ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುವ ಶಿಕ್ಷಕ ವೃತ್ತಿ ಪವಿತ್ರ: ನಾವದಗಿ
Teaching is a sacred profession that imparts knowledge to students: Navadagi
ಮುದ್ದೇಬಿಹಾಳ 17: ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುವ ಪವಿತ್ರ ವೃತ್ತಿಯೆ ಶಿಕ್ಷಕ ವೃತ್ತಿ. ಶಿಕ್ಷಕರಾದವರು ನಿವೃತ್ತಿ ಹೊಂದಿದರೂ ಅವರು ಶಿಕ್ಷಕರೆ. ನಿವೃತ್ತಿಯ ನಂತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಪ್ರವೃತ್ತಿ ಬೆಳೆಸಿಕೊಂಡು ನೆಮ್ಮದಿಯ ಜೀವನ ಸಾಗಿಸಬೇಕು ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ, ಹಿರಿಯ ವಕೀಲ ಎಂ.ಎಸ್.ನಾವದಗಿ ಹೇಳಿದರು.
ಪಟ್ಟಣದ ವಿಬಿಸಿ.ಪ್ರೌಢಶಾಲೆಯಲ್ಲಿ ನಿವೃತ್ತಿ ಹೊಂದಿದ ಹೊಕ್ರಾಣಿ ಮತ್ತು ಬಾಗವಾನ ದಂಪತಿಗಳನ್ನು ಸತ್ಕರಿಸಿ ಶನಿವಾರ ಮಾತನಾಡಿದರು.
ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿಗೊಂಡರೂ, ಸಂಸ್ಥೆ ಮತ್ತು ಇತರೆ ಶಿಕ್ಷಕರ ಜತೆ ಸಂಪರ್ಕ ಇಟ್ಟುಕೊಂಡು ಮಾರ್ಗದರ್ಶನ ನೀಡುವಂತೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಹುಕ್ಕೇರಿ ಎಸ್.ಎಸ್.ಎನ್.ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ ಮಾತನಾಡಿ, ಪಠ್ಯದ ಜತೆಗೆ ವಿದ್ಯಾರರ್ಥಿಗಳಿಗೆ ಪ್ರಚಲಿತ ಕಾಲಮಾನ ಘಟ್ಟದ ವಿಷಯ ತಿಳಿಸಿ, ಮಾರ್ಗದರ್ಶನ ಮಾಡಿ ಪ್ರಬುದ್ಧ ನಾಗರಿಕರನ್ನಾಗಿ ಮಾಡಲು ಹೇಳಿದರು. ಶಿಕ್ಷಕರು ಸಮಾಜದ ಅತ್ಯುನ್ನತ ಮೌಲ್ಯ (ವಿದ್ಯಾರ್ಥಿಗಳನ್ನು) ಕಾಪಾಡುವ ರಕ್ಷಕರು ಎಂದರು.
ನಿವೃತ್ತ ಶಿಕ್ಷಕರ ಕುರಿತು ವೀರಣ್ಣ ಚಳಗೇರಿ ಮತ್ತು ಜಿ.ಡಿ.ಮುಲ್ಲಾ, ಶಿಲ್ಪಾ ಜೋಶಿ ಹಾಗು ಜ್ಯೋತಿ ಹನಗಂಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸತ್ಕಾರ ಸ್ವೀಕರಿಸಿ ಎಂ.ಜಿ. ಹೊಕ್ರಾಣಿ ಮತ್ತು ಎಚ್.ಆರ್..ಬಾಗವಾನ ಮಾತನಾಡಿದರು.
ಸತ್ಕಾರ: ಸಂಸ್ಥೆಯ ವತಿಯಿಂದ .ಹೊಕ್ರಾಣಿ ಮತ್ತು ಬಾಗವಾನ ದಂಪತಿಗಳನ್ನು ಸತ್ಕರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ನಿರ್ದೇಶಕರಾದ ರುದ್ರಗೌಡ ಪಾಟೀಲ್, ಮುರಗೆಪ್ಪ ಮೋಟಗಿ, ಪ್ರವೀಣ ನಾಗಠಾಣ, ಅಪ್ಪು ಸಿದ್ಧಾಪುರ, ಸಂಗನಬಸವ ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಬಿ.ಆರ್.ನಾವದಗಿ, ಕಾರ್ಯದರ್ಶಿ ಮಲ್ಲಣ್ಣ ಮೋಟಗಿ, ಮುಖ್ಯ ಶಿಕ್ಷಕರಾದ ರಾಮಚಂದ್ರ, ನಾಯಕ ಮತ್ತು ಜೆ.ಡಿ.ಮುಲ್ಲಾ, ಶಿಕ್ಷಕರು, ನೂರಾರು ವಿದ್ಯಾರ್ಥಿಗಳು ಇದ್ದರು.
ಶಿಕ್ಷಕ ಜೆ.ಡಿ.ಮುಲ್ಲಾ ಸ್ವಾಗತಿಸಿದರು ಶಿಕ್ಷಕಿ ಶೋಭಾ ಹನಗಂಡಿ ನಿರೂಪಿಸಿದರು. ಶಿಕ್ಷಕಿ ಸುಪ್ರಿತಾ ಮಟ್ಟಿಹಾಳ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 