ಕಥೆ,ಕವನಗಳು ಮನುಷ್ಯ ಬದುಕಿನ ಹಿತವನ್ನು ಬಯಸುತ್ತವೆ. ಬಸವರಾಜ ವ್ಹಿ. ಹಿರೇಮಠ
Stories and poems seek the welfare of human life. Basavaraja V. Hiremath
ಲೋಕದರ್ಶನ ವರದಿ
ಗೋಕಾಕ 17 :ಅಧ್ಯಯನದ ಅನುಭವದಲ್ಲಿ ಹುಟ್ಟಿದ ಸಾಹಿತ್ಯದೊಳಗಿನ ಕಥೆ ಕಾವ್ಯಗಳು ಮನುಷ್ಯ ಬದುಕಿನ ಹಿತವನ್ನು ಬಯಸುತ್ತವೆೆ. ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ಬಸವರಾಜ ವ್ಹಿ. ಹಿರೇಮಠ ಹೇಳಿದರು.
ಜಾನಪದ ಕಲೆ,ಸಾಹಿತ್ಯ ಸಾಂಸ್ಕೃತಿಕ ಕೂಟದ ಗೋಕಾವಿ ಗೆಳೆಯರ ಬಳಗ ನಗರದ ಕೆ.ಎಲ್.ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಕಥೀ ಕಥೀ..ಕಾರಣ ವಿನೂತನ ಸಾಹಿತ್ಯ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಇಂದಿನ ಮಕ್ಕಳು ಮತ್ತು ಯುವ ಜನಾಂಗವನ್ನು ಸಾಹಿತ್ಯದ ಕಡೆಗೆ ಸೆಳೆಯಬೇಕಾದ ಅಗತ್ಯವಿದೆ ಎಂದರು.
ಮಡಿಕೇರಿಯ ಜವಾಹರ ನವೋದಯ ವಿದ್ಯಾಲಯದ ಕನ್ನಡ ಉಪನ್ಯಾಸಕ ಹಾಗೂ ಸಾಹಿತಿ ಮಾರುತಿ ದಾಸನ್ನವರ ಕಥೆ ಮತ್ತು ಕಾವ್ಯದ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಅಕ್ಕಿ ಆದಿಕವಿ ಪಂಪ, ರನ್ನ ಬರೆದ ಹಳಗನ್ನಡ ಸಾಹಿತ್ಯವನ್ನು ಮರು ಓದು ಮತ್ತು ಚಿಂತನೆ ಮಾಡುವ ಕಾರ್ಯಗಳಾಗಲಿ ಎಂದು ಅಭಿಪ್ರಾಯಿಸಿದರು.
ಕಥೆಗಾರ ಸುರೇಶ ಮುದ್ದಾರ. ಕವಿ ಈಶ್ವರ ಮಮದಾಪೂರ, ರಜನಿ ಜೀರಗ್ಯಾಳ ಚಿಂತನೆ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ಭಾರತಿ ಮದಬಾವಿ, ಕೌಜಲಗಿ ಹಿರಿಯ ಸಾಹಿತಿ ಪ್ರಕಾಶ ಕೋಟಿನತೋಟ, ವಾಗ್ಮಿ ರಾಮಚಂದ್ರ ಕಾಕಡೆ, ಬಸವಜ್ಯೋತಿ ಐಟಿಐ ಕಾಲೇಜ ಚೇರಮನ್ ಅಶೋಕ ಲಗಮಪ್ಪಗೋಳ,ಹಿರಿಯ ಸಾಹಿತಿ ಎಸ್ ಆರ್ ನಲವಡೆ, ಕವಿ ಶಿಕ್ಷಕ ಆನಂದ ಮಾಳವದೆ ಉಪಸ್ಥಿತರಿದ್ದರು.
ಸಾಹಿತಿ ಜಯಾನಂದ ಮಾದರ ಪ್ರಾಸ್ತಾವಿಕ ಮಾತನಾಡಿದರು. ವಿಶ್ವದಾಖಲೆ ಕಲಾವಿದ ಜಿ.ಕೆ.ಕಾಡೇಶಕುಮಾರ ಪ್ರಾರ್ಥಿಸಿದರು, ಸಾಹಿತಿ ವಿದ್ಯಾ ರೆಡ್ಡಿ ಸ್ವಾಗತಿಸಿದರು. ಯೋಗ ಶಿಕ್ಷಕ ಆನಂದ ಸೋರಗಾಂವಿ ನಿರೂಪಿಸಿ ವಂದಿಸಿದರು.
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ 