ಶ್ರೀಮಠಕ್ಕೆ ಶ್ರೀಪತಿ ಮಜ್ಜಗಿ ಬೇಟಿ

ಶ್ರೀಮಠಕ್ಕೆ ಶ್ರೀಪತಿ ಮಜ್ಜಗಿ ಬೇಟಿ  Sripati Majjagi visits Srimatthi

ಇಂಡಿ 04:  ನಗರದಲ್ಲಿ ನಿರ್ಮಾಣವಾಗುತ್ತಿರುವ ಬಡ ಮಕ್ಕಳ ಉಚಿತ ಅನ್ನಪ್ರಸಾದ ಹಾಗೂ ವಸತಿ ನಿಲಯದ ಕಟ್ಟಡ ಕಾಮಗಾರಿ ಸ್ಥಳಕ್ಕೆ ಚಾಮರಾಜನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಐಎಫ್‌ಎಸ್ ಅಧಿಕಾರಿ ಶ್ರೀಪತಿ ಮಜ್ಜಗಿ ಭೇಟಿ ನೀಡಿ ಗ್ರಾಮೀಣ ಮಟ್ಟದ ಮಕ್ಕಳಿಗಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಕಾರ್ಯವನ್ನು ಹಾಗೂ ಅಭಿನವ ಮುರುಘೇಂದ್ರ ಶಿವಾಚಾರ್ಯರ ಕಾರ್ಯವೈಖರಿಯನ್ನು ಶ್ಲಾಘಿಸಿದರು.ಶಿರಶ್ಯಾಡ ಶ್ರೀಗಳು ಮಜ್ಜಗಿ ಅವರಿಗೆ ಸತ್ಕರಿಸಿ ಆಶೀರ್ವದಿಸಿದರು.ಇದೇ ಸಂದರ್ಭದಲ್ಲಿ ಉದ್ಯಮಿ ಅನಂತ ಜೈನ್, ಬಾಪುಗೌಡ ಹಿಟ್ನಳ್ಳಿ, ಬಾಬುಗೌಡ ಹಂಜಗಿ ಸೇರಿದಂತೆ ಮತ್ತಿತರರು ಇದ್ದರು.