಸ್ ತನ್ನದೆಯಾದ ತತ್ವ ಸಿದ್ಧಾಂತಗಳನ್ನು ಹೊಂದಿದೆ. ಸರ್ವ ಸಮುದಾಯವನ್ನು ಸರ್ವರಿಗೂ ಸಮಬಾಳು ಸಮಪಾಲು ಎಂಬ ತತ್ವದಡಿಯಲ್ಲಿ ನ್ಯಾಯ, ಧರ್ಮದಲ್ಲಿ ರಾಜಕೀಯ ಮಾಡುತ್ತಿರುವ ಪಕ್ಷ ಏಕೈಕವಾಗಿದೆ ಎಂದು ಸಿಂದಗಿ ಶಾಸಕ ಅಶೋಕ್ ಮನಗೂಳಿ ಹೇಳಿದರು. ತಾಂಬಾ ಗ್ರಾಮದಲ್ಲಿ 2023 -24 ನೇ ಸಾಲಿನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅಂದಾಜು ಒಂದು ಕೋಟಿ ರೂಪಾಯಿ ಮೌಲ್ಯದ ಸಿಸಿ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದರು. ಅವರು ಕರ್ನಾಟಕ ಮಂತ್ರಿಗಳಾದ ’ಸಿದ್ದರಾಮಯ್ಯನವರು ಬಡವರ ಹಿಂದುಳಿದವರ ಅಲ್ಪಸಂಖ್ಯಾತರ ಹಿತ ಚಿಂತಕರಾಗಿದ್ದರೆ, ದೇಶದಲ್ಲಿ ಕರ್ನಾಟಕ ರಾಜ್ಯ ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದ ಧೀಮಂತ ನಾಯಕ, ರಾಜಕಾರಣ ಶಾಶ್ವತ ಅಲ್ಲ ಎಂಬುದು ಮನುಷ್ಯತ್ವದ ಲಕ್ಷಣ, ನಾನು ಚುನಾವಣಾ ಪೂರ್ವದಲ್ಲಿ ನಾನು ಕೊಟ್ಟ ಮಾತುಗಳನ್ನು ಕುಡಿಯುವ ಯೋಜನೆಯ ನೀರಿನ ಯೋಜನೆ ಪ್ರಾರಂಭವಾಯಿತು, ತ್ವರಿತವಾಗಿ ಮುಗಿಯುವ ಹಂತದಲ್ಲಿದೆ. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಈ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ವಿದ್ಯಾರ್ಥಿಗಳ ವಸತಿ ನಿಲಯ, ಬಸ್ ನಿಲ್ದಾಣ, ಸಮಾಜ ಆರೋಗ್ಯ ಕೇಂದ್ರ, ಇನ್ನೂ ಹಲವಾರು ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಸೂಚಿಸುತ್ತೇನೆ, ನಾನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಒಂದು ಬಾರಿ ಸಿಂದಗಿ ಮತಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತು ತಿಳಿಸಿದಾಗ ನನ್ನ ಮತ ಕ್ಷೇತ್ರದ ಅಭಿವೃದ್ಧಿಗೆ ಹಣ ಮಂಜೂರು ಮಾಡಲು ಇಲಾಖೆ ಸಚಿವರು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಲ್ಲಯ್ಯ ಸಾರಂಗಮಠ, ಮಂಜುನಾಥ್ ಕಾಮಗೊಂಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಜಾಕ್ ಚಿಕ್ಕಗಸಿ, ಉಪಾಧ್ಯಕ್ಷ ರವೀಂದ್ರ ನಡಗಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಚಪ್ಪ ಗುಳೇದ, ಅಪ್ಪಣ್ಣ ಕಲ್ಲೂರ, ಗ್ರಾಮದ ಹಿರಿಯರಾದ ಅಣ್ಣಾರಾಯ ಗೌಡ ಪಾಟೀಲ, ಎಸ್ ಎಸ್ ಕನ್ನಾಳ, ಜೆ. ಎಸ್. ಹತ್ತಳ್ಳಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಯಾನಂದ ನಿಂಬಾಳ, ಪರಶು ಬಿಸನಾಳ, ಸರ್ಕಾರಿ ಪ್ರೌಢಶಾಲೆ ಎಸ್ ಡಿ ಎಮ್ ಸಿ ಅಧ್ಯಕ್ಷ ಸಿದ್ದು ಹತ್ತಳ್ಳಿ, ಪುಂಡಲಿಕ್ ಹೂಗಾರ, ಬಸವರಾಜ ಅವಟಿ, ಶಾಂತಪ್ಪ ಹಂಚಿನಾಳ, ಪುಟ್ಟ ಗೌಡ ಪಾಟೀಲ್, ಮಹಮ್ಮದ್ ವಾಲಿಕಾರ್, ಫಾರೂಕ್ ಮುಲ್ಲಾ, ಸಿದ್ದಗೊಂಡಪ್ಪ ಹಿರೇಕುರುಬರ, ವಿಜಯಕುಮಾರ್ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.ತಾಂಬಾ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸಿಂದಗಿ ಶಾಸಕ ಅಶೋಕ್ ಮನಗೂಳಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.