ಶ್ರೀ ಸಾಯಿ ಮಂದಿರದಲ್ಲಿ ಶ್ರೀರಾಮನವಮಿ ಸಂಭ್ರಮ
Sri Ram Navami celebrations at Sri Sai Temple
ಲೋಕದರ್ಶನ ವರದಿ
ಶಿಗ್ಗಾವಿ 27 : ಶ್ರೀಸಾಯಿ ಮಂದಿರದಲ್ಲಿ ಶ್ರೀರಾಮನವಮಿ ನಿಮಿತ್ಯ ಶ್ರೀರಾಮ, ಸಾಯಿಬಾಬಾ ಮೂರ್ತಿಗಳಿಗೆ ವಿಶೇಷವಾದ ಫಲ ಪುಷ್ಪಗಳ ಅಲಂಕಾರದೊಂದಿಗೆ ಪೂಜೆ ಸಲ್ಲಿಸಿ ಶ್ರೀಸಾಯಿ ಬಾಬಾ ಮೂರ್ತಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಅಭಿಷೇಕ ಮಾಡಲಾಯಿತು. ಮಧ್ಯಾಹ್ನ ಶ್ರೀರಾಮನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ವಿಶೇಷ ಪೂಜೆಗಳೊಂದಿಗೆ ತೊಟ್ಟಿಲೋತ್ಸವ ಸಾಯಿ ನಗರದಲ್ಲಿ ನೇರವೇರಿಸಲಾಯಿತು. ನಂತರ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಶಶಿಧರ್ ಸುರಗಿಮಠ, ಬಸವರಾಜ ಹೆಸರೂರ, ವಿಶ್ವನಾಥ್ ವಾಲಿ ಶೆಟ್ಟರ್, ವಿ ಎಸ್ ಪಾಟೀಲ್. ಮಂಜುನಾಥ್ ಬಾಣದ, ನಾಗಯ್ಯ ಹಿರೇಮಠ, ಉಮೇಶ್ ಗೌಳಿ, ಕಲ್ಲಪ್ಪ ಹೆಸರೂರ, ತೋಟಯ್ಯ ಕುಂಬಾರಗೆರಿಮಠ, ಗುರುನಾಥ ಅಣ್ಣಿಗೇರಿ,ನವೀನ್ ಸಾಸನೂರ್, ವಿಶ್ವನಾಥ ಗಾಣಿಗೇರ್, ಪ್ರಸಾದ್ ಹಿರೇಮಠ ಸೇರಿದಂತೆ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 