ವಿದ್ಯಾರ್ಥಿಗಳು ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆ

ವಿದ್ಯಾರ್ಥಿಗಳು ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆ  Students selected for state-level swimming competition

ಧಾರವಾಡ 23: ದಿ. 22ರಂದು ಅಮರಗೋಳ ಎಪಿಎಮ್‌ಸಿ ಹತ್ತಿರವಿರುವ ಶಿವಗಿರಿ ಈಜುಗೊಳದಲ್ಲಿ ನಡೆದ ಧಾರವಾಡ ಜಿಲ್ಲಾ ಮಟ್ಟದ ಈಜು ಸ್ಪ್ಪರ್ಧೆಯಲ್ಲಿ 17 ವರ್ಷ ವಯೋಮಿತಿ ಒಳಗಿನ ವಿಭಾಗದಲ್ಲಿ ಧಾರವಾಡ ಶಹರದ ಶಾಂತಿ ಸದನ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕುಮಾರ. ತರುಣ ಎಸ್ ಮಾದರ್ ಇವನು 50 ಮತ್ತು 100 ಮಿಟರ್ ಬ್ಯಾಕ್ ಸ್ಟೋಕ್ ಸ್ಪ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು 50ಮಿಟರ್ ಬ್ರೆಷ್ಟ ಸ್ಟೋಕ್ ಸ್ಪ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಈಜು ಸ್ಪ್ಪರ್ಧೆಗೆ ಆಯ್ಕೆಯಾಗಿದ್ದಾನೆ.  

14 ವರ್ಷ ವಯೋಮಿತಿ ಒಳಗಿನ ವಿಭಾಗದಲ್ಲಿ ಕುಮಾರ್ ಮೊಹಮ್ಮದ ರಾಹಿಲ್ ಟಿ ನಾಯಕವಾಡಿ 50 ಮಿಟರ್ ಬ್ಯಾಕ್ ಸ್ಟೋಕ್ ಸ್ಪ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾನೆ.  

ಇವರನ್ನು ಧಾರವಾಡ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ ಸಿಂಧಗಿ ಹಾಗೂ ಶಾಂತಿ ಸದನ ಪ್ರೌಢಶಾಲೆಯ ಆಡಳಿತ ಮಂಡಳಿ ವ್ಯವಸ್ಥಾಪಕರಾದ ಸಿಸ್ಟರ್ ಫಾತಿಮಾ ಪರ್ನಾಂಡಿಸ್, ಪ್ರಾಂಶುಪಾಲರಾದ ಸಿಸ್ಟರ ಫಿಲೋಮೆನಾ ಮೆನೆಜಸ್, ದೈಹಿಕ ಶಿಕ್ಷಣ ಶಿಕ್ಷಕರಾದ ಬಸವರಾಜ ಪಟ್ಟಣದವರ ಮತ್ತು ಶಾಲಾ ಶಿಕ್ಷಕ/ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.