ನ.27 ರಂದು ಬಿ.ಎಸ್‌.ಗವಿಮಠ ಸಂಪಾದಿತ ‘ಬೆಳಗಾವಿ ಒಂದು ಅಧ್ಯಯನ’ ಗ್ರಂಥ ಲೋಕಾರ್ಪಣೆ

ನ.27 ರಂದು ಬಿ.ಎಸ್‌.ಗವಿಮಠ ಸಂಪಾದಿತ ‘ಬೆಳಗಾವಿ ಒಂದು ಅಧ್ಯಯನ’ ಗ್ರಂಥ ಲೋಕಾರ್ಪಣೆ The book 'Belgaavi: A Study' edited by B.S. Gavimath was launched on November 27th.

ಬೆಳಗಾವಿ 24: ನಗರದ ಹಿರಿಯ ಸಾಹಿತಿ, ಕೆಎಲ್‌ಇ ಇತಿಹಾಸಕಾರ, ಶಿಕ್ಷಣತಜ್ಞ, ಪ್ರಾ.ಬಿ.ಎಸ್‌.ಗವಿಮಠ ರ 54ನೇ ಕೃತಿ ನವೆಂಬರ್ 27 ರಂದು ಲೋಕಾರ್ಪಣೆಗೊಳ್ಳಲಿದೆ.  

ಕನ್ನಡ ಸಾಹಿತ್ಯ ಭವನ, ಜನಸಾಹಿತ್ಯ ಪೀಠ ಹಾಗೂ ಎಸ್‌.ಡಿ.ಇಂಚಲ ಹಾಗೂ ಉಳವೀಶ ಹುಲೆಪ್ಪನವರಮಠ ಇವರ ಸಹಯೋಗದಲ್ಲಿ   ಕಾರ್ಯಕ್ರಮವು ಚನ್ನಮ್ಮ ಸರ್ಕಲ್‌ನ ಕನ್ನಡ ಸಾಹಿತ್ಯ ಭವನದಲ್ಲಿ  ಅಂದು ಸಂಜೆ 4 ಗಂಟೆಗೆ ನಡೆಯಲಿದೆ. ಅಧ್ಯಕ್ಷತೆಯನ್ನು ಖ್ಯಾತವೈದ್ಯ ಡಾ.ಎಚ್‌.ಬಿ.ರಾಜಶೇಖರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ನ್ಯಾಯವಾದಿ ಎಸ್‌.ಎಂ.ಕುಲಕರ್ಣಿ ಆಗಮಿಸಲಿದ್ದಾರೆ. ಬೆಳಗಾವಿ ವಿಭಾಗದ ನಿವೃತ್ತ ಕಮೀಶ್ನರ್ ಮಹಾಂತೇಶ ಹಿರೇಮಠ(ಐಎಎಸ್‌.ನಿ) ಇವರು ಪುಸ್ತಕ ಲೋಕಾರೆ​‍್ಣಗೊಳಿಸಲಿದ್ದಾರೆ.  

ಕೃತಿಯ ಕುರಿತು ಖ್ಯಾತ ವಾಗ್ಮಿ ಡಾ.ವಿ.ಎಸ್‌.ಮಾಳಿ ಹಾಗೂ ಲಿಂಗರಾಜ ಕಾಲೇಜಿನ ನಿವೃತ್ತ ಇಂಗ್ಲೀಷ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲೆಪ್ಪನವರಮಠ ಮಾತನಾಡಲಿದ್ದಾರೆ ಎಂದು ಸಂಘಟಕರಾದ ಬಸವರಾಜ ಗಾರ್ಗಿ, ರಾಮಚಂದ್ರ ಕಟ್ಟಿ, ಹಾಗೂ ಡಾ.ಮಹೇಶ ಗುರನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.