ದಿ. 11ರಂದು ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ

ದಿ. 11ರಂದು ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ Sri Mallikarjuna Devara Jatra Mahotsav on the 11th


ಬ್ಯಾಡಗಿ 06: ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕ ಆಣೂರ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಹಾಗೂ ಸರ್ವ ಶರಣರ ಸಮ್ಮೇಳನ ಜರುಗುವುದು. ದಿ. 11ರಂದು ಬುಧವಾರ ಬೆಳಗ್ಗೆ 9 ಗಂಟೆಗೆ ಪುಷ್ಪ ರಥೋತ್ಸವ ಬಹು ವಿಜೃಂಭಣೆಯಿಂದ ಜರುಗುವುದು. 12ರಂದು ಗುರುವಾರ ಬೆಳಗ್ಗೆ 9 ಗಂಟೆಗೆ ಮಹಾ ರಥೋತ್ಸವ ಡೊಳ್ಳು ಬಾಜಾ ಭಜಂತ್ರಿ ಸಕಲ ವಾದ್ಯವೈಭವಗಳೊಂದಿಗೆ ಅತೀ ವಿಜೃಂಭಣೆಯಿಂದ ಜರುಗುವುದು.  

ಅದೇ ದಿವಸ ಗುರುವಾರ ಮುಂಜಾನೆ 11-00 ಗಂಟೆಗೆ  ಸ್ಥಳ: ಶ್ರೀ ಮಲ್ಲಿಕಾರ್ಜುನ ರಂಗಮಂದಿರ, ಆಣೂರ ಶ್ರೀಮುದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ತರಳುಬಾಳು ಜಗದ್ಗುರು ಶ್ರೀ 1108 ಶ್ರೀ ಡಾ: ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಬೃಹನದಮಠ, ಸಿರಿಗೆರೆ. ಹಾಗೂ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಪಟ್ಟಾಧ್ಯಕ್ಷರು, ಶ್ರೀ ತರಳಬಾಳು ಜಗದ್ಗುರು ಶಾಖಾಮಠ, ಸಾಣೇಹಳ್ಳಿ. ಸ್ವಾಮಿಜಿಗಳಿಂದ ಆಸೀರವಚನ ಕಾರ್ಯಕ್ರಮ ಜರಗುವುದು ಎಂದು ಗ್ರಾಮದ ಸದಭಕ್ತರಾದ ಮೃತುಂಜಯ್ಯ ಕೊಪ್ಪದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.