ಕಂಪ್ಲಿ ಪಟ್ಟಣದ ಶ್ರೀ ಅಮೃತಶಿಲಾ ರಾಮಚಂದ್ರ ದೇವಸ್ಥಾನದಲ್ಲಿ ಸಂಭ್ರಮದಿಂದ ಶ್ರೀರಾಮನವಮಿ ಆಚರಣೆ : ಕಿರು ರಥೋತ್ಸವ
Sri Ramanavami celebrated with fervor at Sri Amrutashila Ramachandra Temple in Kampli town: Short ch
ಲೋಕದರ್ಶನ ವರದಿ
ಕಂಪ್ಲಿ 28: ಪುರಾಣದ ಕಾಲದಿಂದಲೂ ಮಾರ್ಯಾದ ಪುರುಷೋತ್ತಮನೆಂದೇ ಖ್ಯಾತಿಯನ್ನು ಗಳಿಸಿರುವ ಏಕಪತ್ನಿ ವೃತಸ್ಥರಾದ ಶ್ರಿರಾಮದೇವರ ಶ್ರೀ ರಾಮನವಮಿಯನ್ನು ಪಟ್ಟಣದಲ್ಲಿ ಶ್ರೀ ಮೋಹನದಾಸರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಅಮೃತಶಿಲಾ ರಾಮಚಂದ್ರ ದೇವಸ್ಥಾನದಲ್ಲಿ ಗುರರಾಜ ಸೇವಾ ಮಂಡಳಿ ನೇತೃತ್ವದಲ್ಲಿ ಪುರೋಹಿತರು,ಬ್ರಾಹ್ಮಣ ಸಮಾಜದವರು ವಿಜೃಂಭಣೆಯಿಂದ ಶ್ರೀರಾಮ ನವಮಿಯನ್ನು ಇಂದು ಸಡಗರ, ಸಂಭ್ರಮ,ಶ್ರದ್ದಾ, ಭಕ್ತಿಯಿಂದ ಆಚರಿಸಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಸುಮಾರು ಶತಮಾನಕ್ಕೂ ಅಧಿಕ ಹಳೆಯಾದಾದ ಅಮೃತಶಿಲಾ ಶ್ರೀರಾಮಚಂದ್ರ ದೇವಸ್ಥಾನದಲ್ಲಿ 121ನೇ ಸ್ರೀರಾಮನವಮಿ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ಅಮೃತಶಿಲಾ ಮೂರ್ತಿಗಳಿಗೆ ವಿವಿಧ ಅಭಿಷೇಕ ಹಾಗೂ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ನಂತರ ಅಮೃತಶಿಲಾ ಮೂರ್ತಿಗಳನ್ನು ವಿವಿಧ ವಸ್ತ್ರ, ಹೂಗಳಿಂದ ಅಲಂಕರಿಸಿದ್ದರು. ಶ್ರೀರಾಮ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಪ್ರತಿದಿನ ಸಂಜೆ ಮ.ಶಾ.ಸಂ.ವಿದ್ವಾನ್ ಶ್ರೀಪಾದಾಚಾರ್ಯ ಜಾಲಿಹಾಳ್ ಗದಗ ಇವರಿಂದ ಶ್ರಿರಾಮಾಯಣ ಪ್ರವಚನ ಕಾರ್ಯಕ್ರಮವು ಜರುಗಿತು.
ಯುಗಾದಿಯಿಂದ ಶ್ರೀರಾಮನವಮಿಯವರೆಗೆ ಪ್ರತಿನಿತ್ಯ ಸಚ್ಛಾಸ್ತ್ರಗಳ ಪಾರಾಯಣ ಹಾಗೂ ಪ್ರತಿದಿನ ಸಂಜೆ ಶ್ರಿರಾಮದೇವರ ಪಲ್ಲಕ್ಕಿ ಉತ್ಸವಾದಿಗಳು ಜರುಗಿದವು. ಇಂದು ಮಹಾಮಂಗಳಾರತಿಯ ನಂತರ ದೇವಸ್ಥಾನದ ಪ್ರಾಂಗಣದಲ್ಲಿ ಸ್ವಾಮಿಯ ಕಿರು ರಥೋತ್ಸವವು ಜರುಗಿತು. ಪುರುಷರು,ಮಹಿಳೆಯರು ರತವನ್ನು ಎಳೆಯುವ ಮೂಲಕ ಶ್ರೀರಾಮ ನವಮಿಯನ್ನು ಶ್ರದ್ದಾ,ಭಕ್ತಿಯಿಂದ ಆಚರಿಸಿದರು. ನಂತರ ಅನ್ನಸಂತರೆ್ಣ ಜರುಗಿತು. ಸಂಜೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸ್ವಾಮಿಯ ಪಲ್ಲಕ್ಕಿ ಉತ್ಸವವು ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದಲ್ಲಿ ದಿಗ್ಗಾವಿ ಗುರುರುರಾಜಾಚಾರ್ಯ ಮತ್ತು ಗುರುರಾಜ ಸೇವಾ ಮಂಡಳಿಯ ಪದಾಧಿಕಾರಿಗಲು, ಬ್ರಾಹ್ಮಣ ಸಮಾಜದ ಹಿರಿಯರು, ಮಹಿಳೆಯರು,ಮಕ್ಕಳು ಸುತ್ತಮುತ್ತಲ ಗ್ರಾಮಗಳ ಸಮಾಜದವರು ಭಾಗವಹಿಸಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 