ರಾಜ್ಯ ಮತ್ತು ರಾಷ್ಟೃ ಪಶಸ್ತಿ ಪುರಸ್ಕೃತೆ ಎಸ್ ಪೂಜಾ ಉತ್ಸವದಲ್ಲಿ ಸನ್ಮಾನ

ರಾಜ್ಯ ಮತ್ತು ರಾಷ್ಟೃ ಪಶಸ್ತಿ ಪುರಸ್ಕೃತೆ ಎಸ್ ಪೂಜಾ ಉತ್ಸವದಲ್ಲಿ ಸನ್ಮಾನ  State and National Awardee S Pooja felicitated at Utsav

ಕಂಪ್ಲಿ 14:  ಪಟ್ಟಣದ ಸಕ್ಕರೆ ಕಾರ್ಖಾನೆಯ ಆವರಣದ ವೀರ ಕಂಪಲಿರಾಯ ವೇದಿಕೆಯಲ್ಲಿ ಕಂಪ್ಲಿ ಉತ್ಸವದ ಹಿನ್ನಲೆ ಹಮ್ಮಿಕೊಂಡಿದ್ದ ಸಾಧಕರ ಸನ್ಮಾನ ಸಮಾರಂಭದಲ್ಲಿ ರಾಷ್ಟೃ ಮತ್ತು ರಾಜ್ಯ ಮಟ್ಟದಲ್ಲಿ ಯೋಗ ಶಿಕ್ಷಣ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 7ನೇತರಗತಿ ವಿದ್ಯಾರ್ಥಿನಿ ಮಾಡುತ್ತಿರುವ ಎಸ್ ಪೂಜಾ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.ನಂತರ ಎಸ್ ಪೂಜಾ ಸನ್ಮಾನ ಸ್ವೀಕರಿಸಿ ಮಾತನಾಡಿ, ತಂದೆ ತಾಯಿ ಹೇಳಿದ ಮಾರ್ಗದರ್ಶನದಲ್ಲಿ ನಡೆಯಿರಿ ಜೊತೆಗೆ  ನಾನು ಮಾಡಿದ ಸಾಧನೆ ಗುರುತಿಸಿ ರಾಜ್ಯ ಪಶಸ್ತಿ ಲಭಿಸಿತ್ತು. ಆದ್ದರಿಂದ ಇಲ್ಲಿನ ಕಂಪ್ಲಿಯಲ್ಲಿ ನಡೆದ ಉತ್ಸವದಲ್ಲಿ ಜಿಲ್ಲಾಡಳಿತ, ಜಿಪಂ, ಕಂಪ್ಲಿ ಕಂದಾಯ ಇಲಾಖೆಯಿಂದ ನಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ಖುಷಿ ತಂದಿದೆ. ಎರಡನೇ ಬಾರಿಯ ಕಂಪ್ಲಿ ಉತ್ಸವು ಹಂಪಿಗಿಂತ ಜೋರಾಗಿ ನಡೆದಿದೆ. ಜನಪ್ರಿಯ ಶಾಸಕ ಜೆ.ಎನ್‌.ಗಣೇಶ ನೇತೃತ್ವದಲ್ಲಿ ಕಂಪ್ಲಿ ಉತ್ಸವ ಜನೋತ್ಸವವಾಗಿ ಮೂಡಿ ಬಂದಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಅಧಿಕಾರಿ ನಾಗರಾಜ,ತಹಶೀಲ್ದಾರ ಮಂಜುನಾಥ  ತಾಪಂ ಇಒ ಆರ್‌.ಕೆ.ಶ್ರೀಕುಮಾರ, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಸೇರಿ ಅನೇಕರಿದ್ದರು  


Sugar Factory Premises Veer Kampliraya Stage Kampli Utsav