ಭಗವಾನ ಮಹಾವೀರರ ಭಕ್ತಿ, ಶ್ರದ್ಧೆ, ಸಂಭ್ರಮದ ಪಲ್ಲಕ್ಕಿ ಉತ್ಸವ
The Palanki Festival of devotion, faith and celebration of Lord Mahavira
ತಾಳಿಕೋಟೆ 30: ಪಟ್ಟಣದಲ್ಲಿ ಜೈನ ಸಮುದಾಯದ ವತಿಯಿಂದ ಭಗವಾನ ಮಹಾವೀರರ ಜಯಂತ್ಯುತ್ಸವವನ್ನು ಭಕ್ತಿ, ಶ್ರದ್ಧೆ, ಸಂಭ್ರಮಗಳಿಂದ ಸೋಮವಾರ ನೆರವೇರಿಸಲಾಯಿತು. ಜಯಂತ್ಯುತ್ಸವ ದ ಪ್ರಯುಕ್ತ ಬೆಳಿಗ್ಗೆ ಮೂಲ ತೀರ್ಥಂಕರ ಭಗವಾನ ಆದಿನಾಥನ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು. ನಂತರ ಬೀಮನ ಭಾವಿಯಲ್ಲಿ ಗಂಗಸ್ಥಳ ಮುಗಿಸಿಕೊಂಡು ವಾದ್ಯ ವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀ ಪಲ್ಲಕ್ಕಿ ಉತ್ಸವ, ಕಳಸ ಹಾಗೂ ಶೋಭಾ ಯಾತ್ರೆ ಜರುಗಿತು.ದೇವಸ್ಥಾನಕ್ಕೆ ಮರಳಿದ ನಂತರ ಭಗವಾನ ತೋರ್ಥಂಕರ ಮಹಾವೀರನ ಭವ್ಯ ಮೂರ್ತಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ತೊಟ್ಟಿಲು, ನಾಮಕರಣ,, ಮಹಾಮಂಗಳಾರಾತಿ ನಂತರ ಪ್ರಸಾದ ವಿತರಣೆ ಮಾಡಲಾಯಿತು. ಉತ್ಸವದಲ್ಲಿ ಸಮಾಜದ ಪ್ರಮುಖರಾದ ವಜ್ರಕುಮಾರ ಪ್ರಥಮಶೆಟ್ಟಿ, ಎಸ್.ಬಿ.ಸುರಪುರ, ಗಂಗಣ್ಣ ಸುರಪುರ, ಎಸ್.ಆರ್.ಹುಬ್ಬಳ್ಳಿ, ಶ್ರೀಪಾಳ ಸಂಗ್ಮಿ, ವಿ.ಎನ್.ಯಾತಗಿರಿ, ಗುಂಡುರಾವ್ ಧನಪಾಲ. ಪ್ರಕಾಶ ಸುರಪುರ, ಸುರೇಶ ದೇವೂರ, ರತ್ನಪ್ಪ ಪ್ರಥಮಶೆಟ್ಟಿ,ನೇಮಿನಾಥ ಧನಪಾಲ, ಪದ್ಮಾವತಿ ಮಹಿಳಾ ಮಂಡಳಿಯ ಸದಸ್ಯರು ಸೆರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 