ಶಿರುಗುಪ್ಪಿ ಗ್ರಾಮದ ವಿದ್ಯಾರ್ಥಿ ಎಂಬಿಬಿಎಸ್‌ಗೆ ಆಯ್ಕೆ..!

ಶಿರುಗುಪ್ಪಿ ಗ್ರಾಮದ ವಿದ್ಯಾರ್ಥಿ ಎಂಬಿಬಿಎಸ್‌ಗೆ ಆಯ್ಕೆ..! Student from Shiruguppi village selected for MBBS..!

ಕಾಗವಾಡ 20: ತಾಲೂಕಿನ ಶಿರುಗುಪ್ಪಿ ಗ್ರಾಮದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿ ವೇದಾಂತ ಸಚೀನ ಪಾಟೀಲ ಇತನು ಎಂಬಿಬಿಎಸ್ ಕೋರ್ಸ್‌ಗೆ ಆಯ್ಕೆಯಾಗಿದ್ದು, ಶಾಲೆಯ ಕೀರ್ತಿ ಹೆಚ್ಚಿಸಿದ್ದಾನೆ. 

ಇತ್ತಿಚಿಗೆ ಶಾಲೆಯಲ್ಲಿ ವೇದಾಂತ ಪಾಟೀಲ ಇತನನ್ನು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಶಿಕ್ಷಕ ವೃಂದದವರು ಸನ್ಮಾನಿಸಿ, ಸತ್ಕರಿಸಿ ಅಭಿನಂದಿಸಿದ್ದಾರೆ ಮತ್ತು ಆತನ ಉನ್ನತ ಶಿಕ್ಷಣಕ್ಕೆ ಶುಭ ಹಾರೈಸಿದ್ದಾರೆ. 

ಈ ವೇಳೆ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಯು.ಎಸ್‌. ಶೆಟ್ಟಿ, ಪ್ರೌಢಶಾಲಾ ಮುಖ್ಯೋದ್ಯಾಪಕ ಎಸ್‌.ಎಸ್‌. ವಂಡಗೂಡೆ, ಪ್ರಾಥಮಿಕ ಶಾಲಾ ಮುಖ್ಯೋದ್ಯಾಪಕ ಎಸ್‌.ಕೆ. ಮಾಂಜರೆ, ಶಿಕ್ಷಕ ಎಸ್‌.ಡಿ. ಕದಂ ಸೇರಿದಂತೆ ಎಲ್ಲ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.