ಶಿಕ್ಷಣ ಸೇವಾರತ್ನ ಪ್ರಶಸ್ತಿಗೆ ಶಿಕ್ಷಕ ಹಿರೇಮನಿ ಆಯ್ಕೆ

ಶಿಕ್ಷಣ ಸೇವಾರತ್ನ ಪ್ರಶಸ್ತಿಗೆ ಶಿಕ್ಷಕ ಹಿರೇಮನಿ ಆಯ್ಕೆ Teacher Hiremani selected for Education Sevaratna Award

   ಯಲಬುರ್ಗಾ 22 : ಶಿಕ್ಷಣದಲ್ಲಿ ತನ್ನದೆ ಆದಂತಹ ಅನೇಕ ಕಾರ್ಯಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಸ.ಹಿ.ಪ್ರಾ.ಶಾಲೆ ಚಿಕ್ಕೋಪ್ಪ ಶಿಕ್ಷಕರಾದ ಮುದಿಯಪ್ಪ ಹಿರೇಮನಿ ಅವರು ಶಿಕ್ಷಣ ಸೇವಾರತ್ನ ಪ್ತಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ಫಿಲಂ ಚೇಂಬರಿ​‍್ರ) ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನಿಸಿ ಡಿ,24 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವದು ಎಂದು ಕಲರ ಪುಲ್ ಸುದ್ದಿ ಕನ್ನಡ ಮಾಸ ಪತ್ರಿಕೆ ಸಂಪಾದಕ ಎಂ ಎಸ್ ರವೀಂದ್ರ ತಿಳಿಸಿದ್ದಾರೆ. ಅಭಿನಂದನೆಗಳು: ವಿದ್ಯಾರ್ಥಿಗಳು ಹಾಗೂ ಪಾಲಕರ ಉತ್ತಮ ಶಿಕ್ಷಕರಾಗಿ ಶಿಕ್ಷಣ ಇಲಾಖೆಯಲ್ಲಿ ಇಂತಹ ಪ್ರಶಸ್ತಿಗೆ ಭಾಜನರಾದ ಶಿಕ್ಷಕರಿಗೆ ಸರಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಅನೇಕ ಶಿಕ್ಷಕವೃಂದ,ಶಿಷ್ಯ ಬಳಗದವರು ಅಭಿನಂದನೆಗಳನ್ನ ಸಲ್ಲಿಸಿದ್ದಾರೆ.