ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ದೇಶದ ಸಾಮಾನ್ಯ ಜನರನ್ನು ನಿರಾಶೆಗೊಳಿಸಿದೆ
The budget presented by the central government has disappointed the common people of the country
ರಾಣೇಬೆನ್ನೂರು 02 : ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಮಧ್ಯಮ ವರ್ಗಕ್ಕೆ ಯಾವುದೇ ನಿಜವಾದ ಆದಾಯ ತೆರಿಗೆ ರಿಯಾಯಿತಿ ಇಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆಹಾರ, ಇಂಧನ, ಶಿಕ್ಷಣ ಮತ್ತು ಆರೋಗ್ಯ ವೆಚ್ಚಗಳಿಗೆ ಈ ಬಜೆಟ್ ಸ್ಪಂದಿಸಿಲ್ಲ.ಯುವಜನರಿಗೆ ಉದ್ಯೋಗ ಬೇಕಿತ್ತು, ಘೋಷಣೆಗಳಲ್ಲ. ಆದರೆ ಉದ್ಯೋಗ ಸೃಷ್ಟಿಗೆ ಸ್ಪಷ್ಟ ಮಾರ್ಗಸೂಚಿ ಇಲ್ಲ, ಹೊಸ ಉದ್ಯೋಗಾರ್ಥಿಗಳಿಗೆ ಭರವಸೆ ಇಲ್ಲ.ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಉತ್ಪಾದನಾ ವೆಚ್ಚ, ಆದಾಯ ಭದ್ರತೆ ಕುರಿತು ಸ್ಪಷ್ಟತೆ ಬೇಕಿತ್ತು. ಆದರೆ ಈ ಬಜೆಟ್ನಲ್ಲಿ ಮೌನವಷ್ಟೇ ಕಂಡುಬಂದಿದೆ.ಇದು ಜನಕೇಂದ್ರಿತ ಬಜೆಟ್ ಅಲ್ಲ ಹಿ ಅಂಕಿ-ಅಂಶಗಳ ಬಜೆಟ್. ಸಮಸ್ಯೆಗಳಿಗೆ ಪರಿಹಾರ ನೀಡುವ ಬಜೆಟ್ ಆಗಬೇಕಿತ್ತು, ಆದರೆ ಇದು ಕೇವಲ ನೀರೀಕ್ಷೆಗಳ ಪಟ್ಟಿ ಆಗಿದೆ.ಈ ಬಜೆಟ್ ಸಾಮಾನ್ಯ ಭಾರತೀಯರ ನಂಬಿಕೆಯನ್ನು ಮರಳಿ ತರುವಲ್ಲಿ ವಿಫಲವಾಗಿದೆ.“ದೇಶಕ್ಕೆ ಶೀರ್ಷಿಕೆಗಾಗಿ ಬಜೆಟ್ ಬೇಡ ಶ್ರಿ ಮನೆಮನೆಗೆ ನಿಟ್ಟುಸಿರು ಕಡಿಮೆ ಮಾಡುವ ಬಜೆಟ್ ಬೇಕು.”- ಪ್ರಕಾಶ ಕೆ. ಕೋಳಿವಾಡ, ಶಾಸಕರು ವಿಧಾನಸಭಾ ಕ್ಷೇತ್ರ. ರಾಣೇಬೆನ್ನೂರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 