ತಾರಾಪೂರ ಗ್ರಾಮದಲ್ಲಿ ಶ್ರೀ ತಾರಕೇಶ್ವರ ಜಾತ್ರಾ ಮಹೋತ್ಸವ
Sri Tarakeshwara Jatra Mahotsav in Tarapur village
ಆಲಮೇಲ 12: ತಾಲ್ಲೂಕಿನ ಭೀಮಾ ನದಿಯ ದಂಡೆಯಲ್ಲಿ ಇರುವ ಕಾಶಿಯ ಕಡಿಯ ಬಾಗಿಲೆಂದು ಹೆಸರುವಾಸಿಯಾಗಿರು ಸುಕ್ಷೇತ್ರ ತಾರಾಪೂರ ಗ್ರಾಮದಲ್ಲಿ ದಿನಾಂಕ 12/3/2026 ರವಿವಾರ ರಂದು.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ತಾರಕೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು.ಬೆಳಿಗ್ಗೆ 7=00 ಗಂಟೆಗೆ ಶ್ರೀ ಷ ಬ್ರ ಗುರುಲಿಂಗ ಶಿವಾಚಾರ್ಯರು ಶ್ರೀ ಗುರು ಸಂಸ್ಥಾನ ಹಿರೇಮಠ ತಾರಾಪೂರ ಇವರಿಂದ ಶ್ರೀ ತಾರಕೇಶ್ವರ ದೇವರ ಲಿಂಗಕ್ಕೆ ರುದ್ರ ಅಭಿಷೇಕ ಬಿಲ್ವಾರ್ಚನೆ ನಡೆಯಿತು.ಬೆಳಿಗ್ಗೆ 8=00 ಗಂಟೆಗೆ ಶ್ರೀ ತಾರಕೇಶ್ವರ ದೇವರ ಪಲ್ಲಕ್ಕಿಯು ಗಂಗಸ್ಥಳ ಮಾಡಿಕೊಂಡು.
ಪುರವಂತರೊಂದಿಗೆ ಸುಮಂಗಲಿಯರಿಂದ ಕಳಸ ದೊಂದಿಗೆ ಸಕಲ ವಾದ್ಯ ವೈಭವದುಗಳೊಂದಿಗೆ ಮೇಲಿನ ಗುಡಿಯಿಂದ ಪಲ್ಲಕ್ಕಿ ಮೆರವಣಿಗೆಯನ್ನು ಪ್ರಮುಖ ಬೀದಿಗಳ ಮೂಲಕ ಶ್ರೀ ತಾರಕೇಶ್ವರ ದೇವರ ಗುಡಿಗೆ ತಲುಪಿತ್ತು.ನಂತರ ಮಧ್ಯಾಹ್ನ 12=00 ಗಂಟೆಗೆ ಶ್ರೀ ತಾರಕೇಶ್ವರ ದೇವರ ಪಲ್ಲಕ್ಕಿಯೊಂದಿಗೆ ಅಗ್ನಿ ಪ್ರವೇಶ ಮಾಡಲಾಯಿತು.ನಂತರ ಜಾತ್ರೆಗೆ ಬಂದಂತ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಯಿತು. ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಊರಿನ ಹಿರಿಯರು ಮಹಿಳೆಯರು ಯುವಕರು ಹಾಗೂ ಶ್ರೀ ತಾರಕೇಶ್ವರ ದೇವಾಲಯ ಅಭಿವೃದ್ಧಿ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದರು
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 