ಗಡಿಭಾಗದಲ್ಲಿ ಕಬ್ಬಿನ ಟ್ರ್ಯಾಕ್ಟರ್ಗಳ ಸಂಚಾರ ನಿಯಮಗಳ ಉಲ್ಲಂಘನೆ
Sugarcane tractors violate traffic rules at the border
‘ಅಪಘಾತಕ್ಕೆ ಟ್ರ್ಯಾಕ್ಟರಗಳೇ ಕಾರಣ’ ಹೊಸ ಗಾದೆ
ವರದಿ: ಸಂತೋಷಕುಮಾರ ಕಾಮತ್
ಮಾಂಜರಿ 17: ಸಿಕ್ಕಾಪಟ್ಟೆ ಲೋಡಿಂಗ್, ಯರ್ರಾಬಿರ್ರಿ ರೈಡಿಂಗ್, ಬೇಕಾಬಿಟ್ಟಿ ಪಾಕಿಂರ್ಗ್, ನೋ ಲೋಡ್ ಲಿಮಿಟ್, ನೋ ಸ್ಪೀಡ್ ಲಿಮಿಟ್, ನೋ ಫಿಯರ್, ಓಗ್ಲಿ ಟಾಪ್ ಗೇರ್..! ಪ್ರಸಕ್ತ ಸಾಲಿನ ಕಬ್ಬು ನುರಿಯುವ ಹಂಗಾಮು ಪ್ರಾರಂಭಗೊಂಡಿದ್ದು, ಗಡಿಭಾಗದಲ್ಲಿ ಕಬ್ಬಿನ ಟ್ರ್ಯಾಕ್ಟರ್ಗಳ ಸಂಚಾರ ನಿಯಮಗಳ ಉಲ್ಲಂಘನೆ ಸಹಜವಾಗಿದೆ. ಕಬ್ಬು ಸಾಗಿಸುವ ನೂರಾರು ಟ್ರ್ಯಾಕ್ಟರ್ಗಳು ರಸ್ತೆಯಲ್ಲಿ ಎಗ್ಗಿಲ್ಲದೆ ನುಗ್ಗಿ ಇತರ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಭಯವನ್ನುಂಟು ಮಾಡುತ್ತಿವೆ.
ಅಪಘಾತಕ್ಕೆ ಟ್ರ್ಯಾಕ್ಟರಗಳೇ ಕಾರಣ ಎಂಬ ಹೊಸ ಗಾದೆ ಈ ಭಾಗದಲ್ಲಿ ಚಾಲ್ತಿಯಲ್ಲಿದೆ. ಅಷ್ಟರಮಟ್ಟಿಗೆ ಈ ಭಾಗದಲ್ಲಿ ಟ್ರ್ಯಾಕ್ಟರ್ಗಳು ರಸ್ತೆ ಮೇಲೆ ಯಮಸ್ವರೂಪಿಯಾಗಿ ಸಂಚರಿಸುತ್ತಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಾರೆ.
ರಸ್ತೆ ಮೇಲಿನ ಎಲ್ಲ ವಾಹನಗಳಿಗೂ ವೇಗ ಮತ್ತು ಭಾರದ ವಿಷಯದಲ್ಲಿಒಂದು ಮಿತಿಯಿದೆ. ಆದರೆ ಈ ಟ್ರ್ಯಾಕ್ಟರ್ಗಳಿಗೆ ಅದ್ಯಾವ ಮಿತಿಯೂ ಇಲ್ಲ. ಒಂದು ಟೆಲರ್ಗೆ ಕೇವಲ 6 ಟನ್ ಮತ್ತು ಎರಡು ಟೆಲರ್ಗೆ ಸೇರಿ12 ಟನ್ ಭಾರ ಮಾತ್ರ ಹೇರಬೆಕೆಂಬ ನಿಯಮವಿದ್ದರೂ 25ರಿಂದ 30 ಟನ್ ಕಬ್ಬು ಹೇರುತ್ತಿದ್ದಾರೆ.
ಕೆಲವೊಮ್ಮೆ ದಾಖಲೆಗಾಗಿ ಎರಡು ಟೆಲರ್ನಲ್ಲಿ 40ರಿಂದ 50 ಟನ್ವರೆಗೆ ಕಬ್ಬು ಹಾಕಿ ಚಾಲಕರು ಶರವೇಗದ ಸರದಾರರಂತೆ ಹೆಚ್ಚು ವೇಗವಾಗಿ ಚಲಾಯಿಸಿ ಇನ್ನಿತರ ಸವಾರರ ದಿಕ್ಕು ತಪ್ಪಿಸಿ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ. ಧಾಬಾ ಮತ್ತು ಪಾನ್ ಶಾಪ್ಗಳ ಮುಂದೆ ಬೇಕಾಬಿಟ್ಟಿ ಟ್ರ್ಯಾಕ್ಟರ್ಗಳನ್ನು ನಿಲ್ಲಿಸಿ ಟ್ರಾಫಿಕ್ ಕಾರಣರಾಗುತ್ತಿದ್ದಾರೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಚ್ಚು ಭಾರದ ಕಬ್ಬನ್ನು ತುಂಬುವುದನ್ನು ತಡೆಯಲು ಸಂಚಾರ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗಲಿ ಎನ್ನುವುದು ಸಾರ್ವಜನಿಕರ ಒತ್ತಾಯ. ಒಟ್ಟಿನಲ್ಲಿ ಟ್ರ್ಯಾಕ್ಟರ್ಗಳಲ್ಲಿ ಅತಿಯಾದ ಮತ್ತು ಕಬ್ಬು ತುಂಬಿ ಸಂಚರಿಸುವುದು ಸಾರ್ವಜನಿಕರಲ್ಲಿ ಪ್ರಯಾಣಿಕರಲ್ಲಿ ಆತಂಕ ಮೂಡಿಸಿರುವುದು ಮಾತ್ರ ಸತ್ಯ.!
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 