ಕಂಪ್ಲಿ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ರಾಮನವಮಿ ಆಚರಣೆ
Sri Ram Navami Celebrations at Kampli Shirdi Sai Baba Temple
ಲೋಕದರ್ಶನ ವರದಿ
ಕಂಪ್ಲಿ 27: ಪಟ್ಟಣದ ಸನಾಪೇಟೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀರಾಮ ನವಮಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಶ್ರೀರಾಮ ನವಮಿ ಅಂಗವಾಗಿ ಶ್ರೀಸಾಯಿಬಾಬಾ ಅವರ ಅಮೃತಶಿಲಾ ಮೂರ್ತಿಗೆ ಬೆಳಿಗ್ಗೆ ಕಾಕಡ ಆರತಿ,ಪಂಚಾಮೃತ ಅಭಿಷೇಕ, ಅಲಂಕಾರ,ಅಷ್ಟೋತ್ತರ ಹಾಗೂ ಮಹಾಮಂಗಳಾರತಿ ಮಾಡಲಾಯಿತು.
ನಂತರ ಪುರೋಹಿತರಾದ ರಾಜೇಂದ್ರ ಜ್ಯೋಷಿಯವರ ನೇತೃತ್ವದಲ್ಲಿ ಶ್ರೀರಾಮಚಂದ್ರ,ಲಕ್ಷ್ಮಣ ಹಾಗೂ ಸೀತೆಯ ಭಾವಚಿತ್ರಕ್ಕೆ ವಿವಿಧ ಅಭಿಷೇಕಗಳನ್ನು ಮಾಡಿ, ವಿವಿಧ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಿದರು.
ನಂತರ ಮಂದಿರಕ್ಕೆ ಆಗಮಿಸಿದ್ದ ಸಕಲ ಸದ್ಭಕ್ತರಿಗೆ ಶ್ರೀರಾಮ ನವಮಿಯ ಪ್ರಯುಕ್ತವಾಗಿ ತೀರ್ಥ, ಕೋಸಂಬರಿ, ಪಾನಕ ಹಾಗೂ ಸಿಹಿ ಪ್ರಸಾದವನ್ನು ವಿತರಿಸಿದರು. ಸಂಜೆ ಸಾಯಿಬಾಬಾ ಭಾವಚಿತ್ರಕ್ಕೆ ಚಂದನಾ ಸೇವೆ, ಸಂಧ್ಯಾರತಿ, ಪಲ್ಲಕ್ಕಿ ಸೇವೆ, ರಾತ್ರಿ ಶೇಷ ಆರತಿ ಕಾಯರಕ್ರಮಗಳು ಜರುಗಿದವು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 