ಸುರೇಶ ಅಮ್ಮಿನಭಾವಿಗೆ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿ

ಸುರೇಶ ಅಮ್ಮಿನಭಾವಿಗೆ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿ Suresh Amminabhavi gets Active Teacher Award

ಉಳ್ಳಾಗಡ್ಡಿ-ಖಾನಾಪೂರ 08: ಹುಕ್ಕೇರಿ ತಾಲೂಕಾ ಮಟ್ಟದ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿಯನ್ನು ಸಮೀಪದ ಹೆಬ್ಬಾಳದ ಡಿ.ಎಲ್‌.ಖೋತ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಹಂಚಿನಾಳ ಗ್ರಾಮದ ಸುರೇಶ ಅಮ್ಮಿನಭಾವಿಯವರಿಗೆ ಲಭಿಸಿದೆ. 

ಅಮ್ಮಿನಭಾವಿಯವರನ್ನು ಹುಕ್ಕೇರಿ ತಾಲೂಕಾ ಶಿರಿಗನ್ನಡ ಶಿಕ್ಷಕರ ವೇದಿಕೆಯ ಪರವಾಗಿ ಸಹ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷರಾದ ಜಿನೇಂದ್ರ ನಿಲಜಿಗಿ, ಜಿಲ್ಲಾ ಶಿರಿಗನ್ನಡ ವೇದಿಕೆಯ ಅಧ್ಯಕ್ಷ ಶಿವಾನಂದ ಗುಂಡಾಳಿ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸುನೀಲ ಖೋತ, ಮುಖ್ಯೋಪಾಧ್ಯಾಯ ಎಮ್‌.ಆಯ್‌.ಯಶವಂತ ಶಿಕ್ಷಕರಾದ ಮಹಾಂತೇಶ ಪಾಟೀಲ, ಸಂತೋಷ ಪರೀಟ, ಅಜಯ ಉದೋಶಿ ಮುಂತಾದವರು ಉಪಸ್ಥಿತರಿದ್ದರು.