ಇಟಗಿ ಗ್ರಾಮದಲ್ಲಿ ನಡೆದ ಸರ್ವೆ ಕಾರ್ಯ : ಚಕ್ಕುಬಂದಿ ಅಳತೆಯಲ್ಲಿ ವ್ಯತ್ಯಾಸ
Survey work conducted in Itagi village: Difference in the measurement of the circle
ಇಟಗಿ ಗ್ರಾಮದಲ್ಲಿ ನಡೆದ ಸರ್ವೆ ಕಾರ್ಯ : ಚಕ್ಕುಬಂದಿ ಅಳತೆಯಲ್ಲಿ ವ್ಯತ್ಯಾಸ
ಕಂಪ್ಲಿ 28 : ತಾಲೂಕಿನ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟಗಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ಸರ್ವೆ ಅಧಿಕಾರಿಗಳು ಮಂಗಳವಾರ ನಡೆಸಿದ ಸರ್ವೆ ವೇಳೆ ನೋಂದಣಿ ಮತ್ತು ಗ್ರಾಮ ಠಾಣೆಗೆ ಸಂಬಂಧಿಸಿದಂತೆ ಚಕ್ಕುಬಂದಿ ಅಳತೆ ವ್ಯತ್ಯಾಸದ ಹಿನ್ನಲೆ ಗ್ರಾಪಂಯ ಮೂಲ ದಾಖಲೆಗಳ ಪ್ರಕಾರ ಅಳತೆ ಸರಿಪಡಿಸುವಂತೆ ಪಂಚನಾಮೆ ಮಾಡಿದ್ದು, ಕೆಲ ಗ್ರಾಮಸ್ಥರು ಸಹಿ ಹಾಕಿದರೆ, ಅರ್ಜಿದಾರರು ಮಾತ್ರ ಪಂಚನಾಮೆಗೆ ಸಹಿ ಹಾಕಲು ನಿರಾಕರಿಸಿರುವುದು ಕಂಡು ಬಂತು. ಇಲ್ಲಿನ ಗ್ರಾಮದಲ್ಲಿರುವ ಆಸ್ತಿ ಸಂಖ್ಯೆ 15050400604000204ರ ಗ್ರಾಮ ಠಾಣ ನಕ್ಷೆಗೆ ಸಂಬಂಧಿಸಿದಂತೆ ಜಾಮೀಯಾ ಮಸ್ಜೀದ್ ಅಧ್ಯಕ್ಷ ಒ.ಪಿ.ದಾದಾಖಲಂದರ್ ಇವರು ಸರ್ವೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಅನ್ವಯದಂತೆ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ, ಸರ್ವೆ ಕಾರ್ಯ ಮಾಡಿ, ತದನಂತರ ನೋಂದಣಿ ಮತ್ತು ಗ್ರಾಮ ಠಾಣಾ ಚಕ್ಕುಬಂದಿಯಲ್ಲಿ ವಿಸ್ತೀರ್ಣ ಹೆಚ್ಚು ಕಮ್ಮಿ ಇರುವುದು ಕಂಡು ಬಂದಿದೆ. ಗ್ರಾಮ ಪಂಚಾಯಿತಿ ಮೂಲ ದಾಖಲೆಗಳ ಪ್ರಕಾರ ಅಳತೆಯು ಪೂರ್ವ-ಪಶ್ಚಿಮ 7.01 ಮೀಟರ್ ಹಾಗೂ ಉತ್ತರ-ದಕ್ಷಿಣಕ್ಕೆ 4.57 ಮೀಟರ್ ವಿಸ್ತೀರ್ಣ ಇರುತ್ತದೆ. ಆದರೆ, ಅರ್ಜಿದಾರರ ನೋಂದಣಿ ಪ್ರಕಾರ ಪೂರ್ವ-ಪಶ್ಚಿಮ 15.24 ಮೀಟರ್ ಹಾಗೂ ಉತ್ತರ-ದಕ್ಷಿಣಕ್ಕೆ 12.192 ಮೀಟರ್ ವಿಸ್ತೀರ್ಣ ಇದೆ. ಅದ್ದರಿಂದ ಗ್ರಾಮ ಪಂಚಾಯತಿ ದೃಢೀಕರಣದ ಅಳತೆಗೆ ಹಾಗೂ ನೋಂದಣಿ ಅಳತೆಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಹೀಗಾಗಿ ಗ್ರಾಪಂಯ ಮೂಲ ದಾಖಲೆಗಳ ಅಳತೆಯಂತೆ ಸರಿಪಡಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದರು. ಅರ್ಜಿದಾರರು ಈ ಪಂಚನಾಮೆಗೆ ಒಪ್ಪಿಗೆ ನೀಡಲಿಲ್ಲ. ಈ ವರದಿಯನ್ನು ಮೇಲಿನ ಅಧಿಕಾರಿಗಳಿಗೆ ಒಪ್ಪಿಸಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಂದಾಯ ನೀರೀಕ್ಷಕ ಜಗದೀಶ ಮಾತನಾಡಿ, ಭೂಮಾಪನ ಇಲಾಖೆಯ ಸೂಪರ್ ವೈಜರ್ ಶಾಂತಮ್ಮ, ಪೊಲೀಸ್ ಠಾಣೆಯ ಪಿಐ ಕೆ.ಬಿ.ವಾಸುಕುಮಾರ, ಪಿಡಿಒ ಹಾಲರಿ್ವ ಶೇಷಗಿರಿ, ಭೂಮಾಪಕ ಇಮ್ರಾನ್, ಪರವಾನಿಗೆ ಭೂಮಾಪಕರಾದ ತಿಪ್ಪೇಸ್ವಾಮಿ, ಪ್ರಭುಸ್ವಾಮಿ, ಗ್ರಾಮಸ್ಥರರಾದ ಐ.ಶರಣಬಸವನಗೌಡ, ಇಟಗಿ ಬಸವರಾಜಗೌಡ, ಈ.ಮಂಜಪ್ಪಗೌಡ, ಅಗೆದಾಳ್ ವಿರೇಶ, ವಿ.ಗೋವಿಂದಪ್ಪ, ಗಾಳೆಪ್ಪ, ಎ.ಶರಣಬಸವ, ತಿಪ್ಪಯ್ಯ ಶೆಟ್ಟಿ, ಹೆಚ್.ಕೆಂಚಪ್ಪ ಸೇರಿದಂತೆ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 