“ವಕ್ರತುಂಡ” ಚಲನಚಿತ್ರದ ಟೀಸರ್ ಬಿಡುಗಡೆ
Teaser of the movie “Vakratunda” released
ಲೋಚನ ಕ್ರಿಯೇಶನ್ಸ್ ಅವರ “ವಕ್ರತುಂಡ” ಗ್ಯಾಂಗ್ಸ್ ಆಫ್ ಸುಲ್ತಾನ್ ಕಾಲೋನಿ ಕನ್ನಡ ಚಲನಚಿತ್ರದ ಟೀಸರ್ ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ ಬಿಡುಗಡೆ ಮಾಡಲಾಯಿತು. ಪೀಸ್ ಆಟೋ ಮತ್ತು ಆಟೋ ಚಾಲಕರ ಸಂಘ ಆಯೋಜಿಸಿದ, ಆಟೋ ಡೇ, ಶಂಕರ್ ನಾಗ್ ಅವರ ಜನ್ಮದಿನ, ಡಾ. ವಿಷ್ಣುವರ್ಧನ್ ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿದ ಸಂಭ್ರಮದ ಜೊತೆಗೆ ಟೀಸರ್ ಬಿಡುಗಡೆವನ್ನು ಮಹಿಳಾ ಆಟೋ ಚಾಲಕರು ಹಾಗೂ ಆಟೋ ಚಾಲಕರ ಪ್ರತಿನಿಧಿಗಳು ನೆರವೇರಿಸಿದರು, ಇದು ಜನಸಾಮಾನ್ಯರ ಶಕ್ತಿಯ ಪ್ರತೀಕವಾಗಿದ್ದು ವಕ್ರತುಂಡ ಚಿತ್ರವು ಗಣೇಶ ಚತುರ್ಥಿ, ಸಾಮಾಜಿಕ ಏಕತೆ, ಮತ್ತು ಯುವಜನತೆಯ ಜಾಗೃತಿ ವಿಷಯಗಳನ್ನು ಆಧರಿಸಿ, ಸುಲ್ತಾನ್ ಕಾಲೋನಿಯ ಹಿನ್ನಲೆಯಲ್ಲಿ ಭಾವನಾತ್ಮಕವಾಗಿ ಚಿತ್ರಿತವಾಗಿದೆ. ಇದು ಭಕ್ತಿಯ ಶಕ್ತಿ ಮತ್ತು ನಗರ ಜೀವನದ ಸವಾಲುಗಳನ್ನು ಒಟ್ಟಿಗೆ ತರುವ ವಿಶಿಷ್ಟ ಕಥೆ ಆಗಿದೆ. ಬೆಂಗಳೂರು ಸುತ್ತಮುತ್ತ ಮತ್ತು ಸ್ಟುಡಿಯೋಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಯಲ್ಲದೆ ಸಿಜಿ ತಂತ್ರಗಳನ್ನು ಬಳಸಿ ಐವತ್ತು ದಿನಗಳ ಕಾಲ ತಯಾರಿಸಲಾಗಿದೆ ಎಂದು ನಿರ್ಮಾಪಕ ಲಕ್ಕಿ ಶಂಕರ್ ಹೇಳಿದರು.
ರಂಜಿತ್ ರಾಘವ ಮತ್ತು ನಾಗಮೂರ್ತಿ ಸಾಹಿತ್ಯ ರಚನೆಯ ಮೂರು ಹಾಡುಗಳಿಗೆ ಶಶಾಂಕ್ ಶೇಶಿಗಿರೆ, ನಾಗರಾಜ್ ಸುರ್ಗಾವಿ, ಭೀ ರೀ ಮರಾಯ್ ಹಾಡಿದ್ದಾರೆ. ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲನೇ ವಾರದಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತದೆ ಎಂದು ನಿರ್ದೇಶಕ ಹರೀಶ್ ಕುಂದೂರು ತಿಳಿಸಿದರು.
ತಾರಾಗಣದಲ್ಲಿ ಲಕ್ಕಿ ಶಂಕರ್, ರಚಿತಾ ಮಹಾಲಕ್ಷ್ಮಿ, ಉಮೇಶ್ ದಾವಣಗೆರೆ, ಮೂಗ್ ಸುರೇಶ್, ಉಮೇಶಾನ, ಅಮಿತ್ ರಾವ್, ಆಟೋ ನಾಗರಾಜ್, ಸಂಗಮೇಶ್ ಉಪಾಧ್ಯಾಯ, ಅನುಷಾ, ಮಾಸ್ಟರ್ ಅಥರ್ವ, ಮಾಸ್ಟರ್ ಲೋಚನ್, ಮಾಸ್ಟರ್ ಯಶ್, ಬೆಬಿ ಪ್ರೇಕ್ಷಾ, ಭುವನ ಮೊದಲಾದವರಿದ್ದಾರೆ. ತಾಂತ್ರಿಕ ವರ್ಗದಲ್ಲಿ- ಛಾಯಾಗ್ರಹಣ ಜೈ ಆನಂದ್, ಸಂಕಲನಕುಮಾರ್, ಸಂಗೀತ ಜೆಮ್ಸ್ ಆರ್ಕಿಟೆಕ್ಟ್, ಹಿನ್ನೆಲೆ ಸಂಗೀತ ಅಕ್ಷಯ್ ರಿಷಬ್, ಪಿಆರ್ಓ ನಾಗೇಂದ್ರ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಪ್ರಸಾಧನ ಬಾಷಾ, ಚಿತ್ರಕಥೆ ಜೊತೆಗೆ ಹರೀಶ್ ಕುಂದೂರು ನಿರ್ದೇಶನ ಚಿತ್ರಕ್ಕಿದೆ. ಸಹ-ನಿರ್ಮಾಪಕರು ಉಮೇಶ್ ಬಿ. ಯು. ದಾವಣಗೆರೆ. ಈ ಹಿಂದೆ ನೈಂಟಿ ಕುಡಿ ಪಲ್ಟಿ ಹೊಡಿ, ದೇವರಾಣೆ, ಸಿಗರೇಟ್ ಸೇದ್ಬೇಡಿ. ಜಿಲೇಬಿ ಚಿತ್ರಗಳನ್ನು ನಿರ್ಮಿಸಿದ್ದ ಲಕ್ಕಿ ಶಂಕರ್ ನಿರ್ಮಾಪಕ ಆಗಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 