ಹುಬ್ಬಳ್ಳಿಯಲ್ಲಿ ತೇರಾಪಂಥ ಹಸ್ತಕಲಾ ಉತ್ಸವ
Terapantha Handicraft Festival in Hubli
ಹುಬ್ಬಳ್ಳಿ 29: ತೇರಾಪಂಥ ಧರ್ಮ ಸಂಘದ ಇತಿಹಾಸದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ತೇರಾಪಂಥ ಹಸ್ತಕಲಾ ಉತ್ಸವವನ್ನು ನಗರದ ಕೇಶ್ವಾಪುರದ ನೂತನ ವಾಸುಪೂಜ್ಯ ಭವನದಲ್ಲಿ ಆಯೋಜಿಸಲಾಗಿತ್ತು.
ಪ್ರದರ್ಶನದ ಉದ್ಘಾಟನೆಯನ್ನು ಮುಖ್ಯ ಅತಿಥಿಯಾಗಿ ಸಂಸ್ಕಾರ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಮಾಜ ಸೇವಕ ಮಹೇಂದ್ರ ಸಿಂಘಿ ಅವರು ನೆರವೇರಿಸಿ ಮಾತನಾಡಿ, ಇಂತಹ ವಿಶಿಷ್ಟ ಪ್ರದರ್ಶನ ನೋಡುವುದು ನನ್ನ ಭಾಗ್ಯ. ಪೂಜ್ಯ ಮುನಿ ವೀನೀತ್ ಕುಮಾರ್ ಅವರ ಸಾನ್ನಿಧ್ಯದಲ್ಲಿ ಆಯೋಜಿಸಲಾದ ಪ್ರದರ್ಶನವು ಜೈನ ಸಮಾಜದ ಕಲೆ, ಸಾಧನೆ ಮತ್ತು ಸಂಸ್ಕೃತಿಯನ್ನು ಹತ್ತಿರದಿಂದ ತಿಳಿಯುವ ಅವಕಾಶ ನೀಡಿದೆ ಎಂದರು.
ಮುನಿ ವೀನೀತ್ ಕುಮಾರ್ ಅವರು ಮಾತನಾಡಿ, ತೇರಾಪಂಥ ಹಸ್ತಕಲಾ ಪ್ರದರ್ಶನವು ಒಂದು ವಿಶಿಷ್ಟ ಪ್ರಯತ್ನ. ಇದರಲ್ಲಿ ಸಾಧು-ಸಾಧ್ವಿಗಳು ನಿರ್ಮಿಸಿದ ಹಸ್ತಕಲೆ ಮತ್ತು ಚಿತ್ರಕಲೆಯ ಅದ್ಭುತ ಕೃತಿಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಹೇಳಿದರು.ಪ್ರದರ್ಶನದಲ್ಲಿ ಅನೇಕ ಆಕರ್ಷಕ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟವು. ಸಮಾರಂಭದಲ್ಲಿ ಪಾಲ್ಗೊಂಡ ಸಮಾಜ ಬಾಂಧವರು ಕಲೆ, ಆಧ್ಯಾತ್ಮ ಮತ್ತು ಪರಂಪರೆಯ ಸುಂದರ ಸಂಗಮಕ್ಕೆ ಸಾಕ್ಷಿಯಾದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 