ಹತ್ತರಗಿಯ ರೈತ ಹೋರಾಟದಲ್ಲಿ ಕಲ್ಲು ತೂರಾಟ : 6 ಆರೋಪಿತರ ಬಂಧನ

ಹತ್ತರಗಿಯ ರೈತ ಹೋರಾಟದಲ್ಲಿ ಕಲ್ಲು ತೂರಾಟ : 6 ಆರೋಪಿತರ ಬಂಧನ  Stone pelting during Hataragi farmers' protest: 6 accused arrested

          ಬೆಳಗಾವಿ, 14 : ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿಯ ಟೋಲ್ ನಾಕಾ ಬಳಿಯಲ್ಲಿ ಇತ್ತೀಚೆಗೆ ಕಬ್ಬು ಬೆಳೆಗೆ ಬೆಂಬಲ ಬೆಲೆ ಘೋಷಣೆಯ ಮಾಡುವಂತೆ ರೈತರು ನಡೆಸಿದ ರಾಷ್ಟ್ರೀಯ ಹೆದ್ದಾರಿ ಧರಣಿಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಹೇಳಿದರು. 

                     ಬೆಳಗಾವಿಯ ತಮ್ಮ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಗೌಡ ಸಸಾಲಟ್ಟಿ(40),(ಸಾ: ಹೆಬ್ಬಾಳ ಹುಕ್ಕೇರಿ ತಾಲೂಕು) ಪ್ರಶಾಂತ್ ಮುಗಳಿ(28), (ಸಾ: ಹೆಬ್ಬಾಳ) ವಿನಾಯಕ್ ಕೋಟಿವಾಲಿ(25), (ಸಾ: ಹೆಬ್ಬಾಳ) ಮಲ್ಲಪ್ಪ ಘಟಗಿ(46),(ಉ. ಖಾನಾಪೂರ) ಶಿವಾನಂದ ವಾಣಿ(59), (ಸಾ: ಕೇಸ್ತಿ ಹುಕ್ಕೇರಿ ತಾಲೂಕು) ಸೋಮಯ್ಯ ಹಿರೇಮಠ(46)(ಬಿದ್ರೆವಾಡಿ) ಇವರೇಲ್ಲರೂ ಕಲ್ಲು ತೂರಾಟ ಪ್ರಕರಣದಲ್ಲಿ ಬಂಧಿತ ಆರೋಪಿಗಳಾಗಿದ್ದಾರೆ ಎಂದು ತಿಳಿಸಿದರು.   

                       ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ರೈತರ ಪ್ರತಿಭಟನೆ ವೇಳೆ ಕಲ್ಲು ತೂರಾಟ ಪ್ರಕರಣದಲ್ಲಿ 12 ಜನ ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದರು. ಹತ್ತರಗಿ ಟೋಲ್ ಗೆಟ್‌ನಲ್ಲಿ ಕಲ್ಲು ತೂರಾಟ ನಡೆಸಿದವರು ಯಾರೂ ರೈತರಲ್ಲ. ರೈತರ ಪ್ರತಿಭಟನೆ ಹೆಸರಿನಲ್ಲಿ ಗಲಾಟೆ ಮಾಡಲು ಬಂದಿದ್ದರು ಎಂದರು.  ಕಬ್ಬು ಬೆಳೆಗಾರರ ಹೋರಾಟದ ವೇಳೆ ಕಲ್ಲು ತೂರಾಟ ನಡೆಸಿದ ಕಿಡಗೇಡಿಗಳನ್ನು ಯಮಕನಮರಡಿ ಪೊಲೀಸರು 6 ದುಷ್ಕರ್ಮಿಗಳ ಬಂಧಿಸಿದ್ದಾರೆ. ಕಳೆದ ನ. 7ರಂದು ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆ ವೇಳೆ ನಡೆದಿದ್ದ ಘಟನೆಯಲ್ಲಿ ಪ್ರತಿ ಟನ್ ಕಬ್ಬಿಗೆ 3500 ಕಬ್ಬಿನ ದರ ನಿಗದಿಗಾಗಿ ರೈತರ ಹೋರಾಟ ನಡೆಸಿದರು.  

               ಈ ವೇಳೆ ರೈತರ ವೇಷದಲ್ಲಿ ಬಂದು ಪೊಲೀಸರ ಮೇಲೆ ಹಲ್ಲೆ ನಡೆಸಿ ಕಲ್ಲು ತೂರಿದ್ದ ಕಿಡಗೇಡಿಗಳ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿ ವಿಡಿಯೋ ಆಧರಿಸಿ ಆರು ಜನ ಆರೋಪಿಗಳ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ವಿವರಿಸಿದರು.  ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್‌ಪಿ ಆರ್‌.ಡಿ.ಬಸರಗಿ, ಡಿಎಸ್‌ಪಿ ರವಿ ನಾಯ್ಕ, ಬೆಳಗಾವಿ ಸಿಇಎನ್‌ನ ವಿರೇಶ ದೊಡ್ಡಮನಿ, ಯಕಮನಮರಡಿ ಸಿಪಿಐ ಜಾವೀದ್ ಮುಶಾಪೂರೆ ಹಾಗೂ ಸಿಬ್ಬಂದಿಗಳು ಉಪಸ್ಥಿರಿದ್ದರು.