ಮಾ.26 ರಿಂದ ಶ್ರೀ ಗುತ್ತಿಲಿಂಗೇಶ್ವರ ಜಾತ್ರಾ ಮಹೋತ್ಸವ

ಮಾ.26 ರಿಂದ ಶ್ರೀ ಗುತ್ತಿಲಿಂಗೇಶ್ವರ ಜಾತ್ರಾ ಮಹೋತ್ಸವ Sri Guttilingeshwara Jatra Festival from March 26th

ಲೋಕದರ್ಶನ ವರದಿ 

ತಾಂಬಾ 25: ಚಿಕ್ಕರೂಗಿ ಗ್ರಾಮದ ಶ್ರೀ ಗುತ್ತಿಲಿಂಗೇಶ್ವರ ಜಾತ್ರಾ ಮಹೋತ್ಸವವು ಮಾ.26 ರಿಂದ ಮಾ.28ರವರೆಗೆ ಅಡವಿಲಿಂಗ ಮಹಾರಾಜರ ನೇತೃತ್ವದಲ್ಲಿ ಜರುಗಲಿದೆ. 

ಮಾ.26ರಂದು ಸಂಜೆ 7ಗಂಟೆಗೆ ಸದ್ಗುರು ಡಾ.ಅಮೃತಾನಂದ ಮಹಾಸ್ವಾಮಿಗಳು ವಿಶೇಷ ಪ್ರವಚನ ನೀಡಲಿದ್ದಾರೆ. ದಿ.27ರಂದು ಬೆಳಿಗ್ಗೆ ಪಾದಗಟ್ಟಿ ಪೂಜೆ 8ಗಂಟೆಗೆ ರಂಗೋಲಿ ಸ್ಪರ್ದೆ ಏರ್ಪಡಿಸಲಾಗಿದೆ. ಹಾಗೂ ಸಂಜೆ ದೀಪೋತ್ಸವ ಕಾರ್ಯಕ್ರಮವನ್ನು ವೀರಗೋಟದ ಶ್ರೀ ಅಡವಿಲಿಂಗ ಮಹಾರಾಜರ ಅಮೃತ ಹಸ್ತದಿಂದ ನೇರವೆರಲಿದೆ. ನಂತರ ಅಗ್ನಿ ಪುಟೋತ್ಸವವು ಪುರವಂತರಾದ ಈರಣ್ಣ ಗೋರನಾಳ ಅವರು ನೇರವೆರಿಸುವರು ನಂತರ ರಂಗುರಂಗಿನ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ದಿ.28ರಂದು ಬೆಳಿಗ್ಗೆ 6ಗಂಟೆಗೆ ಸಕಲ ವಾದ್ಯ ವೈಭವಗಳೊಂದಿಗೆ ಪುರವಂತರನ್ನೋಳಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವವು ಜರುಗುವದು. ನಂತರ 10.30ಕ್ಕೆ ಅಗ್ನಿ ಶಮನ ಕಾರ್ಯಕ್ರಮ ಜರುಗುವದು. ನಂತರ ದೇವರಿಗೆ ಹೂವು ಮುಡಿಸಲಾಗುವದು ನಂತರ ಬಂದ ಭಕ್ತರಿಗೆ ನಿರಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. 12.30ಕ್ಕೆ ಬಾರ ಎತ್ತುವದು, ಸಂಜೆ 4ಗಂಟೆಗೆ ಹೊಂದಾಣಿಕೆ ಕುಸ್ತಿ ಜರುಗುವದು. ರಾತ್ರಿ 10ಗಂಟೆಗೆ ಬನ್ನೆಟ್ಟಿ ಗ್ರಾಮದ ಶ್ರೀ ಬಸವೇಶ್ವರ ನಾಟ್ಯ ಸಂಘದವರಿಂದ ಗ್ರಾಮ ಪಂಚಾಯಿತಿ ಗಂಗವ್ವ ಎಂಬ ಸುಂದರ ಸಾಮಾಜಿಕ ನಾಟಕ ಜರುಗುವದು.  

ಎಲ್ಲ ಗ್ರಾಮದಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಪ್ರವಸಚ ಸವೇದು ನಿರಂತರ ಪ್ರಸಾದದ ವ್ಯವಸ್ತೆಯಲ್ಲಿ ಪಾಲ್ಗೊಂಡು ದೇವರ ಸೇವೆ ಮಾಡಬೇಕೆಂದು ಅಕ್ಷಯಕುಮಾರ ಸಿಂದಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.