ನ.27 ರಂದು ಬಿ.ಎಸ್.ಗವಿಮಠ ಸಂಪಾದಿತ ‘ಬೆಳಗಾವಿ ಒಂದು ಅಧ್ಯಯನ’ ಗ್ರಂಥ ಲೋಕಾರ್ಪಣೆ
The book 'Belgaavi: A Study' edited by B.S. Gavimath was launched on November 27th.
ಬೆಳಗಾವಿ 24: ನಗರದ ಹಿರಿಯ ಸಾಹಿತಿ, ಕೆಎಲ್ಇ ಇತಿಹಾಸಕಾರ, ಶಿಕ್ಷಣತಜ್ಞ, ಪ್ರಾ.ಬಿ.ಎಸ್.ಗವಿಮಠ ರ 54ನೇ ಕೃತಿ ನವೆಂಬರ್ 27 ರಂದು ಲೋಕಾರ್ಪಣೆಗೊಳ್ಳಲಿದೆ.
ಕನ್ನಡ ಸಾಹಿತ್ಯ ಭವನ, ಜನಸಾಹಿತ್ಯ ಪೀಠ ಹಾಗೂ ಎಸ್.ಡಿ.ಇಂಚಲ ಹಾಗೂ ಉಳವೀಶ ಹುಲೆಪ್ಪನವರಮಠ ಇವರ ಸಹಯೋಗದಲ್ಲಿ ಕಾರ್ಯಕ್ರಮವು ಚನ್ನಮ್ಮ ಸರ್ಕಲ್ನ ಕನ್ನಡ ಸಾಹಿತ್ಯ ಭವನದಲ್ಲಿ ಅಂದು ಸಂಜೆ 4 ಗಂಟೆಗೆ ನಡೆಯಲಿದೆ. ಅಧ್ಯಕ್ಷತೆಯನ್ನು ಖ್ಯಾತವೈದ್ಯ ಡಾ.ಎಚ್.ಬಿ.ರಾಜಶೇಖರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ನ್ಯಾಯವಾದಿ ಎಸ್.ಎಂ.ಕುಲಕರ್ಣಿ ಆಗಮಿಸಲಿದ್ದಾರೆ. ಬೆಳಗಾವಿ ವಿಭಾಗದ ನಿವೃತ್ತ ಕಮೀಶ್ನರ್ ಮಹಾಂತೇಶ ಹಿರೇಮಠ(ಐಎಎಸ್.ನಿ) ಇವರು ಪುಸ್ತಕ ಲೋಕಾರೆ್ಣಗೊಳಿಸಲಿದ್ದಾರೆ.
ಕೃತಿಯ ಕುರಿತು ಖ್ಯಾತ ವಾಗ್ಮಿ ಡಾ.ವಿ.ಎಸ್.ಮಾಳಿ ಹಾಗೂ ಲಿಂಗರಾಜ ಕಾಲೇಜಿನ ನಿವೃತ್ತ ಇಂಗ್ಲೀಷ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲೆಪ್ಪನವರಮಠ ಮಾತನಾಡಲಿದ್ದಾರೆ ಎಂದು ಸಂಘಟಕರಾದ ಬಸವರಾಜ ಗಾರ್ಗಿ, ರಾಮಚಂದ್ರ ಕಟ್ಟಿ, ಹಾಗೂ ಡಾ.ಮಹೇಶ ಗುರನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 