ತಾಲೂಕಾ ದಂಡಾಧಿಕಾರಿಗಳಿಂದ ಪ್ರವಾಹ ಪರಿಸ್ಥಿತಿ ವೀಕ್ಷಣೆ

ತಾಲೂಕಾ ದಂಡಾಧಿಕಾರಿಗಳಿಂದ ಪ್ರವಾಹ ಪರಿಸ್ಥಿತಿ ವೀಕ್ಷಣೆ Taluka Magistrates observe flood situation

ಮಾಂಜರಿ, 19 ; ನೆರೆಯ ಮಹಾರಾಷ್ಟ್ರ ರಾಜ್ಯದ ಕೂಂಕಣ ಪ್ರದೇಶದಲ್ಲಿ ಬಾರಿ ಮಳೆ ಹೆಚ್ಚಾಗಿದ್ದದರಿಂದ ಚಿಕ್ಕೋಡಿ ಉಪವಿಭಾಗದಲ್ಲಿ ಕೃಷ್ಣಾ. ದೂಧಗಂಗಾ. ವೇದಗಂಗಾ.ನದಿಗಳಲ್ಲಿ ನೀರಿನ ಒಳ ಹರಿವು ಹೆಚ್ಚಿದೆ.ಈ ಹಿನಲ್ಲೆಯಲ್ಲಿ ಮಂಗಳವಾರ ದಿನಾಂಕ 19 ರಂದು  ಮುಂಜಾನೆ  ತಾಲೂಕಿನ ಜನವಾಡ.ಸದಲಗಾ.ಕಲ್ಲೋಳ  ಗ್ರಾಮದ ನದಿ ದಂಡೆಗೆ  ತಾಲೂಕಾ ದಂಡಾಧಿಕಾರಿ  ರಾಜೇಶ ಬುರ್ಲಿ   ಪ್ರವಾಹ  ಪರೀಶೀಲನೆ ನಡೆಸಿದರು  

ಈ ಸಂದಭದಲ್ಲಿ  ತಾಲೂಕಾ ಪಂಚಾಯತ  ಕಾರ್ಯನಿರ್ವಾಹಕ ಅಧಿಕಾರಿ   ಎ.ಎನ ಹುನ್ನೂರ ಸದಲಗಾ ಉಪತಹಸಿಲ್ದಾರ ಪಿ.ಬಿ.ಶಿರಿವಂತ    ಕಂದಾಯ ನೀರೀಕ್ಷಕರಾದ ಆರ ಐ ನಾಯಿಕ ಸದಲಗಾ ಕಂದಾಯ ನೀರೀಕ್ಷಕರಾದ ಎಮ.ಎ ನಾಗರಾಳೆ  ಉಪಸ್ಥಿತರಿದ್ದರು.