ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ದೇಶದ ಸಾಮಾನ್ಯ ಜನರನ್ನು ನಿರಾಶೆಗೊಳಿಸಿದೆ

ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ದೇಶದ ಸಾಮಾನ್ಯ ಜನರನ್ನು ನಿರಾಶೆಗೊಳಿಸಿದೆ The budget presented by the central government has disappointed the common people of the country

ರಾಣೇಬೆನ್ನೂರು 02 : ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಮಧ್ಯಮ ವರ್ಗಕ್ಕೆ ಯಾವುದೇ ನಿಜವಾದ ಆದಾಯ ತೆರಿಗೆ ರಿಯಾಯಿತಿ ಇಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆಹಾರ, ಇಂಧನ, ಶಿಕ್ಷಣ ಮತ್ತು ಆರೋಗ್ಯ ವೆಚ್ಚಗಳಿಗೆ ಈ ಬಜೆಟ್ ಸ್ಪಂದಿಸಿಲ್ಲ.ಯುವಜನರಿಗೆ ಉದ್ಯೋಗ ಬೇಕಿತ್ತು, ಘೋಷಣೆಗಳಲ್ಲ. ಆದರೆ ಉದ್ಯೋಗ ಸೃಷ್ಟಿಗೆ ಸ್ಪಷ್ಟ ಮಾರ್ಗಸೂಚಿ ಇಲ್ಲ, ಹೊಸ ಉದ್ಯೋಗಾರ್ಥಿಗಳಿಗೆ ಭರವಸೆ ಇಲ್ಲ.ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಉತ್ಪಾದನಾ ವೆಚ್ಚ, ಆದಾಯ ಭದ್ರತೆ ಕುರಿತು ಸ್ಪಷ್ಟತೆ ಬೇಕಿತ್ತು. ಆದರೆ ಈ ಬಜೆಟ್ನಲ್ಲಿ ಮೌನವಷ್ಟೇ ಕಂಡುಬಂದಿದೆ.ಇದು ಜನಕೇಂದ್ರಿತ ಬಜೆಟ್ ಅಲ್ಲ ಹಿ ಅಂಕಿ-ಅಂಶಗಳ ಬಜೆಟ್‌. ಸಮಸ್ಯೆಗಳಿಗೆ ಪರಿಹಾರ ನೀಡುವ ಬಜೆಟ್ ಆಗಬೇಕಿತ್ತು, ಆದರೆ ಇದು ಕೇವಲ ನೀರೀಕ್ಷೆಗಳ ಪಟ್ಟಿ ಆಗಿದೆ.ಈ ಬಜೆಟ್ ಸಾಮಾನ್ಯ ಭಾರತೀಯರ ನಂಬಿಕೆಯನ್ನು ಮರಳಿ ತರುವಲ್ಲಿ ವಿಫಲವಾಗಿದೆ.“ದೇಶಕ್ಕೆ ಶೀರ್ಷಿಕೆಗಾಗಿ ಬಜೆಟ್ ಬೇಡ ಶ್ರಿ ಮನೆಮನೆಗೆ ನಿಟ್ಟುಸಿರು ಕಡಿಮೆ ಮಾಡುವ ಬಜೆಟ್ ಬೇಕು.”- ಪ್ರಕಾಶ ಕೆ. ಕೋಳಿವಾಡ, ಶಾಸಕರು  ವಿಧಾನಸಭಾ ಕ್ಷೇತ್ರ. ರಾಣೇಬೆನ್ನೂರು.