ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ದೇಶದ ಸಾಮಾನ್ಯ ಜನರನ್ನು ನಿರಾಶೆಗೊಳಿಸಿದೆ
The budget presented by the central government has disappointed the common people of the country
ರಾಣೇಬೆನ್ನೂರು 02 : ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಮಧ್ಯಮ ವರ್ಗಕ್ಕೆ ಯಾವುದೇ ನಿಜವಾದ ಆದಾಯ ತೆರಿಗೆ ರಿಯಾಯಿತಿ ಇಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆಹಾರ, ಇಂಧನ, ಶಿಕ್ಷಣ ಮತ್ತು ಆರೋಗ್ಯ ವೆಚ್ಚಗಳಿಗೆ ಈ ಬಜೆಟ್ ಸ್ಪಂದಿಸಿಲ್ಲ.ಯುವಜನರಿಗೆ ಉದ್ಯೋಗ ಬೇಕಿತ್ತು, ಘೋಷಣೆಗಳಲ್ಲ. ಆದರೆ ಉದ್ಯೋಗ ಸೃಷ್ಟಿಗೆ ಸ್ಪಷ್ಟ ಮಾರ್ಗಸೂಚಿ ಇಲ್ಲ, ಹೊಸ ಉದ್ಯೋಗಾರ್ಥಿಗಳಿಗೆ ಭರವಸೆ ಇಲ್ಲ.ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಉತ್ಪಾದನಾ ವೆಚ್ಚ, ಆದಾಯ ಭದ್ರತೆ ಕುರಿತು ಸ್ಪಷ್ಟತೆ ಬೇಕಿತ್ತು. ಆದರೆ ಈ ಬಜೆಟ್ನಲ್ಲಿ ಮೌನವಷ್ಟೇ ಕಂಡುಬಂದಿದೆ.ಇದು ಜನಕೇಂದ್ರಿತ ಬಜೆಟ್ ಅಲ್ಲ ಹಿ ಅಂಕಿ-ಅಂಶಗಳ ಬಜೆಟ್. ಸಮಸ್ಯೆಗಳಿಗೆ ಪರಿಹಾರ ನೀಡುವ ಬಜೆಟ್ ಆಗಬೇಕಿತ್ತು, ಆದರೆ ಇದು ಕೇವಲ ನೀರೀಕ್ಷೆಗಳ ಪಟ್ಟಿ ಆಗಿದೆ.ಈ ಬಜೆಟ್ ಸಾಮಾನ್ಯ ಭಾರತೀಯರ ನಂಬಿಕೆಯನ್ನು ಮರಳಿ ತರುವಲ್ಲಿ ವಿಫಲವಾಗಿದೆ.“ದೇಶಕ್ಕೆ ಶೀರ್ಷಿಕೆಗಾಗಿ ಬಜೆಟ್ ಬೇಡ ಶ್ರಿ ಮನೆಮನೆಗೆ ನಿಟ್ಟುಸಿರು ಕಡಿಮೆ ಮಾಡುವ ಬಜೆಟ್ ಬೇಕು.”- ಪ್ರಕಾಶ ಕೆ. ಕೋಳಿವಾಡ, ಶಾಸಕರು ವಿಧಾನಸಭಾ ಕ್ಷೇತ್ರ. ರಾಣೇಬೆನ್ನೂರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 