ಕಾಶಿ ಜಗದ್ಗುರುಗಳಿಂದ ಪಂಢರಪುರದ ವಿಠ್ಠಲನಿಗೆ ಇಷ್ಟಲಿಂಗ ಧಾರಣೆ
The Kashi Jagadguru bestowed the Ishtalinga on Vitthal of Pandharpur.
ಕಾಶಿ ಜಗದ್ಗುರುಗಳಿಂದ ಪಂಢರಪುರದ ವಿಠ್ಠಲನಿಗೆ ಇಷ್ಟಲಿಂಗ ಧಾರಣೆ
ಧಾರವಾಡ, 05 : ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಉತ್ತರ್ರದೇಶದ ಕಾಶಿ ಜ್ಞಾನ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಹಾರಾಷ್ಟ್ರದ ಪ್ರಸಿದ್ಧ ಪಂಢರಪುರ ಕ್ಷೇತ್ರದಲ್ಲಿಯ ವಿಠಲ ರುಕ್ಮಿಣಿ ಮಂದಿರದ ಸಹ ಅಧ್ಯಕ್ಷ ಓಸಾಸಂಸ್ಥಾನದ ಶ್ರೀ ಗಹನಿನಾಥ ಮಹಾರಾಜರ ಭಕ್ತಿ ಸೇವೆಯ ಸಂಕಲ್ಪ ಮತ್ತು ಅವರ ಅಪೇಕ್ಷೆಯಂತೆ ಪಂಢರಪುರ ವಿಠ್ಠಲನ ಕೊರಳಿಗೆ ಇಷ್ಟಲಿಂಗ ಯುಕ್ತವಾದ ಚಿನ್ನದ ಕರಡಗಿ(ಗುಂಡಗಡಿಗಿ)ಯನ್ನು ರವಿವಾರ ಧಾರಣೆ ಮಾಡಿದರು.
ಪ್ರಸ್ತುತ ಆಷಾಢ ಶುದ್ಧ ಏಕಾದಶಿಯ ಪರ್ವಕಾಲದಲ್ಲಿ ಫಂಡರಪುರ ವಿಠ್ಠಲ-ರುಕ್ಮಿಣಿಯರ ವಿಶೇಷ ಆರಾಧನೆ ಜರುಗುತ್ತಿದ್ದು, ಈ ಸಂದರ್ಭದಲ್ಲಿ ಸಮಾವೇಶಗೊಂಡಿದ್ದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಲಕ್ಷಾಂತರ ಭಕ್ತರು ಇದು ಅತ್ಯಂತ ವಿಶೇಷವೆಂದು ಕಣ್ತುಂಬಿಕೊಂಡರು.
ಪೂರ್ಣಕುಂಭ ಸ್ವಾಗತ : ರವಿವಾರ ಪಂಢರಪುರ ಕ್ಷೇತ್ರಕ್ಕೆ ಆಗಮಿಸಿದ್ದ ಕಾಶಿ ಪೀಠದ ಶ್ರೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರನ್ನು ವಿಠ್ಠಲ ಮಂದಿರ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಪ್ರಧಾನ ಅರ್ಚಕರು ಪೂರ್ಣಕುಂಭ ಸ್ವಾಗತ ನೀಡಿ ಗೌರವಿಸಿ ಭಕ್ತಿಯಿಂದ ಗರ್ಭಗೃಹಕ್ಕೆ ಬರಮಾಡಿಕೊಂಡರು. ಚಿನ್ನದ ಕರಡಗಿ(ಗುಂಡಗಡಿಗಿ)ಯ ಸೇವಾಕರ್ತರಾದ ಓಸಾಸಂಸ್ಥಾನದ ಶ್ರೀ ಗಹನಿನಾಥ ಮಹಾರಾಜರನ್ನು ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಗೌರವಿಸಿ ಆಶೀರ್ವದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 