ಇಂದಿನಿಂದ ಶ್ರೀ ತಾರಕೇಶ್ವರ ಜಾತ್ರಾ ಮಹೋತ್ಸವ
Sri Tarakeshwara Jatra festival begins today
ಆಲಮೇಲ 10 : ತಾಲೂಕಿನ ಭೀಮಾ ನದಿಯ ದಂಡೆಯಲ್ಲಿ ಇರುವ ಕಾಶಿಯ ಕಡಿಯ ಬಾಗಿಲೆಂದು ಹೆಸರುವಾಸಿಯಾಗಿರುವ ಸುಕ್ಷೇತ್ರ ತಾರಾಪೂರ ಗ್ರಾಮದಲ್ಲಿ ತಾರಕೇಶ್ವರ ಜಾತ್ರಾ ಮಹೋತ್ಸವ ಹಾಗೂ ಗುರು ಸಂಸ್ಥಾನ ಹಿರೇಮಠದ ಷಬ್ರ ಮುರುಘರಾಜೇಂದ್ರ ಶಿವಾಚಾರ್ಯರ ಪುಣ್ಯಸ್ಮರಣೋತ್ಸವದ ಜರಗುವುದು.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅತೀ ವಿಜೃಂಭಣೆಯಿಂದ ಪರಮಪೂಜ್ಯ ತ್ರಿಕಾಲ ಜ್ಞಾನಿಗಳು ಪೂಜಾ ನಿಷ್ಠುರು ಷಬ್ರ ಗುರುಲಿಂಗ ಶಿವಾಚಾರ್ಯರು ಗುರು ಸಂಸ್ಥಾನ ಹಿರೇಮಠ ತಾರಾಪೂರ ಇವರ ಕೃಪ ಆಶೀರ್ವಾದದಿಂದ ಜಾತ್ರಾ ಮಹೋತ್ಸವ ನಡೆಯುವುದು ದಿನಾಂಕ 11/4/2026 ಶನಿವಾರ ರಂದು ರಾತ್ರಿ 9=00 ಗಂಟೆಗೆ ಊರ ಗುಡಿಯಿಂದ ಪಲ್ಲಕ್ಕಿ ಉತ್ಸವವನ್ನು ಸಕಲ ವಾದ್ಯ ವೈಭವದುಗಳೊಂದಿಗೆ ಮೇಲಿನ ಗುಡಿಗೆ ಹೋಗೋದು. ನಂತರ ದೀಪೋತ್ಸವ ಜರುಗುವುದು ನಂತರ ಅಗ್ನಿ ಪುಟುವು ಮಾಡುವುದುದಿನಾಂಕ 12/4/2026 ರವಿವಾರ ರಂದು ಬೆಳಗ್ಗೆ 7=00 ಗಂಟೆಗೆ ತಾರಕೇಶ್ವರ ದೇವರ ರುದ್ರಭಿಷೇಕ ನಡೆಯುವುದು ನಂತರ ಬೆಳಗ್ಗೆ 10=00 ಗಂಟಿಗೆ ದೇವರ ಪಲ್ಲಕ್ಕಿಯು ಗಂಗಸ್ಥಳ ಮಾಡಿಕೊಂಡು ಪುರವಂತರೊಂದಿಗೆ ಸುಮಂಗಲಿಯರ ಕಳಸ ದೊಂದಿಗೆ ಸಕಲ ವಾದ್ಯ ವೈಭವಗಳೊಂದಿಗೆ.
ಗ್ರಾಮದಲ್ಲಿ ಪಲ್ಯಕ್ಕೆ ಮೆರವಣಿಗೆ ನಡೆಯುವುದು.ನಂತರ ಮಧ್ಯಾಹ್ನ 12=00 ಗಂಟೆಗೆ ಅಗ್ನಿ ಪ್ರವೇಶ ನಡೆಯುವುದು ತದ ನಂತರ ಬಂದಂತ ಭಕ್ತಾದಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಇರುವುದುಅದೇ ರಾತ್ರಿ 8=00 ಗಂಟೆಗೆ ತನುವಿನ ಬಿಂದಿಗೆ ಒಂದಿಗೆ ಹೇಳಿಕೆಗಳನ್ನು ನಡೆಯುವುದುತದ ನಂತರ ರಾತ್ರಿ 9=00 ಗಂಟೆಗೆ ಚಿತ್ರ ವಿಚಿತ್ರ ಮದ್ದು ಸುಡುವುದು ಹಾಗೂ ದಿನಾಂಕ 12/ 4/2026 ರವಿವಾರ ಹಾಗೂ 14/4/2026 ಮಂಗಳವಾರ ರಂದು ರಾತ್ರಿ 10 =30 ನಿಮಿಷಕ್ಕೆ ದಾವಲಮಲಿಕ ನದಾಪ ತಡವಲಗಾ ತಾಲೂಕ ಇಂಡಿ ಇವರ ಭವ್ಯ ರಂಗ ಸಜ್ಜಕೆಯಲ್ಲಿ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯ ಸಂಘ ಜೇವರ್ಗಿ ಇವರಿಂದ ಪ್ರಥಮ ಪ್ರವೇಶ ಮುತ್ತಿನಂತ ಅತ್ತಿಗೆ ಎಂಬ ಸುಂದರ ಸಾಮಾಜಿಕ ನಾಟಕ ಜರುಗುವುದುಹಾಗೂ ದಿನಾಂಕ 14/4/2026 ಮಂಗಳವಾರ ರಂದು ದ್ವಿತೀಯ ಪ್ರವೇಶ ಕುಡುಕ ಕಲ್ಯಾ ಸಿಡಕ ಮಲ್ಲಿ ಎಂಬ ಸುಂದರ ಸಾಮಾಜಿಕ ನಾಟಕ ಜರುಗುವುದು ಎಂದು ತಾರಕೇಶ್ವರ ದೇವಾಲಯ ಅಭಿವೃದ್ಧಿ ಸೇವಾ ಸಮಿತಿಯ ಅಧ್ಯಕ್ಷರಾದ ಶರಣಗೌಡ ಗುರುಬಸಪ್ಪ ಗೌಡ ಬಿರಾದಾರ ಹಾಗೂ ಸಮಿತಿಯ ಸದಸ್ಯರು ತಿಳಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 