ಶಿಕ್ಷಕ ಬಿ.ಎಲ್‌. ಘಂಟಿ ಅವರಿಗೆ ಸನ್ಮಾನ

ಶಿಕ್ಷಕ ಬಿ.ಎಲ್‌. ಘಂಟಿ ಅವರಿಗೆ ಸನ್ಮಾನ Teacher B.L. Ghanti honored

ರಾಯಬಾಗ 01 : ತಾಲೂಕಿನ ಹಿಡಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆಗೆ ಪ್ರಧಾನ ಗುರುಗಳಾಗಿ ಬಡ್ತಿ ಪಡೆದ ಆದರ್ಶ ಶಿಕ್ಷಕ ಬಿ.ಎಲ್‌. ಘಂಟಿ ಅವರನ್ನು ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನಿಂದ ಹಿಡಕಲ ಗ್ರಾಮದಲ್ಲಿ ಸತ್ಕರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ.ಎಸ್‌. ವಂಟಗೂಡಿ,  ಉಪನ್ಯಾಸಕ ಡಾ. ಜಯವೀರ ಎ.ಕೆ. ಸತ್ಯಪ್ರಭು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಮ್‌. ಪಿ. ಕಂಟಿಕಾರ, ಶಿಕ್ಷಕ ಕಾಮಂತ ಕಂಕನವಾಡಿ, ಶಿಕ್ಷಕಿ ಗಾಯತ್ರಿ, ಹಾಲಪ್ಪ ಕಂಕನವಾಡಿ, ಕಲ್ಮೇಶ ಸತ್ತಿ, ಲಕ್ಷ್ಮಣ ಪಾಟೀಲ, ಹಾಲಸಿದ್ಧ ವಂಟಗೂಡಿ ಇತರರು ಇದ್ದರು.